/newsfirstlive-kannada/media/post_attachments/wp-content/uploads/2025/03/ramachari5.jpg)
ರಾಮಾಚಾರಿ ಧಾರಾವಾಹಿಲ್ಲಿ ಹೊಸ ತಿರುವು ಪಡೆದುಕೊಳ್ತಿದೆ. ಧಾರಾವಾಹಿ ಮುಕ್ತಾಯವಾಗುತ್ತಾ ಅನ್ನೋ ಡೌಟ್ನಲ್ಲಿದ್ದ ವೀಕ್ಷಕರಿಗೆ ಸರ್ಪ್ರೈಸ್ ನೀಡಿದೆ ತಂಡ.
ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶುಭಲಕ್ಷ್ಮೀ; ಹುಡುಗ ಯಾರು?
ಹೌದು, ನೆಗೆಟಿವ್ ಆಗಿದ್ದ ವೈಶಾಖ, ತಾನು ಮಾಡಿದ ತಪ್ಪನ್ನ ಅರಿತು ಒಳ್ಳೆಯವಳಾಗಿದ್ದಾಳೆ. ಇತ್ತ ಚಾರು ಮೇಲೆ ಸೇಡು ತೀರಿಸಿಕೊಳ್ಳಲು ಬಂದಿದ್ದ ರುಕ್ಮಿಣಿ ಬಣ್ಣ ಬಯಲಾಗಿದೆ. ಇಲ್ಲಿ ಇದ್ರೆ ಕುಟುಂಬನ ಹಾಳು ಮಾಡ್ತಾಳೆ ಅಂತ ಕೃಷ್ಣ ರುಕ್ಕುನ ಕರ್ಕೊಂಡು ಮನೆ ಬಿಟ್ಟು ಹೋಗಿದ್ದಾನೆ.
ಇದೇನು ಆಗುತ್ತಿದೆ ರಾಮಾಚಾರಿ ಧಾರಾವಾಹಿಯಲ್ಲಿ ಅನ್ನೋವಾಗಲೇ ಹೊಸ ಹೀರೋಯಿನ್ ಹಾಗೂ ಹೊಸ ಕುಟುಂಬ ಎಂಟ್ರಿ ಕೊಟ್ಟಿದೆ. ಸ್ಟಾರ್ಟಿಂಗ್ನಲ್ಲಿದ್ದ ಚಾರು ರೀತಿಯಲ್ಲೇ ಹೊಸ ಪಾತ್ರ ಇದೆ. ಹಠಮಾರಿ ಹುಡುಗಿ, ಬೇಕು ಅಂದ್ರೇ ಬೇಕು ಅಷ್ಟೇ.
ಅಪ್ಪ ಮಗಳಿಗೋಸ್ಕರ ಏನ್ ಬೇಕಾದ್ರು ಮಾಡ್ತಾನೆ. ಇದು ಹೊಸ ಫ್ಯಾಮಿಲಿ ಪರಿಚರ. ಮತ್ತೊಂದು ಕಡೆ ರಾಮಾಚಾರಿಗೆ ಎರಡು ಸುಳಿ ಇದೆ ಅನ್ನೋ ಹೊಸ ಬಾಂಬ್ ಸಿಡಿಸಿದ್ದಾರೆ. ಇತ್ತ ಆ ಹಡುಗಿಗೆ ಆಕ್ಸಿಡಂಟ್ ಆಗಿರುತ್ತೆ, ಆಕೆಯನ್ನು ರಾಮಾಚಾರಿ ಕಾಪಾಡ್ತಾನೆ.
ಇದರ ಅರ್ಥ ಈ ಹೊಸ ಹುಡುಗಿಗೆ ರಾಮಾಚಾರಿ ಮೇಲೆ ಲವ್ ಆಗುತ್ತಾ? ರಾಮಾಚಾರಿನ ಪಡೆದುಕೊಳ್ಳೋ ಹಠ ಮೂಡುತ್ತಾ? ಚಾರು ಹೇಗೆ ಇದನ್ನೆಲ್ಲಾ ಫೇಸ್ ಮಾಡ್ತಾಳೆ ಅನ್ನೋದೆ ಹೊಸ ಸ್ಟೋರಿ ಲೈನ್. ಸದ್ಯ ರೋಚಕ ತಿರುವು ಪಡೆದುಕೊಂಡ ಸೀರಿಯಲ್ ವೀಕ್ಷಕರು ಸಖತ್ ಥ್ರೀಲ್ ಆಗಿದ್ದಾರೆ. ಮುಂದೆ ಏನೆಲ್ಲಾ ಆಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ