ನ್ಯೂಸ್ ​​ಫಸ್ಟ್ ‘ಜ್ಞಾನಸಂಗಮ’ ಎಜುಕೇಶನ್ ಎಕ್ಸ್ ಪೋಗೆ ಅದ್ಭುತ ಸ್ಪಂದನೆ; ನಾಳೆಯೇ ಕೊನೆಯ ದಿನ!

author-image
Bheemappa
Updated On
ನ್ಯೂಸ್ ​​ಫಸ್ಟ್ ‘ಜ್ಞಾನಸಂಗಮ’ ಎಜುಕೇಶನ್ ಎಕ್ಸ್ ಪೋಗೆ ಅದ್ಭುತ ಸ್ಪಂದನೆ; ನಾಳೆಯೇ ಕೊನೆಯ ದಿನ!
Advertisment
  • ಪಿಯುಸಿ ಪಾಸ್​ ಆದ ವಿದ್ಯಾರ್ಥಿಗಳಿಗೆ ಒಂದೊಳ್ಳೆ ಸಲಹೆ
  • ಎಕ್ಸ್​ ಪೋ ನಾಳೆನೂ ಇದೆ, ಪೋಷಕರು, ಮಕ್ಕಳು ಬನ್ನಿ
  • ಕೋರ್ಸ್ ಆಯ್ಕೆಯಲ್ಲಿ ಗೊಂದಲವಿದ್ರೆ ಪರಿಹಾರ ಸಿಗುತ್ತೆ

ನ್ಯೂಸ್​​ಫಸ್ಟ್ ವತಿಯಿಂದ ಕಲಬುರಗಿಯಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಮೊದಲ ದಿನದ ಜ್ಞಾನ ಸಂಗಮ ಎಜುಕೇಶನ್ ಎಕ್ಸ್ ಪೋಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಪಿಯುಸಿ ಪಾಸ್​ ಆಗಿ ಮುಂದೇನು ಮಾಡೋದು ಅಂತ ಚಿಂತೆ ಮಾಡ್ತಿದ್ದ ನೂರಾರು ವಿದ್ಯಾರ್ಥಿಗಳು ಇವತ್ತಿನ ಎಕ್ಸ್​ಪೋಗೆ ಭೇಟಿ ನೀಡಿ ಉತ್ತರ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ -ತಜ್ಞರ ಸಮಾಗಮ.. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮುಖಾಮುಖಿ. ಒಂದೇ ಸೂರಿನಡಿ ಎಲ್ಲಾ ಮಾಹಿತಿ ಪಡೆಯೋ ಸುವರ್ಣಾವಕಾಶ. ಅದುವೇ ನ್ಯೂಸ್​ಫಸ್ಟ್​ ಆಯೋಜಿಸಿರೋ ಜ್ಞಾನ ಸಂಗಮ.

publive-image

ಜ್ಞಾನ ಸಂಗಮ ಎಜುಕೇಶನ್ ಎಕ್ಸ್ ಪೋಗೆ ಚಾಲನೆ

ವಿದ್ಯಾರ್ಥಿಗಳಿಗಾಗಿ ನ್ಯೂಸ್​​ಫಸ್ಟ್ ವತಿಯಿಂದ ಕಲಬುರಗಿಯಲ್ಲಿ ಎರಡು ದಿನಗಳ ಜ್ಞಾನ ಸಂಗಮ ಎಜುಕೇಶನ್ ಎಕ್ಸ್ ಪೋ ಆಯೋಜಿಸಲಾಗಿದೆ. ಕಲಬುರಗಿಯ ಶರಣಬಸವೇಶ್ವರ ರಸ್ತೆಯಲ್ಲಿರುವ ಶ್ರೀ ಖೂಬಾ ಕಲ್ಯಾಣ ಮಂಟಪದಲ್ಲಿ ​ಇಂದು ಜ್ಞಾನ ಸಂಗಮ ಎಜುಕೇಶನ್ ಎಕ್ಸ್ ಪೋಗೆ ಚಾಲನೆ ನೀಡಲಾಯಿತು. ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನುಮ್, ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್.ಡಿ ಹಾಗು ನ್ಯೂಸ್ ಫಸ್ಟ್ ಎಂ.ಡಿ & ಸಿಇಒ ಎಸ್​.ರವಿಕುಮಾರ್​ ಎಕ್ಸಪೋಗೆ ಚಾಲನೆ ಕೊಟ್ಟರು. ಇದೇ ವೇಳೆ ಪಿಯುಸಿಯಲ್ಲಿ ಱಂಕ್​ ಪಡೆದ ವಿದ್ಯಾರ್ಥಿಗಳಿಗೆ ನ್ಯೂಸ್ ಫಸ್ಟ್​ನಿಂದ ಪ್ರಶಸ್ತಿ ಮತ್ತು ಸ್ಮರಣಿಕೆ ನೀಡಿ ಸನ್ಮಾನ ಮಾಡಲಾಯಿತು.

‘ಈ ಭಾಗದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತೆ’

ಕಲಬುರಗಿ, ಯಾದಗಿರಿ ಹಾಗೂ ಬೀದರ್ ಈ ಭಾಗದ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲ ಆಗಲೆಂದು ಈ ಎಕ್ಸ್​​ ಪೋವನ್ನು ಇಲ್ಲಿ ಆಯೋಜನೆ ಮಾಡಲಾಗಿದೆ. ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದಕ್ಕೆ ಸಂತಸ ಇದೆ. ಇಲ್ಲಿ ಬಂದಿರುವ ಎಲ್ಲ ವಿದ್ಯಾರ್ಥಿಗಳು ಮುಂದೆ ಉತ್ತಮವಾದ ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವಂತವರು. ನಿಮಗೆ ಇಲ್ಲಿ ಉಪಯುಕ್ತವಾದ ಮಾಹಿತಿ ಸಿಕ್ಕೇ ಸಿಗುತ್ತದೆ.

ಎಸ್​.ರವಿಕುಮಾರ್, ನ್ಯೂಸ್ ಫಸ್ಟ್ ಎಂ.ಡಿ & ಸಿಇಒ

publive-image

‘ಕೋರ್ಸ್​​ ಸೆಲೆಕ್ಟ್​ಗೆ ಸಹಾಯವಾಗುತ್ತೆ’

ವಿದ್ಯಾರ್ಥಿಗಳು ಈಗ ತುಂಬಾ ಬ್ರೈಟ್ ಇದ್ದಾರೆ. ಆದರೆ ಸ್ಟೂಡೆಂಟ್​ಗಳಿಗೆ ಅವಕಾಶಗಳ ಕೊರತೆ ಇದೆ. ಮಾಹಿತಿಗಳು ಸರಿಯಾಗಿ ಸಿಗುತ್ತಿಲ್ಲ. ಹಾಗಾಗಿ ಈ ರೀತಿ ಕಾರ್ಯಕ್ರಮಗಳಿಂದ ಅವರಿಗೆ ಅರಿವು ಬರುತ್ತದೆ. ಯವ್ಯಾವ ಕೋರ್ಸ್ ಆಯ್ಕೆ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ಗೊತ್ತಾಗುತ್ತದೆ. ಸೈನ್ಸ್​ ತೆಗೆದುಕೊಂಡರೇ ಪ್ರವೇಶ ಪರೀಕ್ಷೆಗಳು ಏನೇನು ಇರುತ್ತವೆ, ಪದವಿಯಲ್ಲಿ ಯಾವುದು ಉತ್ತಮ ಎಂದು ಮಾಹಿತಿ ಗೊತ್ತಾಗುತ್ತದೆ. ​

ಫೌಜಿಯಾ ತರನುಮ್, ಕಲಬುರಗಿ ಡಿಸಿ

‘ ಇದೊಂದು ದಾರಿ ದೀಪವಾಗುತ್ತೆ’

ಸೈನ್ಸ್​, ಆರ್ಟ್ಸ್​, ಕಾಮರ್ಸ್​ ಪೂರ್ಣಗೊಳಿಸಿದ ಮೇಲೆ ಮುಂದೆ ಯಾವ ವಿಭಾಗಕ್ಕೆ ಹೋದರೆ ಉತ್ತಮವಾಗಿರುತ್ತದೆ. ಪಿಯುಸಿಯಲ್ಲಿ ನಾವು ಯಾವುದನ್ನೇ ಆಯ್ಕೆ ಮಾಡಿಕೊಂಡರೂ ನಮ್ಮ ಜೀವನದ ದಾರಿ ಯಾವ ರೀತಿ ಮಾಡಿಕೊಳ್ಳಬೇಕು ಎನ್ನುವುದಕ್ಕೆ ಈ ಕಾರ್ಯಕ್ರಮ ದಾರಿ ದೀಪವಾಗಿದೆ.

ಡಾ. ಶರಣಪ್ಪ ಎಸ್.ಡಿ, ಕಮಿಷನರ್

ಒಂದೇ ಸೂರಿನಡಿ ಹಲವು ಮಾಹಿತಿ ಪಡೆದ ಸ್ಟೂಡೆಂಟ್ಸ್​

ಎಕ್ಸ್​​​ಪೋದಲ್ಲಿ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಭಾಗಿಯಾಗಿದ್ದು, ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಿಂದ ಭವಿಷ್ಯ ರೂಪಿಸಿಕೊಳ್ಳಲು ಸುವರ್ಣಾವಕಾಶ ಸಿಕ್ಕಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಬಗ್ಗೆ ತಮ್ಮಗಿದ್ದ ಗೊಂದಲ ಮತ್ತು ಪ್ರಶ್ನೆಗಳಿಗೆ ಎಕ್ಸ್​ಪೋದಲ್ಲಿ ಉತ್ತರ ಸಿಕ್ಕಿದೆ. ತಜ್ಞರು ಮತ್ತು ಶಿಕ್ಷಣ ಸಂಸ್ಥೆಗಳ ಜೊತೆ ವಿದ್ಯಾರ್ಥಿಗಳು ಮತ್ತು ಪೋಷಕರು ಕೋರ್ಸ್ ಆಯ್ಕೆಯಲ್ಲಿ ತಮಗಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ.

ಎಜುಕೇಶನ್ ಎಕ್ಸ್​ ಪೋ ಎನ್ನುವುದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಿದೆ. ದ್ವಿತೀಯ ಪಿಯುಸಿ ಆದ ಮೇಲೆ ಮುಂದೇನು ಎನ್ನುವುದಕ್ಕೆ ಇಲ್ಲಿ ಖಂಡಿತ ಉತ್ತರ ಸಿಗುತ್ತದೆ. ಇದು ಉತ್ತಮವಾದ ಕಾರ್ಯಕ್ರಮವಾಗಿದೆ.

ಎಜುಕೇಶನ್​ ಎಕ್ಸ್​ ಪೋದಲ್ಲಿ ಭಾಗಿಯಾದ ವಿದ್ಯಾರ್ಥಿ

ಇದನ್ನೂ ಓದಿ:ಉದ್ಯೋಗ ಹುಡುಕುತ್ತಿರುವ ಯುವಕ, ಯುವತಿಯರಿಗೆ ಗುಡ್​ನ್ಯೂಸ್.. 1,007 ಹುದ್ದೆಗಳು ಖಾಲಿ

publive-image

ಇನ್ನೂ, ಇವತ್ತು ಎಕ್ಸ್​​ಪೋದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಗಂಟೆಗೊಮ್ಮೆ ಲಕ್ಕಿಡಿಪ್​ನಲ್ಲಿ ವಿಶೇಷ ಬಹುಮಾನ ನೀಡಲಾಗಿದೆ. ಇನ್ನೂ, ಅದೃಷ್ಟಶಾಲಿ ವಿಜೇತರಿಗೆ ಒಂದು ಲ್ಯಾಪ್​​​​​ಟಾಪ್ ಬಹುಮಾನ ನೀಡಲಾಗುತ್ತಿದೆ. ಇಷ್ಟೇ ಅಲ್ಲ, ಸ್ಥಳದಲ್ಲೇ ಶಿಕ್ಷಣ ಸಂಸ್ಥೆಗಳಿಗೆ ದಾಖಲಾದ ಆಯ್ದ ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್ ಕೂಡ ಒದಗಿಸಲಾಗಿದೆ. ಇವತ್ತು, ಮಾತ್ರ ಅಲ್ಲ, ನಾಳೆ ಕೂಡ ನಮ್ಮ ಜ್ಞಾನ ಸಂಗಮ ಎಜುಕೇಶನ್ ಎಕ್ಸ್ ಪೋ ಇರಲ್ಲಿದ್ದು, ಈ ಅವಕಾಶಗಳು ನಾಳೆ ಕೂಡ ಇರಲಿದೆ. ಮತ್ಯಾಕೆ ತಡ ಕಲ್ಯಾಣ ನಾಡಿನ ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಮಿಸ್ ಮಾಡದೇ ಎಕ್ಸಪೋದಲ್ಲಿ ಪಾಲ್ಗೊಂಡು, ನೀವೂ ಲಾಭ ಪಡೆದುಕೊಳ್ಳಿ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment