/newsfirstlive-kannada/media/post_attachments/wp-content/uploads/2025/06/Brahmagantu-Serial.jpg)
ಬ್ರಹ್ಮಗಂಟು ಧಾರಾವಾಹಿಗೆ ಸಖತ್ ರೆಸ್ಪಾನ್ಸ್ ಸಿಗ್ತಿದೆ. ಸ್ಟೋರಿ ಕೂಡ ಇಂಟ್ರಸ್ಟಿಂಗ್ ಆಗಿ ಮೂಡಿಬರ್ತಿದ್ದು, ಟಿಆರ್ಪಿ ರೇಟಿಂಗ್ ಹೆಚ್ಚಿದೆ. ಕಳೆದ ಕೆಲ ತಿಂಗಳಿನಿಂದ ಟಾಪ್ ಹತ್ತು ಧಾರಾವಾಹಿಗಳ ಲಿಸ್ಟ್ನಲ್ಲಿ ಧಾರಾವಾಹಿ ಸ್ಥಾನ ಪಡೆದಿದ್ದು, ನಿಧಾನವಾಗಿ ವೀಕ್ಷಕರ ಮನಸ್ಸು ಗೆಲ್ಲುತ್ತಿದೆ ಬ್ರಹ್ಮಗಂಟು.
ಇದನ್ನೂ ಓದಿ: ಸಿನಿಮಾಗೆ ಹಾಡಲು ಆಫರ್ ಕೊಟ್ಟವರು ಲಹರಿನಾ ಫಿನಾಲೆಗೆ ಸೆಲೆಕ್ಟ್ ಮಾಡಿಲ್ಲ ಏಕೆ? ವೀಕ್ಷಕರು ಬೇಸರ!
ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡಿರೋ ದೀಪಾನ ಮದುವೆ ಆಗಿದ್ದ ಚಿರು ಮನಸ್ಸಲ್ಲಿ ದೀಪಾ ಸ್ಥಾನ ಪಡೆದಿದ್ದಾಳೆ. ಇಬ್ಬರ ನಡುವೆ ಪ್ರೀತಿ ಶುರುವಾಗಿದೆ. ಇನ್ನೇನು ಈ ಜೋಡಿ ಹಕ್ಕಿಗಳು ಹಾರಾಡೋ ಟೈಮ್ನಲ್ಲೇ ಅತ್ತಿಗೆ ಸೌಂದರ್ಯ ಜೋಡಿನ ದೂರ ಮಾಡೋ ಪ್ಲ್ಯಾನ್ ಮಾಡ್ತಾಳೆ. ಅದು ಕೂಡ ಸಂಜನಾ ಜೊತೆ ಮದುವೆ ಮಾಡಿಸೋಕೆ ತಯಾರಾಗಿದ್ದಾಳೆ. ದೀಪಾಳನ್ನ ದಾಳವಾಗಿ ಬಳಿಸಿಕೊಂಡಿದ್ದಾಳೆ ಸೌಂದರ್ಯ.
ಇತ್ತ ನರಸಿಂಹನ ಬಾಳಲ್ಲಿ ಆಟ ಆಡ ಚಿರುನ ಮದುವೆ ಆಗೋಕೆ ರೆಡಿಯಾಗಿದ್ದಾಳೆ ಸಂಜನಾ. ಆದ್ರೇ ಪಂಟಪದಲ್ಲಿ ನಡೆಯೋದೇ ಬೇರೆ. ಈ ಮದುವೆಗೆ ಚಿರು ಬಿಲ್ಕುಲ್ ಒಪ್ಪೋದಿಲ್ಲ. ಆದ್ರೂ ದೀಪಾ ಮಾತಿಗೆ ಬೆಲೆಕೊಟ್ಟು ಒಲ್ಲದ ಮನಸ್ಸಿಂದ ತಾಳಿ ಕಟ್ಟೋಕೆ ಒಪ್ಪಿಕೊಳ್ತಾನೆ. ಇಲ್ಲೇ ಇರೋದು ನೋಡಿ ಟ್ವಿಸ್ಟ್. ತಂಗಿ ಬಾಳನ್ನ ಹಾಳಾಗೋಕೆ ಬಿಡ್ತಾನ ನರಸಿಂಹ? ನೋ ಚಾನ್ಸ್.
ಏಕಾಏಕಿ ಚಿರು ಕೈಯಲ್ಲಿದ್ದ ತಾಳಿಯನ್ನು ಸಂಜನಾ ಕೊರಳಿಗೆ ಕಟ್ಟೇ ಬಿಡ್ತಾನೆ ನರಸಿಂಹ. ಅಂತೂ ಇಂತೂ ನರಸಿಂಹ, ಸಂಜನಾ ಮದುವೆ ಆಗೋಗಿದೆ. ಇಷ್ಟು ದಿನ ಈ ಕ್ಷಣಕ್ಕಾಗಿ ಈ ಜೋಡಿ ಫ್ಯಾನ್ಸ್ ಕಾಯ್ತಾ ಇದ್ರು. ಇನ್ಮುಂದೆ ಅವರಿಗೆಲ್ಲಾ ಪ್ರತಿ ದಿನ ಹಬ್ಬ. ಈ ಜೋಡಿ ಕಿತ್ತಾಟ, ಮುದ್ದಾಟ ಇನ್ಮುಂದೆ ವೀಕ್ಷಕರಿಗೆ ಪಕ್ಕಾ ಇಷ್ಟ ಆಗುತ್ತೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ