ಪರಾರಿ ಆಗಿರುವ ಉಗ್ರನ ತಾಯಿಯೂ ಅರೆಸ್ಟ್.. ಬೆಂಗಳೂರಲ್ಲಿ ಉಗ್ರರ ಜೈಲು ಜಾಲ ಹೇಗೆ ನಡೀತಿತ್ತು..?

author-image
Ganesh
Updated On
ಪರಾರಿ ಆಗಿರುವ ಉಗ್ರನ ತಾಯಿಯೂ ಅರೆಸ್ಟ್.. ಬೆಂಗಳೂರಲ್ಲಿ ಉಗ್ರರ ಜೈಲು ಜಾಲ ಹೇಗೆ ನಡೀತಿತ್ತು..?
Advertisment
  • NIAನಿಂದ ಭರ್ಜರಿ ಕಾರ್ಯಾಚರಣೆ.. ಒಟ್ಟು 5 ಕಡೆ ದಾಳಿ
  • ಜೈಲಿನ ಮನೋವೈದ್ಯ ಹಾಗೂ ASI ಸೇರಿ ಮೂವರು ವಶಕ್ಕೆ
  • ಜೈಲಿನಲ್ಲಿದ್ದುಕೊಂಡೇ ವಿದ್ವಂಸಕ ಕೃತ್ಯಕ್ಕೆ ನಡೆದಿತ್ತು ಪ್ಲಾನ್

ರಾಜ್ಯದಲ್ಲಿ ಎನ್​ಐಎ ಅಧಿಕಾರಿಗಳು ಭಾರೀ ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡಿದ್ದಾರೆ. ದುರಂತ ಏನಂದ್ರೆ ದೇಶ ಕಾಯ್ತೀವಿ ಅಂತ ಸಂವಿಧಾನದ ಮೇಲೆ ಪ್ರಮಾಣ ಮಾಡಿದ ಪೊಲೀಸ್ ಅಧಿಕಾರಿಯೇ ತಾಯ್ನೆಲಕ್ಕೆ ದ್ರೋಹವೆಸಗಿರುವ ಆರೋಪ ಕೇಳಿಬಂದಿದೆ. ಈ ಅಧಿಕಾರಿಯ ಜೊತೆಗೆ ಭಯೋತ್ಪಾದನೆಗೆ ಸಹಾಯ ಮಾಡೋ ಕೆಲ ಶಂಕಿತರನ್ನ ಎನ್​ಐಎ ಅರೆಸ್ಟ್​ ಮಾಡಿದೆ.

ರಾಜ್ಯದಲ್ಲಿ ಉಗ್ರವಾದಿಗಳನ್ನು ಹೆಡೆಮುರಿಕಟ್ಟುವ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. 2008ರ ಜುಲೈ 25ರಂದು ಬೆಂಗಳೂರಲ್ಲಿ 9 ಸರಣಿ ಬಾಂಬ್ ಸ್ಫೋಟದ​ ಹಿಂದೆ ಎನ್​ಐಎ ಅಧಿಕಾರಿಗಳು ಬಿದ್ದಿದ್ದಾರೆ. ಅವತ್ತಿನಿಂದ ಇವತ್ತಿನವರೆಗೂ ಒಬ್ಬರಾದ್ನೇಲೆ ಒಬ್ಬರನ್ನು ಲಾಕ್ ಮಾಡ್ತಿರುವ ಎನ್​ಐಎ ವಿಚಾರಣೆ ಮಾಡ್ತಾ ಬಂದಿದೆ. ಈಗ ಈ ತನಿಖೆ ನೆಕ್ಸ್ಟ್​ ಲೆವೆಲ್​ಗೆ ಹೋಗಿದೆ.

ಇದನ್ನೂ ಓದಿ: ಅತಿಯಾಗಿ ಮೊಬೈಲ್​ ಬಳಸುವ ಮುನ್ನ ಎಚ್ಚರ.. ಆರೋಗ್ಯಕ್ಕೆ ಅಪಾಯ ಗ್ಯಾರಂಟಿ..!

ಎನ್‌ಐಎನಿಂದ ಭರ್ಜರಿ ಕಾರ್ಯಾಚರಣೆ.. ಒಟ್ಟು 5 ಕಡೆ ದಾಳಿ

ಬೆಂಗಳೂರು ನಗರದ ಪರಪ್ಪನ ಅಗ್ರಹಾರ ಜೈಲಿನಿಂದಲೇ ರಾಷ್ಟ್ರದಾದ್ಯಂತ ಉಗ್ರ ಕೃತ್ಯ ನಡೆಸಲು ಸಂಚು ರೂಪಿಸಿದ ಗಂಭೀರ ಪ್ರಕರಣ ಸಂಬಂಧ ಬೆಂಗಳೂರು ಮತ್ತು ಕೋಲಾರದ ಐದು ಕಡೆ ದಾಳಿ ಎನ್​ಐಎ ದಾಳಿ ನಡೆಸಿದೆ. ಸಿಎಆರ್ ಪೊಲೀಸ್ ಅಧಿಕಾರಿ ಚಾಂದ್ ಪಾಷಾ, ಉಗ್ರ ಜುನೈದ್ ತಾಯಿ ಅನೀಸ್ ಫಾತಿಮಾ, ಜೈಲಿನ ಮನೋವೈದ್ಯ ನಾಗರಾಜ್ ಸೇರಿದಂತೆ ಮೂವರನ್ನ ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ಇನ್ನು ಮತ್ತೊಬ್ಬ ಉಗ್ರ ಜನೈದ್ ಪರಾರಿಯಾಗಿದ್ದಾನೆ.

ಮೂವರು ಶಂಕಿತ ಉಗ್ರರ ಬಂಧನ!

ಟಿ.ನಾಸೀರ್ 2008ರ ಜುಲೈ 25ರಂದು ಬೆಂಗಳೂರಿನ ಸುಮಾರು 9 ಕಡೆ ಸರಣಿ ಬಾಂಬ್ ಸ್ಫೋಟದ ರೂವಾರಿ. ಇವನಿ​​ಗೆ ಸದ್ಯ ಅರೆಸ್ಟ್​ ಆಗಿರೋ ಶಂಕಿತರು ಜೈಲಿನ ಒಳಗೆ ಹಣ ಹಾಗೂ ಹೊರಗಿನ ಮಾಹಿತಿ ನೀಡುತ್ತಿದ್ದರಂತೆ. 2008ರ ಸರಣಿ ಬಾಂಬ್ ಸ್ಫೋಟ ಕೇಸ್​ನ ಮತ್ತೊಬ್ಬ ಉಗ್ರ ಜುನೈದ್ ಅಹ್ಮದ್ ವಿದೇಶಕ್ಕೆ ಎಸ್ಕೇಪ್ ಆಗಿದ್ದ. ಹಾಗೆ ಎಸ್ಕೇಪ್​ ಆದ ಜುನೈದ್​ಗೆ ಈ ಟಿ.ನಾಸೀರ್​ಗೆ ಸಂಪರ್ಕ ಕೊಂಡಿಯಾಗಿ ಶಂಕಿತರು ಕೆಲಸ ಮಾಡ್ತಿದ್ದರಂತೆ. ASI ಚಾಂದ್ ಪಾಷಾ, ಮನೋವೈದ್ಯ ನಾಗರಾಜ್, ಜುನೈದ್ ಅಹ್ಮದ್ ತಾಯಿ ಫಾತಿಮಾ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಫಾತಿಮಾ ಜುನೈದ್​ನಿಂದ ಮಾಹಿತಿ ಪಡೆದು ಇವರಿಬ್ಬರ ಮೂಲಕ ಉಗ್ರ ಟಿ.ನಾಸೀರ್​ಗೆ ಸಂದೇಶ ತಲುಪಿಸ್ತಿದ್ದಳಂತೆ. 2022ರಲ್ಲಿ ಎಎಸ್​ಐ ಚಾಂದ್ ಪಾಷಾ, ಉಗ್ರ ನಾಸೀರ್​ನನ್ನ ಕೋರ್ಟ್​ಗೆ ಕರೆದೊಯ್ಯುವ ವೇಳೆ ಎಸ್ಕಾರ್ಟ್​ ನೀಡಿದ್ದಲ್ಲದೇ ಹೊರಗಿನ‌ ಉಗ್ರ ಚಟುವಟಿಕೆ ಬಗ್ಗೆ ನಾಸೀರ್​ಗೆ ಮಾಹಿತಿ ನೀಡಿದ್ದ. ಈ ಮಾಹಿತಿಯಿಂದ ಟಿ.ನಾಸೀರ್ ಜೈಲೊಳಗೆ ಉಗ್ರ ಸಂಘಟನೆಗೆ ಸಂಚು ರೂಪಿಸಿದ್ದ. ಮಾತ್ರವಲ್ಲದೇ ಅಲ್ಲಿ ನಾಸೀರ್​ ನೀಡಿದ ಮಾಹಿತಿಯನ್ನ ಪರಾರಿಯಾಗಿರುವ ಜುನೈದ್​ಗೆ ಶಂಕಿತರು ನೀಡುತ್ತಿದ್ರು ಅಂತ ಹೇಳಲಾಗ್ತಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ASI, ಮನೋವೈದ್ಯ ಸೇರಿ ಮೂವರು ಶಂಕಿತ ಭಯೋತ್ಪಾದಕರ ಬಂಧನ

ದಾಳಿ ವೇಳೆ ಆರೋಪಿಗಳ ಮನೆಯಲ್ಲಿದ್ದ ಡಿಜಿಟಲ್ ದಾಖಲೆಗಳು, ನಗದು, ಚಿನ್ನಾಭರಣ ಹಾಗೂ ಕೃತ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನ ಜಪ್ತಿ ಮಾಡಲಾಗಿದೆ ಎಂದು ಎನ್ಐಎ ತಿಳಿಸಿದೆ. ಅದೇನೇ ಹೇಳಿ, ಒಬ್ಬ ಪೊಲೀಸ್​ ಆಗಿ ಇದ್ಕೊಂಡು. ಹೀಗೆ ಮಾಡಿರೋದು ಎಷ್ಟರ ಮಟ್ಟಿಗೆ ಸರಿ ಅಂತ ಜನ ಛೀ ಥೂ ಅಂತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment