ಅಮೃತಧಾರೆ ಸೀರಿಯಲ್​ನಲ್ಲಿ​ ಟ್ವಿಸ್ಟ್​; ಗೌತಮ್ ಬದುಕಲ್ಲಿ ಮಧುರಾನ ಜೊತೆಯಾಗಿಸ್ತಾಳಾ ಭೂಮಿಕಾ!

author-image
Veena Gangani
Updated On
ಅಮೃತಧಾರೆ ಸೀರಿಯಲ್​ನಲ್ಲಿ​ ಟ್ವಿಸ್ಟ್​; ಗೌತಮ್ ಬದುಕಲ್ಲಿ ಮಧುರಾನ ಜೊತೆಯಾಗಿಸ್ತಾಳಾ ಭೂಮಿಕಾ!
Advertisment
  • ಮಹಾ ತಿರುವಿನಲ್ಲಿ ಕನ್ನಡದ ಅಮೃತಧಾರೆ ಸೀರಿಯಲ್​
  • ಅತ್ತೆ ಶಕುಂತಲಾ ತಂತ್ರದ ದಾಳವಾಗಿದ್ದಾಳೆ ಭೂಮಿಕಾ
  • ಅಮೃತಧಾರೆ ಸೀರಿಯಲ್​ನಲ್ಲಿ​ ಹೊಸ ನಟಿಯ ಆಗಮನ

ಭೂಮಿಕಾ ಗೌತಮ್​ ಕೋಳಿ ಜಗಳ ಜೊತೆ ಶುರುವಾಗಿದ್ದ ಅಮೃತಧಾರೆ ಮಹಾ ತಿರುವು ಪಡೆದುಕೊಳ್ತಿದೆ. ಈ ಜೋಡಿಗೆ ಸಿಕ್ಕಾಪಟ್ಟೆ ಫ್ಯಾನ್ಸ್​ ಇದ್ದಾರೆ. ಈ ನಡುವೆ ಹೊಸ ಹೀರೋಯಿನ್​ ಕೂಡ ಎಂಟ್ರಿ ಪಡೆದುಕೊಂಡಿದ್ದಾರೆ. ಏನಾಗ್ತಿದೆ ಭೂಮಿಕಾ ಲೈಫ್​ನಲ್ಲಿ?

ಇದನ್ನೂ ಓದಿ: ಅನಂತ್ ಅಂಬಾನಿ ವಂತಾರಾದಲ್ಲಿ ಪ್ರಧಾನಿ ಮೋದಿ ಹುಲಿ, ಸಿಂಹದ ಮರಿಗಳ ಜೊತೆ ಆಟ; ವಿಡಿಯೋ ಇಲ್ಲಿದೆ!

publive-image

ವೀಕ್ಷಕರಿಗೆ ತುಂಬಾ ಹತ್ತಿರವಾಗಿರೋ ಪಾತ್ರ ಭೂಮಿಕಾ. ವೀಕ್ಷಕರ ನಿರೀಕ್ಷೆ ಹುಸಿ ಮಾಡದಂತೆ ಅದ್ಭುತವಾಗಿ ಪಾತ್ರವನ್ನ ಛಾಯಾ ಸಿಂಗ್​ ನಿರ್ವಹಿಸ್ತಿದ್ದಾರೆ. ಗೌತಮ್​ ದಿವಾನ್​ ಪಾತ್ರದಲ್ಲಿ ಹೊಸ ಇನ್ನಿಂಗ್ಸ್​ ಶುರು ಮಾಡಿದ ರಾಜೇಶ್​ ನಟರಂಗ ಅವರನ್ನು ಜನ ಒಪ್ಪಿ ಅಪ್ಪಿದ್ದಾರೆ. ಕರ್ನಾಟಕಕ್ಕೆ ಮೋಡಿ ಮಾಡಿರೋ ಜೋಡಿ ಇದು. ಇವರಿಬ್ಬರ ನಡುವೆ ಹೊಸ ಪಾತ್ರ ಎಂಟ್ರಿಯಾಗಿದೆ. ಮಧುರಾ ಎಂಬ ಪಾತ್ರದಲ್ಲಿ ರಾಧಾ ಮಿಸ್​ ಖ್ಯಾತಿಯ ನಟಿ ಶ್ವೇತಾ ಪ್ರಸಾದ್​ ಎಂಟ್ರಿ ಕೊಟ್ಟಿದ್ದಾರೆ.

publive-image

ಹೌದು, ಮನಸ್ತಾಪದ ಜೊತೆಗೆ ಶುರುವಾದ ಭೂಮಿಕಾ ಗೌತಮ್​ ದಾಂಪತ್ಯ, ನಂತರ ದಿನಗಳಲ್ಲಿ ಇಬ್ಬರ ನಡುವೆ ಗಾಢವಾದ ಪ್ರೀತಿ ಮೊಳಕೆಯೊಡೆಯುತ್ತೆ. ಪ್ರೀತಿಯ ಸಂಕೇತವಾಗಿ ಭೂಮಿಕಾ ಪ್ರೆಗ್ನೆಂಟ್​ ಆಗ್ತಾರೆ. ಆದ್ರೇ ಅತ್ತೆ ಶಕುಂತಲಾ ಕುತಂತ್ರಕ್ಕೆ ಭೂಮಿಕಾ ಮಗು ಬಲಿಯಾಗುತ್ತೆ. ಈ ನಡುವೆ ಹೊಸ ಪ್ಲ್ಯಾನ್​ ಮಾಡಿರೋ ಶಕುಂತಲಾ, ಭೂಮಿಗೆ ಇನ್ಮುಂದೆ ಮಕ್ಕಳಾಗಲ್ಲ ಅಂತ ಡಾಕ್ಟರ್​ ಹತ್ತಿ ಸುಳ್ಳು ಹೇಳಿಸಿದ್ದಾಳೆ. ಅತ್ತೆ ಮಾತು ನಂಬಿದ ಭೂಮಿ ಗಂಡನಿಗೆ ಇನ್ನೊಂದು ಮದುವೆ ಮಾಡಿಸೋಕೆ ರೆಡಿಯಾಗಿದ್ದಾಳೆ. ಗೌತಮ್​ಗೆ ಹುಡುಕಿರೋ ಹುಡುಗಿಯೇ ಈ ಮಧುರಾ.

publive-image

ಮಧುರಾ ಪಾತ್ರದ ಎಂಟ್ರಿಗೆ ವೀಕ್ಷಕರು ಬೇಸರ ಹೋರ ಹಾಕ್ತಿದ್ದಾರೆ. ರಾಧಾ ಮಿಸ್​ ನೀವು ಅಮೃತಧಾರೆಗೆ ಎಂಟ್ರಿ ಕೊಟ್ಟಿರೋದು ತುಂಬಾ ಖುಷಿ ಆಯ್ತು. ಆದರೆ ನಮ್ಮ ಭೂಮಿ-ಗೌತಮ್​ ಮಧ್ಯ ಬರಬೇಡಿ. ಇಬ್ಬರನ್ನೂ ಮಿಸ್​ ಮಾಡದೇ ಒಂದು ಮಾಡಿ. ವಿಲನ್​ ಆಗ್ಬೇಡಿ, ಚನ್ನಾಗಿದ್ದ ಸ್ಟೋರಿನ ಹಾಳು ಮಾಡ್ಬೇಡಿ ಡೈರೆಕ್ಟ್ರೇ ಅಂತ ಸೋಷಿಯಲ್​ ಮೀಡಿಯಾದಲ್ಲಿ ಬೇಸರದ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ.

ಇದು ಗೌತಮ್​ ಹಾಗೂ ಭೂಮಿನ ವೀಕ್ಷಕರು ಎಷ್ಟು ಹಚ್ಕೊಂಡಿದ್ದಾರೆ ಅನ್ನೋದಕ್ಕೆ ಸಾಕ್ಷಿ. ಆದರೆ ಡೊಂಟ್​ ವರಿ ಭೂಮಿ ಗೌತಮ್​ ಬೇರೆ ಬೇರೆ ಆಗೋದಿಲ್ಲ. ರಾಧಾ ಮಿಸ್ ನಿಮ್ಮ ನಿರೀಕ್ಷೆಯನ್ನ ಹುಸಿ ಮಾಡಲ್ಲ. ಖಂಡಿತ ಊಹೆಗೂ ಮೀರಿದ ಸಂಚಿಕೆಗಳು ಪ್ರಸಾರವಾಗಲಿವೆ. ಸದ್ಯ ಮಧುರಾ-ಗೌತಮ್ ಮುಖಾಮುಖಿಯಾಗಿದ್ದಾರೆ. ಭೂಮಿ ಕಣ್ಣೀರ ನಡುವೆ ಇಬ್ಬರನ್ನೂ ಒಂದು ಮಾಡೋ ಪ್ರಯತ್ನ ಮಾಡ್ತಿದ್ದಾಳೆ. ಎಲ್ಲಾ ಗೊತ್ತಿದ್ದು ಮಧುರಾ ಗೌತಮ್​ನ ಮದುವೆ ಆಗೋಕೆ ಒಪ್ಪಿಕೊಂಡಿದ್ದಾಳಾ? ಗೌತಮ್​ ಮರು ಮದುವೆಗೆ ಸಮ್ಮತಿಸ್ತಾನಾ? ತಂತ್ರ ಕುತಂತ್ರಗಳು ವರ್ಕೌಟ್​ ಆಗುತ್ತಾ? ಈ ಎಲ್ಲಾ ಕೂತುಹಲದ ಅಂಶಗಳನ್ನ ತಿಳಿಯೋಕೆ ಅಮೃತಧಾರೆ ನೋಡಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment