/newsfirstlive-kannada/media/post_attachments/wp-content/uploads/2025/03/bhramma5.jpg)
ಟಿಆರ್ಪಿನಲ್ಲಿ ಬ್ರಹ್ಮಗಂಟು ಸೀರಿಯಲ್ ಸಖತ್ ಸೌಂಡ್ ಮಾಡುತ್ತಿದೆ. ದೀಪಾ ರೆಬಲ್ ಆಗಿರೋದು ವರ್ಕೌಟ್ ಆಗ್ತಿದೆ. ಸೌಂದರ್ಯ ಸೇರು ಅಂದ್ರೇ ದೀಪಾ ಸವಾ ಸೇರು ಅಂತಿದ್ದಾಳೆ.
ಅಲ್ಲದೇ ಓರಗಿತ್ತಿಯರ ಕಾದಾಟ ಕಿಕ್ ಕೊಡ್ತಿದೆ. ಕಳೆದ ಕೆಲವಾರಗಳಿಂದ ಟಾಪ್ ಹತ್ತು ಧಾರಾವಾಹಿಗಳ ಲಿಸ್ಟ್ನಲ್ಲಿ ಬ್ರಹ್ಮಗಂಟು ಖಾಯಂ ಸ್ಥಾನ ಪಡೆದಿರೋದೇ ಸಾಕ್ಷಿ.
ಇದನ್ನೂ ಓದಿ: ನೇಹಾ ಗೌಡ ತಮ್ಮ ಮುದ್ದಾದ ಮಗಳಿಗೆ ಶಾರದ ಅಂತಾ ಹೆಸರು ಇಟ್ಟಿದ್ದೇಕೆ; ಗುಟ್ಟು ಬಿಚ್ಚಿಟ್ಟ ನಟಿಯ ತಂದೆ
ದೀಪಾ-ಚಿರು ನಿಧಾನವಾಗಿ ಹತ್ತಿರ ಆಗ್ತಿದ್ದಾರೆ. ಇವ್ರಷ್ಟೇ ಫೇಮಸ್ ಆಗಿರೋ ಜೋಡಿ ಸಂಜನಾ-ನರಸಿಂಹ. ಇವರಿಬ್ಬರ ಕೋಳಿ ಜಗಳಕ್ಕೆನೇ ಸಪರೇಟ್ ಫ್ಯಾನ್ ಬೇಸ್ ಇದೆ.
ಸದ್ಯ ಸಂಜನಾ ಕಿಡ್ನಾಪ್ ಆಗಿದ್ದಾಳೆ. ನಾಯಕಿನ ಕಾಪಾಡೋಕೆ ಹೀರೋ ಗತ್ತಲ್ಲೇ ನರಸಿಂಹ ಎಂಟ್ರಿ ಕೊಟ್ಟಿದ್ದಾನೆ. ಬಾಮೈದಿನಿಗೆ ಸಪೋರ್ಟ್ ಮಾಡೋಕೆ ಭಾವ ಚಿರು ಕೂಡ ರಗಡ್ ಆಗಿ ಅಡ್ಡಾಗೆ ಕಾಲಿಟ್ಟಿದ್ದಾನೆ.
ಬ್ರಹ್ಮಗಂಟು ಸೀರಿಯಲ್ನಲ್ಲಿ ಜಬರ್ದಸ್ತ್ ಫೈಟ್ ಸೀನ್ ನೋಡಿ ವೀಕ್ಷಕರು ಫುಲ್ ಥ್ರೀಲ್ ಆಗಿದ್ದಾರೆ. ಇನ್ನೂ, ಪ್ರೀತಿ ಹೆಸರಲ್ಲಿ ಸಂಜನಾ ನರಸಿಂಹನಿಗೆ ಕಾಲ್ ಮಾಡ್ತಾ ಇರೋದು ದೀಪಾಗೆ ಗೊತ್ತಾಗಿದೆ. ಅಣ್ಣನಿಗೆ ಎಲ್ಲಾ ಹೇಳ್ತಿನಿ ಅಂತ ದೀಪಾ ಹೇಳೋ ದೃಶ್ಯದ ಸಂಚಿಕೆಯನ್ನು ಮಿಸ್ ಮಾಡಿದೆ ನೋಡಲೇಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ