/newsfirstlive-kannada/media/post_attachments/wp-content/uploads/2025/04/rikki13.jpg)
ಬೆಂಗಳೂರು: ಕಳೆದ 2 ದಿನಗಳ ಹಿಂದಷ್ಟೇ ರಷ್ಯಾದಿಂದ ಬೆಂಗಳೂರಿಗೆ ಬಂದಿದ್ದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಆಗಿದೆ. ಬಿಡದಿಯ ಮುತ್ತಪ್ಪ ರೈ ನಿವಾಸಕ್ಕೆ ಆಗಮಿಸಿದ್ದ ರಿಕ್ಕಿ ಮೇಲೆ ಮಧ್ಯರಾತ್ರಿ 12.50ರ ಸುಮಾರಿಗೆ ಆಗಂತುಕರು ಫೈರ್ ಮಾಡಿದ್ದಾರೆ. ಸದ್ಯ ರಿಕ್ಕಿ ರೈ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಭಯಾನಕ ಗುಂಡಿನ ದಾಳಿ
ಇದೀಗ ಮಾಜಿ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಕೇಸ್ಗೆ ಟ್ವಿಸ್ಟ್ವೊಂದು ಎದುರಾಗಿದೆ. ರಿಕ್ಕಿ ರೈ ಕಾರು ಚಾಲಕ ಬಸವರಾಜ್ ದೂರಿನನ್ವಯ ಬಿಡದಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅದು ಕೂಡ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ, ರಾಕೇಶ್ ಮಲ್ಲಿ, ನಿತೇಶ್ ಶೆಟ್ಟಿ ಹಾಗೂ ವೈದ್ಯನಾಥ್ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಬಸವರಾಜು ಸುಮಾರು ನಾಲ್ಕೈದು ವರ್ಷಗಳಿಂದ ರಿಕ್ಕಿ ರೈ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಬಸವರಾಜು ಅವರ ಬಳಿ ಹಲವಾರು ಭಾರೀ ನನಗೆ ಜೀವ ಬೆದರಿಕೆ ಇದೆ ಅಂತ ರಿಕ್ಕಿ ರೈ ತಿಳಿಸಿದ್ದರಂತೆ. ಬೆಂಗಳೂರಿನ ಸದಾಶಿವನಗರ ಹಾಗೂ ಬಿಡದಿಯ ಫಾರಂ ಹೌಸ್ನಲ್ಲಿ ರಿಕ್ಕಿ ಅವರು ವಾಸವಾಗಿದ್ದರು. ರಿಕ್ಕಿ ರೈ ಅವರ ಬೆಂಗಳೂರಿನ ನಿವಾಸದಿಂದ 6 ಗಂಟೆಗೆ ಬಿಟ್ಟು 7.30ರ ಸಮಯಲ್ಲಿ ಬಿಡದಿಯ ಮನೆಗೆ ಬಂದಿದ್ರು. ಬಳಿಕ ವಿಶ್ರಾಂತಿ ಪಡೆದಿದ್ದು, ರಾತ್ರಿ 11 ಗಂಟೆಗೆ ಬೆಂಗಳೂರಿನ ನಿವಾಸಕ್ಕೆ ಹೊರಬೇಕು ಅಂಥ ರಿಕ್ಕಿ ತಿಳಿದ್ದರಂತೆ.
ಅದರಂತೆ ಕಪ್ಪು ಬಣ್ಣದ ಕೆಎ 53 ಎಂಸಿ 7128 ನಂಬರ್ನ ಫಾರ್ಚೂನರ್ ಕಾರಿನಲ್ಲಿ ರಿಕ್ಕಿ ರೈ, ಡ್ರೈವರ್ ಬಸವರಾಜ್ ಹಾಗೂ ಬಾಡಿ ಗಾರ್ ರಾಜ್ ಪಾಲ್ ಹೊರಟಿದ್ದರಂತೆ. ಮನೆಯಿಂದ ಸ್ವಲ್ಪ ದೂರ ಹೋದಾಗ ಟಫ್ ಅಂಥ ಶಬ್ಧ ಬಂದಿದೆ. ಸ್ವಲ್ಪ ಮುಂದೆ ಹೋಗಿ ಟಯರ್ ಎಲ್ಲಾ ಪರಿಶೀಲನೆ ಮಾಡಿದ್ವಿ, ಎಲ್ಲವೂ ಸರಿಯಾಗಿತ್ತು. ಬಳಿಕ ರೇಲ್ವೇ ಕ್ರಾಸ್ವರೆಗೂ ಹೋಗ್ತಿದ್ದ ವೇಳೆ ಪರ್ಸ್ ಮರೆತಿರೋದಾಗಿ ರಿಕ್ಕಿ ಹೇಳಿದ್ರು. ಮತ್ತೇ ಬಿಡದಿಯ ಮನೆಗೆ ವಾಪಾಸ್ ಬಂದು ಮತ್ತೆ 12.50ಕ್ಕೆ ಬಿಡದಿಯಿಂದ ಬೆಂಗಳೂರಿಗೆ ಹೊರಟಿದ್ದರು.
ಬಳಿಕ ಮೊದಲೇ ಸೌಂಡ್ ಕೇಳಿದ್ದ ಜಾಗದಲ್ಲಿ ಫೈರಿಂಗ್ ಆಗಿದೆ. ಏಕಾಏಕಿ ಗುಂಡು ಹಾಕಿಸಿದ ಪರಿಣಾಮ ಡ್ರೈವರ್ ಬಚಾವ್ ಆಗಿದ್ದಾರೆ. ಅದು ಮಿಸ್ ಆಗಿ ರಿಕ್ಕಿ ರೈ ಅವರ ಮೂಗು ಹಾಗೂ ಬಲ ತೋಳಿಗೆ ಫೈರಿಂಗ್ ಆಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ರಿಕ್ಕಿ ರೈ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ