newsfirstkannada.com

ಫ್ರೀ ಬಸ್..​​ ಫುಲ್ ರಶ್​..! ಅದನ್ನೇ ಬಂಡವಾಳ ಮಾಡ್ಕೊಂಡು ಮಾಂಗಲ್ಯ ಸರಕ್ಕೆ ಕೈಹಾಕಿದ ಲೇಡಿ ಕಳ್ಳಿ..! Video

Share :

Published June 25, 2023 at 7:59am

Update June 25, 2023 at 8:00am

    ಬಸ್​ ಹತ್ತುವಾಗ ಕಳ್ಳಿಯ ಕೈ ಚಳಕ, ಸಿಕ್ಕಿಬಿದ್ದಿರುವುದೇ ರೋಚಕ

    ಸ್ವಲ್ಪ ಯಾಮರಿದ್ರೂ ಹೋಗುತ್ತಿತ್ತು ಲಕ್ಷ, ಲಕ್ಷ ಮೌಲ್ಯದ ಮಾಂಗಲ್ಯ ಸರ

    ಮಾಂಗಲ್ಯ ಸರಕ್ಕೆ ಕೈ ಹಾಕಿದ್ದ ಮಹಿಳೆಗೆ ಏನು ಮಾಡಿದಳು ಗೊತ್ತಾ? ವಿಡಿಯೋ

ಚಿಕ್ಕಬಳ್ಳಾಪುರ: KSRTC ನಿಲ್ದಾಣದಲ್ಲಿ ಬಸ್​ ಹತ್ತುವ ವೇಳೆ ಮಹಿಳಾ ಪ್ರಯಾಣಿಕರ ಕತ್ತಿನಲ್ಲಿದ್ದ ₹1.75 ಲಕ್ಷದ ಮೌಲ್ಯದ ಮಾಂಗಲ್ಯ ಸರ ಕದ್ದು ಮಹಿಳೆಯೊಬ್ಬರು ಪೊಲೀಸರ ಅತಿಥಿಯಾಗಿದ್ದಾಳೆ.    ​​

ಮಾಂಗಲ್ಯದ ಚೈನ್ ಕದ್ದ ಆರೋಪಿ ಮೈಸೂರು ಮೂಲದ ಮಂಜುಳಾ ಎಂದು ಹೇಳಲಾಗಿದೆ. ನಾಗಮ್ಮ ಎನ್ನುವ ಮಹಿಳೆ ತನ್ನ ಕತ್ತಿನಲ್ಲಿ ₹1.75 ಲಕ್ಷದ ಮೌಲ್ಯದ ಮಾಂಗಲ್ಯ ಸರ ಹಾಕಿಕೊಂಡು ಬಸ್​ ಹತ್ತುತ್ತಿದ್ದರು. ಈ ವೇಳೆ ಬಸ್​ ಹತ್ತುವಾಗ ರಶ್​ ಆಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಮಂಜುಳಾ ಆಕೆಯ ಮಾಂಗಲ್ಯಕ್ಕೆ ಕೈ ಹಾಕಿ ಕಸಿದುಕೊಂಡಿದ್ದಾಳೆ.

ತಕ್ಷಣ ನಾಗಮ್ಮ ಸರ ಕಸಿದಿದ್ದನ್ನು ಗುರುತಿಸಿ ಆರೋಪಿಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದು ಜುಟ್ಟು ಹಿಡಿದುಕೊಂಡು ಆಕೆ ಕೈಯಲ್ಲಿದ್ದ ತನ್ನ ಮಾಂಗಲ್ಯ ಸರವನ್ನು ಕಸಿದುಕೊಂಡಿದ್ದಾಳೆ. ನಂತರ ಬಸ್​ ನಿಲ್ದಾಣದಲ್ಲಿ ಆಕೆಗೆ ಹಿಗ್ಗಾಮುಗ್ಗಾ ಎಳೆದಾಡಿ ಥಳಿಸಿದ್ದಾಳೆ. ನಾಗಮ್ಮ ಅವರು ಮಾಲೂರಿನಿಂದ ಚಿಕ್ಕಬಳ್ಳಾಪುರದ ಸಂಬಂಧಿಕರ ಮನೆಗೆ ಬಂದಿದ್ದಳು. ನಂತರ ವಾಪಸ್ ಮಾಲೂರಿಗೆ ಹೋಗಲು ​ನಿಲ್ದಾಣದಲ್ಲಿ ಬಸ್ ಹತ್ತುವಾಗ ಈ ಘಟನೆ ನಡೆದಿದೆ. ನಾಗಮ್ಮ ಅವರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರೀ ಬಸ್..​​ ಫುಲ್ ರಶ್​..! ಅದನ್ನೇ ಬಂಡವಾಳ ಮಾಡ್ಕೊಂಡು ಮಾಂಗಲ್ಯ ಸರಕ್ಕೆ ಕೈಹಾಕಿದ ಲೇಡಿ ಕಳ್ಳಿ..! Video

https://newsfirstlive.com/wp-content/uploads/2023/06/CKB_MANGALYA.jpg

    ಬಸ್​ ಹತ್ತುವಾಗ ಕಳ್ಳಿಯ ಕೈ ಚಳಕ, ಸಿಕ್ಕಿಬಿದ್ದಿರುವುದೇ ರೋಚಕ

    ಸ್ವಲ್ಪ ಯಾಮರಿದ್ರೂ ಹೋಗುತ್ತಿತ್ತು ಲಕ್ಷ, ಲಕ್ಷ ಮೌಲ್ಯದ ಮಾಂಗಲ್ಯ ಸರ

    ಮಾಂಗಲ್ಯ ಸರಕ್ಕೆ ಕೈ ಹಾಕಿದ್ದ ಮಹಿಳೆಗೆ ಏನು ಮಾಡಿದಳು ಗೊತ್ತಾ? ವಿಡಿಯೋ

ಚಿಕ್ಕಬಳ್ಳಾಪುರ: KSRTC ನಿಲ್ದಾಣದಲ್ಲಿ ಬಸ್​ ಹತ್ತುವ ವೇಳೆ ಮಹಿಳಾ ಪ್ರಯಾಣಿಕರ ಕತ್ತಿನಲ್ಲಿದ್ದ ₹1.75 ಲಕ್ಷದ ಮೌಲ್ಯದ ಮಾಂಗಲ್ಯ ಸರ ಕದ್ದು ಮಹಿಳೆಯೊಬ್ಬರು ಪೊಲೀಸರ ಅತಿಥಿಯಾಗಿದ್ದಾಳೆ.    ​​

ಮಾಂಗಲ್ಯದ ಚೈನ್ ಕದ್ದ ಆರೋಪಿ ಮೈಸೂರು ಮೂಲದ ಮಂಜುಳಾ ಎಂದು ಹೇಳಲಾಗಿದೆ. ನಾಗಮ್ಮ ಎನ್ನುವ ಮಹಿಳೆ ತನ್ನ ಕತ್ತಿನಲ್ಲಿ ₹1.75 ಲಕ್ಷದ ಮೌಲ್ಯದ ಮಾಂಗಲ್ಯ ಸರ ಹಾಕಿಕೊಂಡು ಬಸ್​ ಹತ್ತುತ್ತಿದ್ದರು. ಈ ವೇಳೆ ಬಸ್​ ಹತ್ತುವಾಗ ರಶ್​ ಆಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಮಂಜುಳಾ ಆಕೆಯ ಮಾಂಗಲ್ಯಕ್ಕೆ ಕೈ ಹಾಕಿ ಕಸಿದುಕೊಂಡಿದ್ದಾಳೆ.

ತಕ್ಷಣ ನಾಗಮ್ಮ ಸರ ಕಸಿದಿದ್ದನ್ನು ಗುರುತಿಸಿ ಆರೋಪಿಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದು ಜುಟ್ಟು ಹಿಡಿದುಕೊಂಡು ಆಕೆ ಕೈಯಲ್ಲಿದ್ದ ತನ್ನ ಮಾಂಗಲ್ಯ ಸರವನ್ನು ಕಸಿದುಕೊಂಡಿದ್ದಾಳೆ. ನಂತರ ಬಸ್​ ನಿಲ್ದಾಣದಲ್ಲಿ ಆಕೆಗೆ ಹಿಗ್ಗಾಮುಗ್ಗಾ ಎಳೆದಾಡಿ ಥಳಿಸಿದ್ದಾಳೆ. ನಾಗಮ್ಮ ಅವರು ಮಾಲೂರಿನಿಂದ ಚಿಕ್ಕಬಳ್ಳಾಪುರದ ಸಂಬಂಧಿಕರ ಮನೆಗೆ ಬಂದಿದ್ದಳು. ನಂತರ ವಾಪಸ್ ಮಾಲೂರಿಗೆ ಹೋಗಲು ​ನಿಲ್ದಾಣದಲ್ಲಿ ಬಸ್ ಹತ್ತುವಾಗ ಈ ಘಟನೆ ನಡೆದಿದೆ. ನಾಗಮ್ಮ ಅವರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More