ಚಿರು ಮತ್ತೊಂದು ಮದ್ವೆಯಲ್ಲಿ ರೋಚಕ ಟ್ವಿಸ್ಟ್​; ಸಂಜನಾ ಕೊರಳಿಗೆ ತಾಳಿ ಕಟ್ಟೇಬಿಟ್ಟ ಹೀರೋ

author-image
Veena Gangani
Updated On
ಚಿರು ಮತ್ತೊಂದು ಮದ್ವೆಯಲ್ಲಿ ರೋಚಕ ಟ್ವಿಸ್ಟ್​; ಸಂಜನಾ ಕೊರಳಿಗೆ ತಾಳಿ ಕಟ್ಟೇಬಿಟ್ಟ ಹೀರೋ
Advertisment
  • ಕೊನೆಗೂ ಚಿರು ಮನಸ್ಸಲ್ಲಿ ದೀಪಾ ಸ್ಥಾನ ಪಡೆದುಕೊಂಡಿದ್ದಾಳೆ
  • ಬ್ರಹ್ಮಗಂಟು ಧಾರಾವಾಹಿಗೆ ವೀಕ್ಷಕರಿಂದ ಸಿಗ್ತಿದೆ ಸಖತ್​ ರೆಸ್ಪಾನ್ಸ್
  • ಇನ್ಮುಂದೆ ಬ್ರಹ್ಮಗಂಟು ಸೀರಿಯಲ್ ವೀಕ್ಷಕರಿಗೆ ಹಬ್ಬವೋ ಹಬ್ಬ

ಬ್ರಹ್ಮಗಂಟು ಧಾರಾವಾಹಿಗೆ ಸಖತ್​ ರೆಸ್ಪಾನ್ಸ್​ ಸಿಗ್ತಿದೆ. ಸ್ಟೋರಿ ಕೂಡ ಇಂಟ್ರಸ್ಟಿಂಗ್​ ಆಗಿ ಮೂಡಿಬರ್ತಿದ್ದು, ಟಿಆರ್​ಪಿ ರೇಟಿಂಗ್​ ಹೆಚ್ಚಿದೆ. ಕಳೆದ ಕೆಲ ತಿಂಗಳಿನಿಂದ ಟಾಪ್​ ಹತ್ತು ಧಾರಾವಾಹಿಗಳ ಲಿಸ್ಟ್​ನಲ್ಲಿ ಧಾರಾವಾಹಿ ಸ್ಥಾನ ಪಡೆದಿದ್ದು, ನಿಧಾನವಾಗಿ ವೀಕ್ಷಕರ ಮನಸ್ಸು ಗೆಲ್ಲುತ್ತಿದೆ ಬ್ರಹ್ಮಗಂಟು.

ಇದನ್ನೂ ಓದಿ: ಸಿನಿಮಾಗೆ ಹಾಡಲು ಆಫರ್ ಕೊಟ್ಟವರು ಲಹರಿನಾ ಫಿನಾಲೆಗೆ ಸೆಲೆಕ್ಟ್ ಮಾಡಿಲ್ಲ ಏಕೆ? ವೀಕ್ಷಕರು ಬೇಸರ!

publive-image

ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡಿರೋ ದೀಪಾನ ಮದುವೆ ಆಗಿದ್ದ ಚಿರು ಮನಸ್ಸಲ್ಲಿ ದೀಪಾ ಸ್ಥಾನ ಪಡೆದಿದ್ದಾಳೆ. ಇಬ್ಬರ ನಡುವೆ ಪ್ರೀತಿ ಶುರುವಾಗಿದೆ. ಇನ್ನೇನು ಈ ಜೋಡಿ ಹಕ್ಕಿಗಳು ಹಾರಾಡೋ ಟೈಮ್​ನಲ್ಲೇ ಅತ್ತಿಗೆ ಸೌಂದರ್ಯ ಜೋಡಿನ ದೂರ ಮಾಡೋ ಪ್ಲ್ಯಾನ್​ ಮಾಡ್ತಾಳೆ. ಅದು ಕೂಡ ಸಂಜನಾ ಜೊತೆ ಮದುವೆ ಮಾಡಿಸೋಕೆ ತಯಾರಾಗಿದ್ದಾಳೆ. ದೀಪಾಳನ್ನ ದಾಳವಾಗಿ ಬಳಿಸಿಕೊಂಡಿದ್ದಾಳೆ ಸೌಂದರ್ಯ.

publive-image

ಇತ್ತ ನರಸಿಂಹನ ಬಾಳಲ್ಲಿ ಆಟ ಆಡ ಚಿರುನ ಮದುವೆ ಆಗೋಕೆ ರೆಡಿಯಾಗಿದ್ದಾಳೆ ಸಂಜನಾ. ಆದ್ರೇ ಪಂಟಪದಲ್ಲಿ ನಡೆಯೋದೇ ಬೇರೆ. ಈ ಮದುವೆಗೆ ಚಿರು ಬಿಲ್​ಕುಲ್​ ಒಪ್ಪೋದಿಲ್ಲ. ಆದ್ರೂ ದೀಪಾ ಮಾತಿಗೆ ಬೆಲೆಕೊಟ್ಟು ಒಲ್ಲದ ಮನಸ್ಸಿಂದ ತಾಳಿ ಕಟ್ಟೋಕೆ ಒಪ್ಪಿಕೊಳ್ತಾನೆ. ಇಲ್ಲೇ ಇರೋದು ನೋಡಿ ಟ್ವಿಸ್ಟ್​. ತಂಗಿ ಬಾಳನ್ನ ಹಾಳಾಗೋಕೆ ಬಿಡ್ತಾನ ನರಸಿಂಹ? ನೋ ಚಾನ್ಸ್.

publive-image

ಏಕಾಏಕಿ ಚಿರು ಕೈಯಲ್ಲಿದ್ದ ತಾಳಿಯನ್ನು ಸಂಜನಾ ಕೊರಳಿಗೆ ಕಟ್ಟೇ ಬಿಡ್ತಾನೆ ನರಸಿಂಹ. ಅಂತೂ ಇಂತೂ ನರಸಿಂಹ, ಸಂಜನಾ ಮದುವೆ ಆಗೋಗಿದೆ. ಇಷ್ಟು ದಿನ ಈ ಕ್ಷಣಕ್ಕಾಗಿ ಈ ಜೋಡಿ ಫ್ಯಾನ್ಸ್​ ಕಾಯ್ತಾ ಇದ್ರು. ಇನ್ಮುಂದೆ ಅವರಿಗೆಲ್ಲಾ ಪ್ರತಿ ದಿನ ಹಬ್ಬ. ಈ ಜೋಡಿ ಕಿತ್ತಾಟ, ಮುದ್ದಾಟ ಇನ್ಮುಂದೆ ವೀಕ್ಷಕರಿಗೆ ಪಕ್ಕಾ ಇಷ್ಟ ಆಗುತ್ತೇ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment