ಹುಬ್ಬಳ್ಳಿಯಲ್ಲಿ ನ್ಯೂಸ್ ​ಫಸ್ಟ್​ ಕ್ರಿಕೆಟ್​ ಟೂರ್ನಿಗೆ ಅದ್ಧೂರಿ ಚಾಲನೆ; ಕಪ್ ಅನಾವರಣ!

author-image
admin
Updated On
ಹುಬ್ಬಳ್ಳಿಯಲ್ಲಿ ನ್ಯೂಸ್ ​ಫಸ್ಟ್​ ಕ್ರಿಕೆಟ್​ ಟೂರ್ನಿಗೆ ಅದ್ಧೂರಿ ಚಾಲನೆ; ಕಪ್ ಅನಾವರಣ!
Advertisment
  • ನ್ಯೂಸ್ ​ಫಸ್ಟ್​ ಆಯೋಜಿಸಿರೋ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ
  • ಗೆದ್ದ ತಂಡಕ್ಕೆ ‘2 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ’
  • ರನ್ನರ್ ​​ಅಪ್ ತಂಡಕ್ಕೆ ‘1 ಲಕ್ಷ ರೂ. ನಗದು ಬಹುಮಾನ ಮತ್ತು ಟ್ರೋಫಿ’

ಹುಬ್ಬಳ್ಳಿಯಲ್ಲಿ ನ್ಯೂಸ್ ​ಫಸ್ಟ್​ ಆಯೋಜಿಸಿರೋ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಇಂದು ಅದ್ಧೂರಿ ಚಾಲನೆ ಸಿಕ್ಕಿದೆ.

publive-image

ಹುಬ್ಬಳ್ಳಿಯ ಹೋಟೆಲ್ ವುಡ್​ಲ್ಯಾಂಡ್ಸ್​​ನಲ್ಲಿ ನ್ಯೂಸ್ ​ಫಸ್ಟ್​ ಕ್ರಿಕೆಟ್​ ಕಪ್ ಟ್ರೋಫಿ ಅನಾವರಣ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ನ್ಯೂಸ್​​ಫಸ್ಟ್ ಸಂಸ್ಥೆಯ ಸಿಇಒ & ಎಂ.ಡಿ ರವಿಕುಮಾರ್. ಎಸ್, ಶ್ರೀರಾಜೇಶ್ವರಿ ಪ್ರಾಪರ್ಟೀಸ್​​​​​​ ಎಂ.ಡಿ ವಿವೇಕ್ ಮೊಕಾಶಿ ಮತ್ತು ಅಂತರಾಷ್ಟ್ರೀಯ ವಿಕಲಚೇತನ ಕ್ರೀಡಾ ತರಬೇತುದಾರ ಶಿವಾನಂದ ಗುಂಜಾಳ ಭಾಗಿಯಾಗಿದ್ರು.

publive-image

ಶ್ರೀ ರಾಜೇಶ್ವರಿ ಪ್ರಾಪರ್ಟಿ, ಸಂತೋಷ್ ಲಾಡ್ ಫೌಂಡೇಷನ್, ಕೆಪಿಜೆ ಜ್ಯುವೆಲರ್ಸ್, ಧಾರವಾಡ ರೆಸಿಡೆನ್ಸಿ ಸಹಭಾಗಿತ್ವದಲ್ಲಿ ಕ್ರಿಕೆಟ್​ ಟೂರ್ನಿ ಆಯೋಜಿಸಲಾಗಿದೆ.

ಮೇ 2, 3 ಮತ್ತು 4ನೇ ತಾರೀಖು, ಮೂರು ದಿನಗಳ ಕಾಲ ಹುಬ್ಬಳ್ಳಿಯ BDK ಗ್ರೌಂಡ್ಸ್​, ಶಿವಾನಂದ ಗುಂಜಾಳ ಸ್ಪೋರ್ಟ್ಸ್​ ಕ್ಲಬ್, JK ಸ್ಕೂಲ್ ಹತ್ತಿರ, ಟೂರ್ನಿ ನಡೆಯಲಿದೆ.

publive-image

ಫೈನಲ್​​ನಲ್ಲಿ ಗೆದ್ದ ತಂಡಕ್ಕೆ ‘2 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ’ ನೀಡಲಾಗುತ್ತದೆ. ಹಾಗೆ ರನ್ನರ್ ​​ಅಪ್ ತಂಡಕ್ಕೆ ‘1 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ’ ನೀಡಲಾಗುವುದು.

ಇದನ್ನೂ ಓದಿ: ನ್ಯೂಸ್ ​ಫಸ್ಟ್​ ಕ್ರಿಕೆಟ್​ ಕಪ್​​ಗೆ ಕೌಂಟ್​ಡೌನ್: ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಫೀವರ್ ಶುರು 

ಇದಷ್ಟೇ ಅಲ್ಲ.. ಟೂರ್ನಿಯಲ್ಲಿ ಅತ್ಯಾಕರ್ಷಕ ಬಹುಮಾನಗಳನ್ನೂ ನೀಡಲಾಗುವುದು. ಪ್ರತಿ ಪಂದ್ಯಕ್ಕೂ ‘ಪಂದ್ಯ ಶ್ರೇಷ್ಠ ಪ್ರಶಸ್ತಿ’ ನೀಡಲಾಗುವುದು. ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟ್ಸ್​ಮನ್​​ಗೆ ‘ಬೆಸ್ಟ್ ಬ್ಯಾಟ್ಸ್​ಮನ್ ಪ್ರಶಸ್ತಿ’ ಮತ್ತು ಅತ್ಯುತಮ ಬೌಲರ್​ಗೆ ‘ಬೆಸ್ಟ್ ಬೌಲರ್​ ಪ್ರಶಸ್ತಿ’ ನೀಡಲಾಗುವುದು. ಹಾಗೇ ಟೂರ್ನಿಯಲ್ಲಿ ಆಲ್​ರೌಂಡ್ ಆಟ ಆಡಿದ ಆಟಗಾರನಿಗೆ ‘ಪ್ಲೇಯರ್ ಆಫ್ ದ ಸೀರಿಸ್’ ಪ್ರಶಸ್ತಿ ಕೂಡ ನೀಡಲಾಗುವುದು.​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment