/newsfirstlive-kannada/media/post_attachments/wp-content/uploads/2025/07/BhargaviLLB.jpg)
ಮನಮಿಡಿಯುವ ಕಥೆಗಳ ಮೂಲಕ ಜನಪ್ರಿಯವಾಗಿರೋ ವಾಹಿನಿ ಕಲರ್ಸ್ ಕನ್ನಡ. ನಂದ ಗೋಕುಲ ಹಾಗೂ ಭಾರ್ಗವಿ LLB ಮಹಾಸಂಗಮದಲ್ಲಿ ಪ್ರೇಮ ಪಯಣದ್ದೇ ಸದ್ದು.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ದೆಹಲಿಯಾತ್ರೆ.. ಮತ್ತೆ ಕಾಂಗ್ರೆಸ್ನಲ್ಲಿ ಬಿಸಿಬಿಸಿ ಟಾಕ್..!
ಭಾರ್ಗವಿ ತನಗೆ ಗೊತ್ತಿಲ್ಲದ ಹಾಗೇ ಪಾರ್ಥನನ್ನ ಲವ್ ಮಾಡ್ತಿದ್ದಾಳೆ. ಜೆಪಿ ಪಾಟೀಲ್ ಮಗ ಅರ್ಜುನ್ ಪಾಟೀಲ್ ಈ ಪಾರ್ಥ ಅನ್ನೋದು ಗೊತ್ತಿಲ್ಲ. ಅತ್ತ ಅರ್ಜುನ್ ಅಪ್ಪನ ಮಾತಿಗೆ ಕಟ್ಟುಬಿದ್ದು ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ತಿರ್ತಾನೆ.
ಹಂಗೂ ಹಿಂಗೂ ನಿಶ್ಚಿತಾರ್ಥ ಕ್ಯಾನ್ಸಲ್ ಆಯ್ತು. ಇತ್ತ ಇವರ ಇಬ್ಬರ ಪ್ರೀತಿಗೆ ಜಯ ಸಿಗೋ ಮುನ್ಸೂಚನೆ ಸಿಕ್ಕಿದೆ. ಈ ಮಹಾ ತಿರುವಿನಲ್ಲಿ ಅತಿಥಿ ಪಾತ್ರ ಮಾಡಿದ್ದು ಸೀತಾರಾಮ ಖ್ಯಾತಿಯ ನಟ ಅಶೋಕ್ ಶರ್ಮಾ.
ಇನ್ನು, ಭಾರ್ಗವಿ-ಪಾರ್ಥನ ಪ್ರೀತಿಗೆ ಸೇತುವೆ ಕಟ್ಟಿದ್ದು ವಲ್ಲಭ. ನಂದಗೋಕುಲದ ವಲ್ಲಭ ಅಣ್ಣನ ಮದುವೆ ಮುಗಿಸಿ, ಸೀದಾ ಸ್ನೇಹಿತೆಗೆ ಸಾಥ್ ಕೊಡೋಕೆ ಬಂದಿದ್ರು. ಆ ಕೌತುಕದ ಸಂಚಿಕೆಗಳು ವೀಕ್ಷಕರಿಗೆ ಮುದ ನೀಡಿವೆ. ಇವರು ಕಟ್ಟಿದ ಪ್ರೀತಿ ಸೇತುವೆ ಭಾರ್ಗವಿ-ಪಾರ್ಥನನ್ನ ಹತ್ತಿರ ಸೇರಿಸುತ್ತಾ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ