/newsfirstlive-kannada/media/post_attachments/wp-content/uploads/2025/04/NFEXPO-1.jpg)
ಪಿಯುಸಿ ಎಕ್ಸಾಂ ಬರೆದಾಯ್ತು.. ರಿಸಲ್ಟ್ ಕೂಡ ಬಂದಾಯ್ತು. ಮುಂದೇನ್ ಅನ್ನೋ ಚಿಂತೆಯಲ್ಲಿದ್ದೀರಾ? ವಿದ್ಯಾರ್ಥಿಗಳ ಇಂಥ ನೂರಾರು ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ವೇದಿಕೆ ಸಜ್ಜಾಗಿದೆ. ನಿಮ್ಮ ನ್ಯೂಸ್ಫಸ್ಟ್ ಉತ್ತರ ಕರ್ನಾಟಕದಲ್ಲಿ ಅತೀ ದೊಡ್ಡ EDUCATION EXPO ಆಯೋಜಿಸಿದೆ.
ಇಂದು ಮತ್ತು ನಾಳೆ ಕಲಬುರಗಿಯ ಶರಣಬಸವೇಶ್ವರ ರಸ್ತೆಯಲ್ಲಿರುವ ಶ್ರೀ ಖೂಬಾ ಕಲ್ಯಾಣ ಮಂಟಪದಲ್ಲಿ ನ್ಯೂಸ್ ಫಸ್ಟ್ ಜ್ಞಾನ ಸಂಗಮ.. MEGA EDUCATION EXPO ಆಯೋಜನೆ ಮಾಡಿದೆ.
ಭಾಗವಹಿಸುವವರಿಗೆ ಏನು ಲಾಭ?
- ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿಷ್ಟಿತ ಕಾಲೇಜುಗಳು ಭಾಗಿ
- ಪಿಯುಸಿ ನಂತರ ಮುಂದೇನು ಎಂಬ ಪ್ರಶ್ನೆಗಳಿಗೆ ಸಿಗಲಿದೆ ಉತ್ತರ
- ಕೋರ್ಸ್ಗಳ ಜೊತೆಗೆ ಕಾಲೇಜಿನ ದಾಖಲಾತಿಯ ಬಗ್ಗೆ ವಿವರ
- ಉದ್ಯೋಗಾಧಾರಿತ ಭಿನ್ನ ವಿಭಿನ್ನ ಕೋರ್ಸ್ಗಳ ಬಗ್ಗೆ ಮಾಹಿತಿ
- ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜೊತೆ ಮಾತನಾಡಲು ನೇರ ಅವಕಾಶ
- ಸ್ಥಳದಲ್ಲೇ ದಾಖಲಾಗುವ ಆಯ್ದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್
ಎಲ್ಲರೂ ಭಾಗವಹಿಸಿ’
ಕಲಬುರಗಿ ನಗರದಲ್ಲಿ ಇದೇ 19 ಹಾಗೂ 20 ರಂದು ಬೃಹತ್ ಎಜುಕೇಶನ್ ಎಕ್ಸ್ ಪೋ ನಡೆಯುತ್ತದೆ. ಜ್ಞಾನ ಸಂಗಮ ಹೆಸರಿನಡಿ ಬೃಹತ್ ಕಾರ್ಯಕ್ರಮವನ್ನ ನ್ಯೂಸ್ಫಸ್ಟ್ ಚಾನೆಲ್ ಆಯೋಜನೆ ಮಾಡುತ್ತಿದೆ. ಎಲ್ಲರೂ ಈ ಎಜುಕೇಶನ್ ಎಕ್ಸ್ ಪೋದಲ್ಲಿ ಭಾಗವಹಿಸಿ. ಇದರ ಲಾಭವನ್ನು ಪಡೆಯಬೇಕು.
ಶರಣಪ್ರಕಾಶ್ ಪಾಟೀಲ್, ಸಚಿವ
ಭಾಗವಹಿಸುವ ವಿದ್ಯಾರ್ಥಿಗಳಿಗೆ ಗಂಟೆಗೊಮ್ಮೆ ಆಕರ್ಷಕ ಬಹುಮಾನ ಸಿಗಲಿದೆ. ಜೊತೆಗೆ ಅದೃಷ್ಟಶಾಲಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡಲಾಗುತ್ತದೆ. ನ್ಯೂಸ್ ಫಸ್ಟ್ ಜ್ಞಾನ ಸಂಗಮ MEGA EDUCATION EXPOದಲ್ಲಿ ಮಾಹಿತಿ ಜೊತೆ ಲಾಭ ಕೂಡ ಇದ್ದೇ ಇದೆ. ಸೋ ಮಿಸ್ ಮಾಡ್ದೇ ಕಲಬುರಗಿಯ ಶ್ರೀ ಖೂಬಾ ಕಲ್ಯಾಣ ಮಂಟಪಕ್ಕೆ ಭೇಟಿ ಕೊಡೋದನ್ನ ಮರೆಯಬೇಡಿ.
ಇದನ್ನೂ ಓದಿ: ಉದ್ಯೋಗ ಹುಡುಕುತ್ತಿರುವ ಯುವಕ, ಯುವತಿಯರಿಗೆ ಗುಡ್ನ್ಯೂಸ್.. 1,007 ಹುದ್ದೆಗಳು ಖಾಲಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ