ಜಮ್ಮು ಕಾಶ್ಮೀರದಿಂದ ನ್ಯೂಸ್ ಫಸ್ಟ್‌ ಪ್ರತಿನಿಧಿ ಡೇರಿಂಗ್​ ರಿಪೋರ್ಟ್.. ಪ್ರತ್ಯಕ್ಷ ದೃಶ್ಯಗಳು ಹೇಗಿದೆ ಗೊತ್ತಾ?

author-image
admin
Updated On
ಜಮ್ಮು ಕಾಶ್ಮೀರದಿಂದ ನ್ಯೂಸ್ ಫಸ್ಟ್‌ ಪ್ರತಿನಿಧಿ ಡೇರಿಂಗ್​ ರಿಪೋರ್ಟ್.. ಪ್ರತ್ಯಕ್ಷ ದೃಶ್ಯಗಳು ಹೇಗಿದೆ ಗೊತ್ತಾ?
Advertisment
  • ಪಾಕಿಸ್ತಾನದ ಮಿಸೈಲ್​ಗಳು, ಡ್ರೋನ್​ಗಳ ದಾಳಿ.. ಸಾವು.. ನೋವು..
  • ಯುದ್ಧದ ಭೀತಿಯಲ್ಲಿರುವ ಕಾಶ್ಮೀರ ಜನರ ಸ್ಥಿತಿ ಈಗ ಹೇಗಿದೆ ಗೊತ್ತಾ?
  • ನ್ಯೂಸ್‌ ಫಸ್ಟ್‌ನ ಪ್ರತಿನಿಧಿ ದಿಟ್ಟ, ಎದೆಗಾರಿಕೆಯಿಂದ ಪ್ರತ್ಯಕ್ಷ ವರದಿ

ಶ್ರೀನಗರ: ಮಿಸೈಲ್​ಗಳು, ಡ್ರೋನ್​ಗಳ ದಾಳಿ.. ಸಾವು.. ನೋವು.. ಯುದ್ಧಭೂಮಿ ಅಂತಾನೇ ಈಗ ಕರೆಯಲ್ಪಡುತ್ತಿರುವ ಕಾಶ್ಮೀರದಲ್ಲಿ ಜನರ ಪರಿಸ್ಥಿತಿ ಹೇಗಿದೆ. ಪಟಾಕಿ ಸೌಂಡ್​ಗೆ ಬೆದರೋ ಸಾಮಾನ್ಯ ಜನರು ಮಿಸೈಲ್​ಗಳ ಅಪ್ಪಳಿಕೆಯ ಸದ್ದನ್ನ ಹೇಗೆ ಕೇಳ್ತಿರಬಹುದು? ಪಾಪಿಸ್ತಾನದ ನರಿ ಬುದ್ದಿ ನಾಯಕರ ಆದೇಶದಂತೆ ಅಲ್ಲಿನ ಸೈನಿಕರು ಕತ್ತಲಾಗ್ತಿದ್ದಂತೆ ಡ್ರೋನ್​, ಮಿಸೈಲ್​ ಮೂಲಕ ದಾಳಿ ಮಾಡ್ತಿದ್ದು, ನ್ಯೂಸ್​ ಫಸ್ಟ್​ ಕೂಡ ದಾಳಿ ನಡೆಯುತ್ತಿರುವ ಜಮ್ಮು ಕಾಶ್ಮೀರದಿಂದಲೇ ಡೇರಿಂಗ್​ ರಿಪೋರ್ಟ್​ ಮಾಡ್ತಿದೆ.

publive-image

ರಣ ಹೇಡಿ ಪಾಕಿಸ್ತಾನದ ನಿರಂತರ ದಾಳಿಯಿಂದ ಕಾಶ್ಮೀರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ನಮ್ಮ ಭಾರತದ ಸೈನಿಕರು ನೂರಾರು ಡ್ರೋನ್​ ಮತ್ತು ಕ್ಷಿಪಣಿಗಳನ್ನ ಆಕಾಶದಲ್ಲೇ ಹೊಡೆದುರುಳಿಸಿದ್ದಾರೆ. ಆದ್ರೆ ಕೆಲವೆಡೆ ಅಮಾಯಕ ನಾಗರಿಕರನ್ನ ಟಾರ್ಗೆಟ್​ ಮಾಡಿರೋ ಬಿಕಾರಿಸ್ತಾನದಿಂದ ಒಂದಷ್ಟು ಮನೆಗಳಿಗೂ ಹಾನಿಯಾಗಿದೆ.

publive-image

ಈ ಮನೆಯ ದೃಶ್ಯಗಳೇ ಹೇಳ್ತಿದೆ ಪಾಕಿಸ್ತಾನ ದಾಳಿಯ ಭೀಕರತೆ ಎಷ್ಟರ ಮಟ್ಟಿಗೆ ಇದೆ ಅನ್ನೋದನ್ನ. ಬೇಕು ಬೇಕು ಅಂತಾನೇ ಕಾಲ್ಕೆರೆದುಕೊಂಡು ದಾಳಿಗೆ ಮುಂದಾಗಿದ್ದ ಪಾಕಿಸ್ತಾನ ಜಮ್ಮು ಕಾಶ್ಮೀರದ ಉರಿ, ರಜೌರಿ, ಜಮ್ಮು, ಪೂಂಚ್​​ನಲ್ಲಿ ಹೆಚ್ಚಿನ ದಾಳಿ ಮಾಡಿದೆ. ಡ್ರೋನ್​, ಶೆಲ್​ ದಾಳಿ ನಡೆದ ಕಾರಣ ಇದೇ ಭಾಗದಲ್ಲಿ ಮೂರು ಮನೆಗಳು ಸಂಪೂರ್ಣ ನಾಶವಾಗಿದೆ.

publive-image

ಇದನ್ನೂ ಓದಿ: ಕದನ ವಿರಾಮದ ಕಳ್ಳಾಟ.. ಪಾಕ್‌ ಒಪ್ಪಿಕೊಂಡಿದ್ದೇಕೆ? ಉಲ್ಲಂಘನೆ ಮಾಡಿದ್ದೇಕೆ? ಸಂಪೂರ್ಣ ವಿವರ ಇಲ್ಲಿದೆ 

ಉರಿ ನಗರ, ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿದೆ. ಪಾಕ್​ ಗಡಿಗೆ ಹೊಂದಿಕೊಂಡಿರೋದ್ರಿಂದ ಉರಿ ಜಿಲ್ಲೆಯ ಮೇಲೆ ಹೆಚ್ಚೆಚ್ಚು ದಾಳಿ ನಡೆದಿದೆ. ಇದೇ ಪ್ರದೇಶದಲ್ಲಿ ನಾಗರಿಕರ ಸಾವು ಕೂಡ ಆಗಿದೆ. ಹೀಗಾಗಿ ಉರಿ ಮತ್ತು ಬಾರಾಮುಲ್ಲಾಗಳಲ್ಲಿದ್ದ ಜನರನ್ನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್​ ಮಾಡಲಾಗಿದೆ.

publive-image

ನ್ಯೂಸ್‌ ಫಸ್ಟ್‌ನ ಪ್ರತಿನಿಧಿ ಜಗದೀಶ್‌ ಕಾಶ್ಮೀರದಿಂದಲೇ ದಿಟ್ಟ ಮತ್ತು ಎದೆಗಾರಿಕೆಯ ಪ್ರತ್ಯಕ್ಷ ವರದಿ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment