newsfirstkannada.com

ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲೊಂದು ಮೇಜರ್​ ಟ್ವಿಸ್ಟ್; ಏನದು ಷಡ್ಯಂತ್ರ?

Share :

Published April 24, 2024 at 6:39pm

    ಪ್ರೇಕ್ಷಕರ ಮನ ಮುಟ್ಟುವಂತಿದೆ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಕಥೆ

    ಶ್ರಾವಣಿ ಸುಬ್ರಮಣ್ಯ ಬದುಕಲ್ಲಿ ಹೊಸ ಪಾತ್ರವೊಂದು ಪರಿಚಯವಾಗಿದೆ

    ಶ್ರಾವಣಿಗೆ ಆಕೆಯ ತಾಯಿಯ ಹೆಸರನ್ನು ಹೇಳಿದ ಅರ್ಚನಾ ಉಡುಪ

ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಕಥಾ ಹಂದರ ಪ್ರೇಕ್ಷಕರ ಮನ ಮುಟ್ಟುವಂತಿದೆ. ಅಮ್ಮನ ಪ್ರೀತಿ ಕಾಣದ ಆಗರ್ಭ ಶ್ರೀಮಂತ ಕುಟುಂಬದ ಕುಡಿಗೆ ಏನೂ ಕಡಿಮೆ ಇಲ್ಲ. ಆದ್ರೆ, ಕಡಿಮೆ ಇರೋದು ಅಮ್ಮನ ಪ್ರೀತಿ ಮಾತ್ರ. ಈಗ ಅಮ್ಮನ ಹೆಸರು ಗೊತ್ತಾಗಿದೆ. ಸಂತೋಷ ಪಡುವಂತೆಯೂ ಇಲ್ಲ. ಯಾಕಂದ್ರೆ, ಸುಬ್ಬು ಹತ್ಯೆ ಯತ್ನ ನಡೆದಿದೆ. ಸುಬ್ಬು ಮೇಲೆ ವಾಹನ ಹತ್ತಿಸಿ ಬಿಟ್ಟಿದ್ದಾರೆ.

ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲೊಂದು ಮೇಜರ್‌ ಟ್ವಿಸ್ಟ್ ಸಿಕ್ಕಿದೆ. ಬಹುಶಃ ಈ ಟ್ವಿಸ್ಟ್‌ನ ನಂತರ ಕಥೆಯಲ್ಲಿ ದೊಡ್ಡದೊಂದು ತಿರುವು ಸಿಗಲಿದೆ. ಆ ತಿರುವಿನಲ್ಲಿ ಅನೇಕ ಉಪಕಥೆಗಳು ಹುಟ್ಟಿ ಕೊಳ್ಳಲಿವೆ. ಇಷ್ಟು ದಿನ ಅಮ್ಮ ಯಾರು? ಅಮ್ಮನ ಹೆಸರೇನೂ? ಅನ್ನೋ ವಿಚಾರವೇ ಗೊತ್ತಿರೋದಿಲ್ಲ. ಆದ್ರೆ, ಧಾರಾವಾಹಿಯಲ್ಲಿ ಹೊಸ ಪಾತ್ರವೊಂದು ಪರಿಚಯವಾಗಿದೆ. ಅರ್ಚನಾ ಉಡುಪ ಆ ರೋಲ್ ನಿರ್ವಹಿಸಿದ್ದಾರೆ. ಇವರು ಶ್ರಾವಣಿಯ ತಾಯಿಯ ಹೆಸರು ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ನೇಹಾ ಹಿರೇಮಠ ಕೇಸ್ ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸ್ತೇವೆ -ಸುರ್ಜೇವಾಲಾ ಭರವಸೆ

ನಿಜಕ್ಕೂ ಇಂತಹದೊಂದು ದಿನಕ್ಕೆ ಶ್ರಾವಣಿ ಕಾದಿದ್ದಳೋ ಏನೋ. ತಾಯಿಯ ಹೆಸರು ಕಿವಿಗೆ ಬಿದ್ದೊಡೋನೇ ಆಕೆಯ ಮನಸ್ಸು ಉಲ್ಲಾಸಿತವಾಯ್ತು. ನಿಜಕ್ಕೂ ಶ್ರಾವಣಿ ಆಕಾಶದಲ್ಲಿಯೇ ತೇಲಿ ಬಿಟ್ಟಳು. ತಾಯಿಯ ಹೆಸರು ಗೊತ್ತಾಗುತ್ತಿದ್ದಂತೆ, ತಂದೆಗೂ ಚಿಕ್ಕಮ್ಮನಿಗೂ ಶಾಕ್ ಆಗಿದೆ. ಇಲ್ಲಿದೆ ಅನಾಹುತ ಆಗಲಿದೆ ಅಂತಾ ಚಿಕ್ಕಮ್ಮ ಯೋಚನೆ ಮಾಡ್ತಾಳೆ. ಆ ನಂತರ ನಡೆಯೋದೇ ಸುಬ್ಬುವಿನ ಕೊಲೆ ಯತ್ನ. ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯ ಮೇಜರ್‌ ತಿರುವು ಇದು. ಸುಬ್ಬವಿಗೆ ಆಕ್ಸಿಡೆಂಟ್ ಆಗಿ, ತೀವ್ರ ರಕ್ತಸ್ರಾವವಾಗುತ್ತದೆ. ವೈದ್ಯರು ಸುಬ್ಬುಗೆ ರಕ್ತ ಬೇಕು ಅಂತಾ ಹೇಳ್ತಾರೆ. ಆ ಸಮಯದಲ್ಲಿ ನೆರವಿನ ಹಸ್ತಚಾಚೋದೇ ಶ್ರಾವಣಿ. ಸುಬ್ಬುವಿಗೆ ಬೇಕಾದ ರಕ್ತವನ್ನ ದಾನ ಮಾಡೋ ಮೂಲಕ ಶ್ರಾವಣಿ ಅನಾಹುತ ತಪ್ಪಿಸುತ್ತಾಳೆ.

ಸುಬ್ಬುವಿನ ಪಾಲಿನ ದೇವತೆಯಾಗ್ತಾಳೆ. ಇಲ್ಲಿಂದ ಮುಂದೆ ಶ್ರಾವಣಿ ಮತ್ತು ಸುಬ್ಬು ಮತ್ತಷ್ಟು ಹತ್ತಿರವಾಗಲಿದ್ದಾರೆ. ಇವರಿಬ್ಬರ ಸ್ನೇಹ ಗಟ್ಟಿಯಾಗಿ, ಶ್ರಾವಣಿ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳೆಲ್ಲಾ ಸುಬ್ಬು ನಿಭಾಯಿಸೋ ಹಂತ ತಲುಪುವ ಸಾಧ್ಯತೆ ಇದೆ. ಹೀಗಾಗಿ, ಈ ಧಾರಾವಾಹಿಯ ಖಾಯಂ ವೀಕ್ಷಕರಿಗೆ ಮುಂದಿನ ದಿನಗಳಲ್ಲಿ, ಕುತೂಹಲಕಾರಿ ಕಂಟೆಂಟ್ ಸಿಗುವುದರಲ್ಲಿ ಯಾವುದೇ ಡೌಟ್ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲೊಂದು ಮೇಜರ್​ ಟ್ವಿಸ್ಟ್; ಏನದು ಷಡ್ಯಂತ್ರ?

https://newsfirstlive.com/wp-content/uploads/2024/04/Shravani-Subramanya3-1.jpg

    ಪ್ರೇಕ್ಷಕರ ಮನ ಮುಟ್ಟುವಂತಿದೆ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಕಥೆ

    ಶ್ರಾವಣಿ ಸುಬ್ರಮಣ್ಯ ಬದುಕಲ್ಲಿ ಹೊಸ ಪಾತ್ರವೊಂದು ಪರಿಚಯವಾಗಿದೆ

    ಶ್ರಾವಣಿಗೆ ಆಕೆಯ ತಾಯಿಯ ಹೆಸರನ್ನು ಹೇಳಿದ ಅರ್ಚನಾ ಉಡುಪ

ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಕಥಾ ಹಂದರ ಪ್ರೇಕ್ಷಕರ ಮನ ಮುಟ್ಟುವಂತಿದೆ. ಅಮ್ಮನ ಪ್ರೀತಿ ಕಾಣದ ಆಗರ್ಭ ಶ್ರೀಮಂತ ಕುಟುಂಬದ ಕುಡಿಗೆ ಏನೂ ಕಡಿಮೆ ಇಲ್ಲ. ಆದ್ರೆ, ಕಡಿಮೆ ಇರೋದು ಅಮ್ಮನ ಪ್ರೀತಿ ಮಾತ್ರ. ಈಗ ಅಮ್ಮನ ಹೆಸರು ಗೊತ್ತಾಗಿದೆ. ಸಂತೋಷ ಪಡುವಂತೆಯೂ ಇಲ್ಲ. ಯಾಕಂದ್ರೆ, ಸುಬ್ಬು ಹತ್ಯೆ ಯತ್ನ ನಡೆದಿದೆ. ಸುಬ್ಬು ಮೇಲೆ ವಾಹನ ಹತ್ತಿಸಿ ಬಿಟ್ಟಿದ್ದಾರೆ.

ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲೊಂದು ಮೇಜರ್‌ ಟ್ವಿಸ್ಟ್ ಸಿಕ್ಕಿದೆ. ಬಹುಶಃ ಈ ಟ್ವಿಸ್ಟ್‌ನ ನಂತರ ಕಥೆಯಲ್ಲಿ ದೊಡ್ಡದೊಂದು ತಿರುವು ಸಿಗಲಿದೆ. ಆ ತಿರುವಿನಲ್ಲಿ ಅನೇಕ ಉಪಕಥೆಗಳು ಹುಟ್ಟಿ ಕೊಳ್ಳಲಿವೆ. ಇಷ್ಟು ದಿನ ಅಮ್ಮ ಯಾರು? ಅಮ್ಮನ ಹೆಸರೇನೂ? ಅನ್ನೋ ವಿಚಾರವೇ ಗೊತ್ತಿರೋದಿಲ್ಲ. ಆದ್ರೆ, ಧಾರಾವಾಹಿಯಲ್ಲಿ ಹೊಸ ಪಾತ್ರವೊಂದು ಪರಿಚಯವಾಗಿದೆ. ಅರ್ಚನಾ ಉಡುಪ ಆ ರೋಲ್ ನಿರ್ವಹಿಸಿದ್ದಾರೆ. ಇವರು ಶ್ರಾವಣಿಯ ತಾಯಿಯ ಹೆಸರು ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ನೇಹಾ ಹಿರೇಮಠ ಕೇಸ್ ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸ್ತೇವೆ -ಸುರ್ಜೇವಾಲಾ ಭರವಸೆ

ನಿಜಕ್ಕೂ ಇಂತಹದೊಂದು ದಿನಕ್ಕೆ ಶ್ರಾವಣಿ ಕಾದಿದ್ದಳೋ ಏನೋ. ತಾಯಿಯ ಹೆಸರು ಕಿವಿಗೆ ಬಿದ್ದೊಡೋನೇ ಆಕೆಯ ಮನಸ್ಸು ಉಲ್ಲಾಸಿತವಾಯ್ತು. ನಿಜಕ್ಕೂ ಶ್ರಾವಣಿ ಆಕಾಶದಲ್ಲಿಯೇ ತೇಲಿ ಬಿಟ್ಟಳು. ತಾಯಿಯ ಹೆಸರು ಗೊತ್ತಾಗುತ್ತಿದ್ದಂತೆ, ತಂದೆಗೂ ಚಿಕ್ಕಮ್ಮನಿಗೂ ಶಾಕ್ ಆಗಿದೆ. ಇಲ್ಲಿದೆ ಅನಾಹುತ ಆಗಲಿದೆ ಅಂತಾ ಚಿಕ್ಕಮ್ಮ ಯೋಚನೆ ಮಾಡ್ತಾಳೆ. ಆ ನಂತರ ನಡೆಯೋದೇ ಸುಬ್ಬುವಿನ ಕೊಲೆ ಯತ್ನ. ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯ ಮೇಜರ್‌ ತಿರುವು ಇದು. ಸುಬ್ಬವಿಗೆ ಆಕ್ಸಿಡೆಂಟ್ ಆಗಿ, ತೀವ್ರ ರಕ್ತಸ್ರಾವವಾಗುತ್ತದೆ. ವೈದ್ಯರು ಸುಬ್ಬುಗೆ ರಕ್ತ ಬೇಕು ಅಂತಾ ಹೇಳ್ತಾರೆ. ಆ ಸಮಯದಲ್ಲಿ ನೆರವಿನ ಹಸ್ತಚಾಚೋದೇ ಶ್ರಾವಣಿ. ಸುಬ್ಬುವಿಗೆ ಬೇಕಾದ ರಕ್ತವನ್ನ ದಾನ ಮಾಡೋ ಮೂಲಕ ಶ್ರಾವಣಿ ಅನಾಹುತ ತಪ್ಪಿಸುತ್ತಾಳೆ.

ಸುಬ್ಬುವಿನ ಪಾಲಿನ ದೇವತೆಯಾಗ್ತಾಳೆ. ಇಲ್ಲಿಂದ ಮುಂದೆ ಶ್ರಾವಣಿ ಮತ್ತು ಸುಬ್ಬು ಮತ್ತಷ್ಟು ಹತ್ತಿರವಾಗಲಿದ್ದಾರೆ. ಇವರಿಬ್ಬರ ಸ್ನೇಹ ಗಟ್ಟಿಯಾಗಿ, ಶ್ರಾವಣಿ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳೆಲ್ಲಾ ಸುಬ್ಬು ನಿಭಾಯಿಸೋ ಹಂತ ತಲುಪುವ ಸಾಧ್ಯತೆ ಇದೆ. ಹೀಗಾಗಿ, ಈ ಧಾರಾವಾಹಿಯ ಖಾಯಂ ವೀಕ್ಷಕರಿಗೆ ಮುಂದಿನ ದಿನಗಳಲ್ಲಿ, ಕುತೂಹಲಕಾರಿ ಕಂಟೆಂಟ್ ಸಿಗುವುದರಲ್ಲಿ ಯಾವುದೇ ಡೌಟ್ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More