/newsfirstlive-kannada/media/post_attachments/wp-content/uploads/2025/04/NF-EXPO-2.jpg)
ನ್ಯೂಸ್ಫಸ್ಟ್ ವತಿಯಿಂದ ಕಲಬುರಗಿಯಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಮೊದಲ ದಿನದ ಜ್ಞಾನ ಸಂಗಮ ಎಜುಕೇಶನ್ ಎಕ್ಸ್ ಪೋಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಪಿಯುಸಿ ಪಾಸ್ ಆಗಿ ಮುಂದೇನು ಮಾಡೋದು ಅಂತ ಚಿಂತೆ ಮಾಡ್ತಿದ್ದ ನೂರಾರು ವಿದ್ಯಾರ್ಥಿಗಳು ಎಕ್ಸ್ಪೋಗೆ ಭೇಟಿ ನೀಡಿ ಉತ್ತರ ಪಡೆದುಕೊಂಡಿದ್ದಾರೆ. ಇವತ್ತು ಎಕ್ಸ್ಪೋಗೆ ಕೊನೆ ದಿನ, ವಿದ್ಯಾರ್ಥಿಗಳು, ಪೋಷಕರು ಸದುಪಯೋಗ ಪಡೆದುಕೊಳ್ಳಲು ಉತ್ತಮ ಅವಕಾಶ ಮತ್ತು ವೇದಿಕೆ.
ಱಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ವಿದ್ಯಾರ್ಥಿಗಳಿಗಾಗಿ ನ್ಯೂಸ್ಫಸ್ಟ್ ವತಿಯಿಂದ ಕಲಬುರಗಿಯಲ್ಲಿ ಎರಡು ದಿನಗಳ ಜ್ಞಾನ ಸಂಗಮ ಎಜುಕೇಶನ್ ಎಕ್ಸ್ ಪೋ ಆಯೋಜಿಸಲಾಗಿದೆ. ಕಲಬುರಗಿಯ ಶರಣಬಸವೇಶ್ವರ ರಸ್ತೆಯಲ್ಲಿರುವ ಶ್ರೀ ಖೂಬಾ ಕಲ್ಯಾಣ ಮಂಟಪದಲ್ಲಿ ಜ್ಞಾನ ಸಂಗಮ ಎಜುಕೇಶನ್ ಎಕ್ಸ್ ಪೋಗೆ ಚಾಲನೆ ಸಿಕ್ಕಿದೆ.
ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನುಮ್, ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್ ಡಿ ಹಾಗು ನ್ಯೂಸ್ ಫಸ್ಟ್ ಎಂ.ಡಿ ಮತ್ತು ಸಿಇಒ ಎಸ್.ರವಿಕುಮಾರ್ ಎಕ್ಸಪೋಗೆ ಚಾಲನೆ ನೀಡಿದ್ರು. ಇದೇ ವೇಳೆ ಪಿಯುಸಿಯಲ್ಲಿ ಱಂಕ್ ಪಡೆದ ವಿದ್ಯಾರ್ಥಿಗಳಿಗೆ ನ್ಯೂಸ್ಫಸ್ಟ್ನಿಂದ ಪ್ರಶಸ್ತಿ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಯ್ತು..
ಒಂದೇ ಸೂರಿನಡಿ ಹಲವು ಮಾಹಿತಿ ಪಡೆದ ಸ್ಟೂಡೆಂಟ್ಸ್
ಎಕ್ಸ್ಪೋದಲ್ಲಿ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಭಾಗಿಯಾಗಿದ್ದು, ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಿಂದ ಭವಿಷ್ಯ ರೂಪಿಸಿಕೊಳ್ಳಲು ಸುವರ್ಣಾವಕಾಶ ಸಿಕ್ಕಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಬಗ್ಗೆ ತಮ್ಮಗಿದ್ದ ಗೊಂದಲ ಮತ್ತು ಪ್ರಶ್ನೆಗಳಿಗೆ ಎಕ್ಸ್ಪೋದಲ್ಲಿ ಉತ್ತರ ಸಿಗ್ತಿದೆ.
ತಜ್ಞರು ಮತ್ತು ಶಿಕ್ಷಣ ಸಂಸ್ಥೆಗಳ ಜೊತೆ ವಿದ್ಯಾರ್ಥಿಗಳು ಮತ್ತು ಪೋಷಕರು ಕೋರ್ಸ್ ಆಯ್ಕೆಯಲ್ಲಿ ತಮಗಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ. ಎಕ್ಸ್ಪೋದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಗಂಟೆಗೊಮ್ಮೆ ಲಕ್ಕಿಡಿಪ್ನಲ್ಲಿ ವಿಶೇಷ ಬಹುಮಾನ ನೀಡಲಾಗಿದೆ. ಅದೃಷ್ಟಶಾಲಿ ವಿಜೇತರಿಗೆ ಒಂದು ಲ್ಯಾಪ್ಟಾಪ್ ಗಿಫ್ಟ್ ಸಿಕ್ಕಿದೆ.
ಇಷ್ಟೇ ಅಲ್ಲ, ಸ್ಥಳದಲ್ಲೇ ಶಿಕ್ಷಣ ಸಂಸ್ಥೆಗಳಿಗೆ ದಾಖಲಾದ ಆಯ್ದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೂಡ ಒದಗಿಸಲಾಗಿದೆ. ಅಂದ್ಹಾಗೆ ನಮ್ಮ ಜ್ಞಾನ ಸಂಗಮ ಎಜುಕೇಶನ್ ಎಕ್ಸ್ ಪೋ ಇರಲ್ಲಿದ್ದು, ಈ ಅವಕಾಶಗಳು ಇವತ್ತು ಕೂಡ ಇರಲಿದೆ. ಮತ್ಯಾಕೆ ತಡ ಕಲ್ಯಾಣ ನಾಡಿನ ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಮಿಸ್ ಮಾಡದೇ ಎಕ್ಸಪೋದಲ್ಲಿ ಪಾಲ್ಗೊಂಡು, ನೀವೂ ಲಾಭ ಪಡೆದುಕೊಳ್ಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ