/newsfirstlive-kannada/media/post_attachments/wp-content/uploads/2025/04/newsfirst-cricket-cup.jpg)
ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ನ್ಯೂಸ್ ಫಸ್ಟ್ ಕನ್ನಡ, ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಅದ್ಧೂರಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನ ಆಯೋಜಿಸುತ್ತಿದೆ.
ಮೇ 2, 3 ಮತ್ತು 4ನೇ ತಾರೀಖು, ಮೂರು ದಿನಗಳ ಕಾಲ ಹುಬ್ಬಳ್ಳಿಯ BDK ಗ್ರೌಂಡ್ಸ್, ಶಿವಾನಂದ ಗುಂಜಾಳ ಸ್ಪೋರ್ಟ್ಸ್ ಕ್ಲಬ್, JK ಸ್ಕೂಲ್ ಹತ್ತಿರ, ಟೂರ್ನಿ ನಡೆಯಲಿದೆ.
8 ಓವರ್ಗಳ ಟೂರ್ನಿ ನಾಕೌಟ್ ಮಾದರಿಯಲ್ಲಿ ನಡೆಯಲಿದೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯ, 10 ಓವರ್ ಸೀಮಿತವಾಗಿರುತ್ತೆ.
ಫೈನಲ್ನಲ್ಲಿ ಗೆದ್ದ ತಂಡಕ್ಕೆ '2 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ' ನೀಡಲಾಗುತ್ತದೆ. ಹಾಗೆ ರನ್ನರ್ ಅಪ್ ತಂಡಕ್ಕೆ '1 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ' ನೀಡಲಾಗುವುದು.
ಇದಷ್ಟೇ ಅಲ್ಲ.. ಟೂರ್ನಿಯಲ್ಲಿ ಅತ್ಯಾಕರ್ಷಕ ಬಹುಮಾನಗಳನ್ನೂ ನೀಡಲಾಗುವುದು. ಪ್ರತಿ ಪಂದ್ಯಕ್ಕೂ 'ಪಂದ್ಯ ಶ್ರೇಷ್ಠ ಪ್ರಶಸ್ತಿ' ನೀಡಲಾಗುವುದು. ಟೂರ್ನಿಯಲ್ಲಿ ಅತ್ಯುತಮ ಬ್ಯಾಟ್ಸ್ಮನ್ಗೆ 'ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿ' ಮತ್ತು ಅತ್ಯುತಮ ಬೌಲರ್ಗೆ 'ಬೆಸ್ಟ್ ಬೌಲರ್ ಪ್ರಶಸ್ತಿ' ನೀಡಲಾಗುವುದು.
ಹಾಗೇ ಟೂರ್ನಿಯಲ್ಲಿ ಆಲ್ರೌಂಡ್ ಆಟ ಆಡಿದ ಆಟಗಾರನಿಗೆ 'ಪ್ಲೇಯರ್ ಆಫ್ ದ ಸೀರಿಸ್' ಪ್ರಶಸ್ತಿ ಕೂಡ ನೀಡಲಾಗುವುದು.
ಇದನ್ನೂ ಓದಿ: ಭಾರತ- ಪಾಕ್ ಪಂದ್ಯಗಳಿಗೆ ಶಾಶ್ವತ ಬ್ರೇಕ್..? ಟೀಮ್ ಇಂಡಿಯಾದ ಲೆಜೆಂಡರಿ ಕ್ರಿಕೆಟರ್ ಹೇಳಿದ್ದೇನು?
ಏ.29ರಂದು ನ್ಯೂಸ್ ಫಸ್ಟ್ ಕಪ್ ಟ್ರೋಫಿ ಅನಾವರಣ
ಇದೇ ತಿಂಗಳು ಏಪ್ರಿಲ್ 29ರಂದು ನ್ಯೂಸ್ ಫಸ್ಟ್ ಕ್ರಿಕೆಟ್ ಕಪ್ ಟ್ರೋಫಿ ಅನಾವರಣ ಕಾರ್ಯಕ್ರಮವನ್ನ, ಹುಬ್ಬಳ್ಳಿಯ ಹೋಟೆಲ್ ವುಡ್ಲ್ಯಾಂಡ್ಸ್ನಲ್ಲಿ ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಎಲ್ಲಾ 16 ತಂಡಗಳ ನಾಯಕರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಟೂರ್ನಿಯ ಟೈಸ್ ಮತ್ತು ರೂಲ್ಸ್, ತಂಡಗಳ ನಾಯಕರಿಗೆ ತಿಳಿಸಲಾಗುವುದು.
ನ್ಯೂಸ್ಫಸ್ಟ್ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ನ್ಯೂಸ್ಫಸ್ಟ್ ಸಂಸ್ಥೆಯ ಸಿಇಒ & ಎಂ.ಡಿ ರವಿಕುಮಾರ್.ಎಸ್, ಶ್ರೀರಾಜೇಶ್ವರಿ ಪ್ರಾಪರ್ಟೀಸ್ ಎಂ.ಡಿ ವಿವೇಕ್ ಮೊಕಾಶಿ ಮತ್ತು ಅಂತರಾಷ್ಟ್ರೀಯ ವಿಕಲಚೇತನ ಕ್ರೀಡಾ ತರಬೇತುದಾರ ಶಿವಾನಂದ ಗುಂಜಾಳ ಭಾಗವಹಿಸಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ