ಹೊಸ ಟ್ವಿಸ್ಟ್ ಅಂಡ್ ಟರ್ನ್ ಮೂಲಕ ವೀಕ್ಷಕರ ರಂಜಿಸುತ್ತಿದೆ
ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ ಈ ವಿಡಿಯೋ
ಇಂಡಸ್ಟ್ರಿಗೆ ಒಬ್ಬ ಅದ್ಭುತ 'ಅಭಿನೇತ್ರಿ' ಸಿಕ್ಕಿದ್ದಾಳೆ ಎಂದ ಫ್ಯಾನ್ಸ್
ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ತನ್ನದೇಯಾದ ಅಭಿಮಾನಿಗಳನ್ನು ಗಳಿಸಿಕೊಂಡಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ಬಾರಮ್ಮ ಧಾರಾವಾಹಿ ವೀಕ್ಷಕರ ಪ್ರೀತಿ, ಪ್ರೋತ್ಸಾಹವನ್ನು ಗಳಿಸಿಕೊಂಡು ಮುನ್ನುಗ್ಗುತ್ತಿದೆ. ದಿನ ಕಳೆದಂತೆ ರೋಚಕ ತಿರುವನ್ನು ಪಡೆದುಕೊಳ್ಳುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ.
ಇದನ್ನೂ ಓದಿ: ‘13 ವರ್ಷದ ಹಿಂದೆಯೇ ಸತ್ತ ನನ್ನ ಗಂಡನಿಂದ ಗರ್ಭಿಣಿಯಾದೆ’- ಮಹಿಳೆ ಶಾಕಿಂಗ್ ಹೇಳಿಕೆ
ಈಗಂತೂ ಲಕ್ಷ್ಮೀ ಬಾರಮ್ಮ ಸೀರಿಯಲ್ ಕಥೆಯನ್ನು ಬಹಳ ರೋಚಕವಾಗಿ ತೆರೆಗೆ ತರುತ್ತಿದ್ದಾರೆ. ಅದರಂತೆ ಒಂದು ವಾರದಿಂದ ನಡೆಯುತ್ತಿರೋ ಎಪಿಸೋಡ್ಗೆ ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಕಥೆಗೆ ಬರುವುದಾದರೆ, ಕಾವೇರಿಯ ಅಸಲಿ ಮುಖವಾಡ ಕಳಚಲೆಂದು ಬೆಟ್ಟದ ತುದಿಯಲ್ಲಿ ಮಂಟಪ ಹಾಕಿಸಿದ್ದಳು ಕೀರ್ತಿ. ಅದಕ್ಕಾಗಿ ಕಾವೇರಿಯನ್ನು ಡೋಲು ಬಡಿಸುತ್ತಲೇ ಅಲ್ಲಿಗೆ ಕರೆಸಿಕೊಂಡಿದ್ದಳು.
ಅದೇ ಸಮಯದಲ್ಲಿ ಕಾವೇರಿ ಹಾಗೂ ಕೀರ್ತಿ ನಡುವೆ ಮಾತಿನ ಚಕಮಕಿ ನಡೆದಿದೆ. ಆ ವೇಳೆ ಕೀರ್ತಿ ಮುಂದೆ ಕಾವೇರಿ ಎಲ್ಲ ಸತ್ಯವನ್ನು ಹೇಳಿದ್ದಾಳೆ. ಬೆನ್ನಲ್ಲೇ ಕಾವೇರಿ ಕೀರ್ತಿಯನ್ನು ಹೇಗಾದರೂ ಮಾಡಿ ಸಾಯಿಸಬೇಕು ಅಂತ ಪ್ಲಾನ್ ಮಾಡಿ, ಬೆಟ್ಟದಿಂದ ಕೆಳಗಡೆ ತಳ್ಳಿದ್ದಾಳೆ. ಆಗ ಕೀರ್ತಿ ಸಾಕಷ್ಟು ಬಾರಿ ಕಾಪಾಡಿ ಕಾವೇರಿ ಆಂಟಿ ಅಂತ ಬೇಡಿಕೊಂಡಳು. ನನ್ನ ಮಗನನ್ನು ನನ್ನಿಂದ ದೂರ ಮಾಡ್ತಿದ್ದೆ ಅಲ್ವಾ ಅಂತ ಕಾವೇರಿಯು ಕೀರ್ತಿಗೆ ತಿರುಗೇಟು ಕೊಟ್ಟು, ಬೆಟ್ಟದ ಮೇಲಿಂದ ಕೆಳಗಡೆ ಬೀಳುವಂತೆ ಮಾಡಿದಳು. ಇದೇ ಎಪಿಸೋಡ್ ಅನ್ನು ನೋಡಿದ ವೀಕ್ಷಕರು ಸಖತ್ ಥ್ರಿಲ್ ಆಗಿದ್ದರು.
ಇದನ್ನೂ ಓದಿ: ‘ನಾನು ಸೋತಿದ್ದೇನೆ, ಆದರೆ..’ ನೋವಿನಲ್ಲೇ ಕುಸ್ತಿಗೆ ವಿದಾಯ.. ಫೋಗಟ್ ಭಾವುಕ ಪೋಸ್ಟ್ನಲ್ಲಿ ಏನಿದೆ..?
ಬೆಟ್ಟದ ಮೇಲೆ ನಡೆದ ಶೂಟಿಂಗ್ ಕ್ಲಿಪ್ ಅನ್ನು ಕೀರ್ತಿ ಅಂದ್ರೆ ತನ್ವಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಮುಂದೆ ಏನಾಗುತ್ತದೆ ಎಂದು ನೀವು ಯೋಚಿಸುತ್ತೀರಿ ಎಂದು ಬರೆದುಕೊಂಡಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
View this post on Instagram
ಇದೇ ವಿಡಿಯೋ ನೋಡಿದ ನೆಟ್ಟಿಗರು, ತನ್ವಿ ರಾವ್ ಅವರ ಅಭಿನಯಕ್ಕೆ ಫುಲ್ ಫಿದಾ ಆಗಿದ್ದಾರೆ. ಜೊತೆಗೆ ನಿಮ್ಮ ನಟನೆಗೆ ಹ್ಯಾಟ್ಸಪ್, ಬಹಳ ದಿನಗಳ ನಂತರ ಕನ್ನಡ ಇಂಡಸ್ಟ್ರಿಗೆ ಒಬ್ಬ ಅದ್ಭುತ ‘ಅಭಿನೇತ್ರಿ’ ಸಿಕ್ಕಿದೆ. ನಿಮ್ಮ ಕಣ್ಣುಗಳೊಂದಿಗೆ ನೀವು ಆಡುವ ಮಾತು ಮತ್ತೊಂದು ಹಂತಕ್ಕೆ ತೆಗೆದುಕೊಳ್ಳುತ್ತದೆ. ಇನ್ನಷ್ಟೂ ಎತ್ತರಕ್ಕೆ ಬೆಳೆಯಿರಿ, ಧಾರವಾಹಿಯಲ್ಲಿ ನಿಮ್ಮ ಅಭಿನಯ ತುಂಬಾ ಚೆನ್ನಾಗಿತ್ತು, ಆದರೆ ನಿಮ್ಮ ಪಾತ್ರ ನೋಡಿದರೆ ನಮಗೆ ತುಂಬಾ ಬೇಸರವಾಗುತ್ತಿತ್ತು ಮುಗ್ದತೆಯ ಪಾತ್ರ ಎಂದು ಕಾಮೆಂಟ್ಸ್ ಹಾಕಿದ್ದಾರೆ. ಇನ್ನು ಕೆಲವರು ಬೆಟ್ಟದ ಮೇಲಿಂದ ಕೀರ್ತಿ ಬೀಳೋದನ್ನು ನೋಡಿ, ಅವರ ಪತ್ರ ಮುಕ್ತಾಯ ಆಗುತ್ತಿದೆಯಾ ಎಂದು ಪ್ರಶ್ನೆ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹೊಸ ಟ್ವಿಸ್ಟ್ ಅಂಡ್ ಟರ್ನ್ ಮೂಲಕ ವೀಕ್ಷಕರ ರಂಜಿಸುತ್ತಿದೆ
ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ ಈ ವಿಡಿಯೋ
ಇಂಡಸ್ಟ್ರಿಗೆ ಒಬ್ಬ ಅದ್ಭುತ 'ಅಭಿನೇತ್ರಿ' ಸಿಕ್ಕಿದ್ದಾಳೆ ಎಂದ ಫ್ಯಾನ್ಸ್
ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ತನ್ನದೇಯಾದ ಅಭಿಮಾನಿಗಳನ್ನು ಗಳಿಸಿಕೊಂಡಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ಬಾರಮ್ಮ ಧಾರಾವಾಹಿ ವೀಕ್ಷಕರ ಪ್ರೀತಿ, ಪ್ರೋತ್ಸಾಹವನ್ನು ಗಳಿಸಿಕೊಂಡು ಮುನ್ನುಗ್ಗುತ್ತಿದೆ. ದಿನ ಕಳೆದಂತೆ ರೋಚಕ ತಿರುವನ್ನು ಪಡೆದುಕೊಳ್ಳುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ.
ಇದನ್ನೂ ಓದಿ: ‘13 ವರ್ಷದ ಹಿಂದೆಯೇ ಸತ್ತ ನನ್ನ ಗಂಡನಿಂದ ಗರ್ಭಿಣಿಯಾದೆ’- ಮಹಿಳೆ ಶಾಕಿಂಗ್ ಹೇಳಿಕೆ
ಈಗಂತೂ ಲಕ್ಷ್ಮೀ ಬಾರಮ್ಮ ಸೀರಿಯಲ್ ಕಥೆಯನ್ನು ಬಹಳ ರೋಚಕವಾಗಿ ತೆರೆಗೆ ತರುತ್ತಿದ್ದಾರೆ. ಅದರಂತೆ ಒಂದು ವಾರದಿಂದ ನಡೆಯುತ್ತಿರೋ ಎಪಿಸೋಡ್ಗೆ ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಕಥೆಗೆ ಬರುವುದಾದರೆ, ಕಾವೇರಿಯ ಅಸಲಿ ಮುಖವಾಡ ಕಳಚಲೆಂದು ಬೆಟ್ಟದ ತುದಿಯಲ್ಲಿ ಮಂಟಪ ಹಾಕಿಸಿದ್ದಳು ಕೀರ್ತಿ. ಅದಕ್ಕಾಗಿ ಕಾವೇರಿಯನ್ನು ಡೋಲು ಬಡಿಸುತ್ತಲೇ ಅಲ್ಲಿಗೆ ಕರೆಸಿಕೊಂಡಿದ್ದಳು.
ಅದೇ ಸಮಯದಲ್ಲಿ ಕಾವೇರಿ ಹಾಗೂ ಕೀರ್ತಿ ನಡುವೆ ಮಾತಿನ ಚಕಮಕಿ ನಡೆದಿದೆ. ಆ ವೇಳೆ ಕೀರ್ತಿ ಮುಂದೆ ಕಾವೇರಿ ಎಲ್ಲ ಸತ್ಯವನ್ನು ಹೇಳಿದ್ದಾಳೆ. ಬೆನ್ನಲ್ಲೇ ಕಾವೇರಿ ಕೀರ್ತಿಯನ್ನು ಹೇಗಾದರೂ ಮಾಡಿ ಸಾಯಿಸಬೇಕು ಅಂತ ಪ್ಲಾನ್ ಮಾಡಿ, ಬೆಟ್ಟದಿಂದ ಕೆಳಗಡೆ ತಳ್ಳಿದ್ದಾಳೆ. ಆಗ ಕೀರ್ತಿ ಸಾಕಷ್ಟು ಬಾರಿ ಕಾಪಾಡಿ ಕಾವೇರಿ ಆಂಟಿ ಅಂತ ಬೇಡಿಕೊಂಡಳು. ನನ್ನ ಮಗನನ್ನು ನನ್ನಿಂದ ದೂರ ಮಾಡ್ತಿದ್ದೆ ಅಲ್ವಾ ಅಂತ ಕಾವೇರಿಯು ಕೀರ್ತಿಗೆ ತಿರುಗೇಟು ಕೊಟ್ಟು, ಬೆಟ್ಟದ ಮೇಲಿಂದ ಕೆಳಗಡೆ ಬೀಳುವಂತೆ ಮಾಡಿದಳು. ಇದೇ ಎಪಿಸೋಡ್ ಅನ್ನು ನೋಡಿದ ವೀಕ್ಷಕರು ಸಖತ್ ಥ್ರಿಲ್ ಆಗಿದ್ದರು.
ಇದನ್ನೂ ಓದಿ: ‘ನಾನು ಸೋತಿದ್ದೇನೆ, ಆದರೆ..’ ನೋವಿನಲ್ಲೇ ಕುಸ್ತಿಗೆ ವಿದಾಯ.. ಫೋಗಟ್ ಭಾವುಕ ಪೋಸ್ಟ್ನಲ್ಲಿ ಏನಿದೆ..?
ಬೆಟ್ಟದ ಮೇಲೆ ನಡೆದ ಶೂಟಿಂಗ್ ಕ್ಲಿಪ್ ಅನ್ನು ಕೀರ್ತಿ ಅಂದ್ರೆ ತನ್ವಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಮುಂದೆ ಏನಾಗುತ್ತದೆ ಎಂದು ನೀವು ಯೋಚಿಸುತ್ತೀರಿ ಎಂದು ಬರೆದುಕೊಂಡಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
View this post on Instagram
ಇದೇ ವಿಡಿಯೋ ನೋಡಿದ ನೆಟ್ಟಿಗರು, ತನ್ವಿ ರಾವ್ ಅವರ ಅಭಿನಯಕ್ಕೆ ಫುಲ್ ಫಿದಾ ಆಗಿದ್ದಾರೆ. ಜೊತೆಗೆ ನಿಮ್ಮ ನಟನೆಗೆ ಹ್ಯಾಟ್ಸಪ್, ಬಹಳ ದಿನಗಳ ನಂತರ ಕನ್ನಡ ಇಂಡಸ್ಟ್ರಿಗೆ ಒಬ್ಬ ಅದ್ಭುತ ‘ಅಭಿನೇತ್ರಿ’ ಸಿಕ್ಕಿದೆ. ನಿಮ್ಮ ಕಣ್ಣುಗಳೊಂದಿಗೆ ನೀವು ಆಡುವ ಮಾತು ಮತ್ತೊಂದು ಹಂತಕ್ಕೆ ತೆಗೆದುಕೊಳ್ಳುತ್ತದೆ. ಇನ್ನಷ್ಟೂ ಎತ್ತರಕ್ಕೆ ಬೆಳೆಯಿರಿ, ಧಾರವಾಹಿಯಲ್ಲಿ ನಿಮ್ಮ ಅಭಿನಯ ತುಂಬಾ ಚೆನ್ನಾಗಿತ್ತು, ಆದರೆ ನಿಮ್ಮ ಪಾತ್ರ ನೋಡಿದರೆ ನಮಗೆ ತುಂಬಾ ಬೇಸರವಾಗುತ್ತಿತ್ತು ಮುಗ್ದತೆಯ ಪಾತ್ರ ಎಂದು ಕಾಮೆಂಟ್ಸ್ ಹಾಕಿದ್ದಾರೆ. ಇನ್ನು ಕೆಲವರು ಬೆಟ್ಟದ ಮೇಲಿಂದ ಕೀರ್ತಿ ಬೀಳೋದನ್ನು ನೋಡಿ, ಅವರ ಪತ್ರ ಮುಕ್ತಾಯ ಆಗುತ್ತಿದೆಯಾ ಎಂದು ಪ್ರಶ್ನೆ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ