/newsfirstlive-kannada/media/post_attachments/wp-content/uploads/2025/04/newsfirst-janasangama.jpg)
10th ಪಾಸ್ ಆದ್ರೂ.. PU ಪಾಸಾದ್ರೂ.. Bcom ಪಾಸಾದ್ರೂ Mcom ಪಾಸಾದ್ರೂ.. ಮನೆಯಲ್ಲಿ ಅಪ್ಪ ಅಮ್ಮ, ರೋಡಲ್ಲಿ ನೆಂಟ್ರು.. ಫೇಸ್​​ಬುಕ್​ನಲ್ಲಿ ಫ್ರೆಂಡು ಕೇಳೋ ಒಂದೇ ಒಂದು ಕ್ವಶ್ಚನ್​ ವಾಟ್​ ನೆಕ್ಸ್ಟ್​​..? ಮುಂದೇನು ಅಂತ.
ಅಲ್ಲಾ.. ಅತ್ತಿಗುಪ್ಪೆ ಆದ್ಮೇಲೆ ವಿಜಯನಗರ ಅಂತ ಹೇಳ್ಬೋದು.. ಮಂಡ್ಯ ಆದ್ಮೇಲೆ ಮೈಸೂರು ಅಂತ ಹೇಳ್ಬೋದು. ಆದ್ರೆ ಈ ಕೋರ್ಸ್​ಗಳಾದ್ಮೇಲೆ ಮುಂದೇನು ಅಂದ್ರೆ ಏನ್​ ಹೇಳ್ತಾರೆ ಅಂತ ಕೆಲ ಸ್ಟೂಡೆಂಟ್ಸ್​ ಇರುಸು ಮುರುಸಾಗ್ತಾರೆ. ಆದ್ರೆ ಸ್ಟೂಡೆಂಟ್ಸ್​​ ಲೈಫ್​​ ಮುಖ್ಯ ಅಲ್ವಾ.. ಹಾಗಾಗಿ ಯಾರು ಎಷ್ಟೇ ಪ್ರಶ್ನೆ ಕೇಳಿದ್ರು ಸ್ಟೂಡೆಂಟ್ಸ್ ಮತ್ತು ಪೇರೆಂಟ್ಸ್​​ ಟೆನ್ಷನ್ ಅನ್ನೋದು ಇದ್ದೇ ಇರುತ್ತೆ. ಸ್ಟೂಡೆಂಟ್ಸ್​ ಮತ್ತು ಪೇರೆಂಟ್ಸ್​​ನಲ್ಲಿ ಪ್ರತಿ ಹಂತಕ್ಕೂ ಕಾಡುವ, ಇಂಥಾ ಎಷ್ಟೋ ಕನ್ಫ್ಯೂಸ್​​ ಪ್ರಶ್ನೆಗಳ ‘ಸಂಗಮ’ಕ್ಕೆ ಉತ್ತರ.. ಜ್ಞಾನ ಸಂಗಮದಲ್ಲಿದೆ.
ಜ್ಞಾನ ಸಂಗಮ ಮೆಗಾ ಎಜ್ಯುಕೇಶನ್​ ಎಕ್ಸ್ಫೋ... ಇದು ಉತ್ತರ ಕರ್ನಾಟಕದಲ್ಲಿ ನಡೆಯಲಿರುವ ಅತಿ ದೊಡ್ಡ ಎಜ್ಯುಕೇಶನ್​ ಎಕ್ಸ್ಫೋ. ಈ ಎಕ್ಸ್ಫೋ ಶಿಕ್ಷಣಕ್ಕೆ ಸಂಬಂಧಪಟ್ಟ ಎಷ್ಟೋ ದ್ವಂದ್ವ ತೊಳಲಾಟಗಳಿಗೆ ದಾರಿ ತೋರಿಸ್ತಿದೆ. ಕನ್ಫ್ಯೂಸ್​ಗಳಿಗೆ ಕ್ಲಾರಿಟಿ ಕೊಡ್ತಿದೆ. ಟಾರ್ಚರ್​ ಕ್ವಶ್ಚನ್​ಗಳಿಗೇ ಟಾರ್ಚ್​ಬೇರರ್​ ಆಗಿ ಫ್ಯೂಚರ್​​ ಸೆಟ್​ ಮಾಡ್ತಿದೆ. ಅಷ್ಟಕ್ಕೂ ಈ ಸಂಗಮದಲ್ಲಿ ಭಾಗಿಯಾಗೋದು ಹೇಗೆ ಅಂತೀರಾ..? ಅದಕ್ಕಾಗಿ ವೇದಿಕೆ ಕಲ್ಪಿಸ್ತಿದೆ ನ್ಯೂಸ್ ​ಫಸ್ಟ್​ ಕನ್ನಡ ಚಾನಲ್.
ಹೌದು.. ರಾಜ್ಯದ ಅತ್ಯಂತ ಜನಪ್ರಿಯ ಚಾನಲ್​ ಆಗಿರೋ ನ್ಯೂಸ್ ​ಫಸ್ಟ್​ ಕನ್ನಡ ಚಾನೆಲ್ ಕಡೆಯಿಂದ, ರಾಜ್ಯದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲವಾಗುವಂಥ ವಿಟಿಯು ಎಜುಕೇಷನ್ ಕಾನ್ಕ್ಲೇವ್, ಕೋಚಿಂಗ್ ಗುರು ಸೇರಿದಂತೆ ಎಷ್ಟೋ ಕಾರ್ಯಕ್ರಮಗಳನ್ನ ಆಯೋಜಿಸಿ ಈಗಾಗಲೇ ಯಶಸ್ವಿಯಾಗಿದೆ. ಈಗ ಮುಂದಿನ ಭವಿಷ್ಯ ಹೇಗೆ ರೂಪಿಸ್ಕೊಳ್ಬೇಕು. ಮುಂದೇನು ಅನ್ನೋ ಪ್ರಶ್ನೆಗಳಲ್ಲಿರೋ ಪೇರೆಂಟ್ಸ್​​ ಮತ್ತು ಸ್ಟೂಡೆಂಟ್ಸ್​ಗಾಗಿ ನ್ಯೂಸ್ ​ಫಸ್ಟ್​​ ಮತ್ತೆ ಒಂದು ಸ್ಪೆಷಲ್​ ಕಾರ್ಯಕ್ರಮ ಆಯೋಜಿಸ್ತಿದೆ. ಅದೇ ಜ್ಞಾನ ಸಂಗಮ ಮೆಗಾ ಎಜುಕೇಷನ್ ಎಕ್ಸ್ಫೋ.
ಇದನ್ನೂ ಓದಿ: ವಿಶ್ವದ ಷೇರು ಮಾರುಕಟ್ಟೆಯಲ್ಲಿ ಅತಿ ದೊಡ್ಡ ತಲ್ಲಣ.. ಏನಿದು ಬ್ಲ್ಯಾಕ್ ಮಂಡೇ? ಇದರ ಇತಿಹಾಸ ಏನು?
ಬೆಂಗಳೂರು ಸೇರಿ, ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಈ ಎಕ್ಸ್ಫೋದಲ್ಲಿ ಭಾಗಿಯಾಗ್ತಿವೆ. ಇಂಜಿನಿಯರಿಂಗ್, ಕಾಮರ್ಸ್, ಸೈನ್ಸ್ ಮತ್ತು ಮ್ಯಾನೇಜ್ಮೆಂಟ್ ಕೋರ್ಸ್ ಮತ್ತು ಉದ್ಯೋಗ ಆಧಾರಿತ ಕೋರ್ಸ್ಗಳ ಬಗ್ಗೆ ಸ್ಟೂಡೆಂಟ್ಸ್​ಗೆ, ಕಂಪ್ಲೀಟ್​​ ಇನ್ಫಾರ್ಮೇಷನ್ಸ್​​ ಕೊಡೋ ಉದ್ದೇಶದಲ್ಲಿ, ಪದವಿ, ಸ್ನಾತಕೋತ್ತರ ಪದವಿ ಮತ್ತು ತಾಂತ್ರಿಕ ಕಾಲೇಜುಗಳ ತಜ್ಞರು ಈ ಎಕ್ಸ್ಫೋಗೆ ಬರ್ತಾ ಇದ್ದಾರೆ.
ಪಿಯು ಆದ್ಮೇಲೆ ಮುಂದೇನು? ಅನ್ನೋ ಪ್ರಶ್ನೆಗೆ ಒಂದೇ ವೇದಿಕೆಯಲ್ಲಿ ಆನ್ಸರ್​ ಸಿಗ್ತಿದೆ. ಸ್ಟೂಡೆಂಟ್ಸ್​​ ಮತ್ತು ಪೇರೆಂಟ್ಸ್​​ನಲ್ಲಿರೋ ಪ್ರತಿ ಪ್ರಶ್ನೆಗೂ ಇಲ್ಲಿ, ಯಾವುದೇ ಸಂಶಯ ಉಳಿಯದ ಹಾಗೆ ಉತ್ತರ ಸಿಗಲಿದೆ.
ಇದೇ ಏಪ್ರಿಲ್ ತಿಂಗಳು 19 ಮತ್ತು 20ಕ್ಕೆ, ಬೆಳಗ್ಗೆ 9 ಗಂಟೆಗೆ, ಶ್ರೀಖೂಬಾ ಕಲ್ಯಾಣ ಮಂಟಪ, ಶರಣಬಸವೇಶ್ವರ ದೇವಸ್ಥಾನ ರಸ್ತೆ ಕಲ್ಬುರ್ಗಿಯಲ್ಲಿ, ಜ್ಞಾನ ಸಂಗಮ ಮೆಗಾ ಎಜುಕೇಷನ್ ಎಕ್ಸ್ಫೋ ನಡೆಯಲಿದೆ. ತಪ್ಪದೇ ಈ ಚಾನ್ಸ್ ಅನ್ನ ಪೇರೆಂಟ್ಸ್​​ ಮತ್ತು ಸ್ಟೂಡೆಂಟ್ಸ್​​​ ಮಿಸ್​ ಮಾಡಿಕೊಳ್ಬೇಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ