/newsfirstlive-kannada/media/post_attachments/wp-content/uploads/2025/06/ninagagi.jpg)
ನಿನಗಾಗಿ ಧಾರಾವಾಹಿ ಇತ್ತಿಚೀಗೆ 300 ಸಂಚಿಕೆಗಳನ್ನ ಪೂರೈಸಿದೆ. ಕಥೆಯಲ್ಲಿ ಮಹಾ ತಿರುವು ಪಡೆದುಕೊಳ್ತಿದೆ. ನೂರಾರು ಕೋಟಿ ಆಸ್ತಿ ಒಡತಿಯಾಗಿದ್ದಾಳೆ ರಚನಾ. ಹೌದು, ನಿನಗಾಗಿ ಧಾರಾವಾಹಿ ಒಂದೇ ಸ್ಟೋರಿಗೆ ಜೋತು ಬೀಳದೇ ಕಥೆಯಲ್ಲಿ ಬೇರೆ ಬೇರೆ ಆಯಾಮಗಳನ್ನ ಅಳವಡಿಸಿಕೊಂಡು ಮುನ್ನುಗ್ಗುತ್ತಿದೆ.
ಇದನ್ನೂ ಓದಿ: 5 ಹುಲಿಗಳ ಅಂತ್ಯ ಕೇಸ್.. ವಿಷಪ್ರಾಶನ ಮಾಡಿದವರು ಯಾರು? ತಂದೆ, ಮಗನ ತೀವ್ರ ವಿಚಾರಣೆ
ಮೊದಲ ಆಯಾಮದಲ್ಲಿ ರಚನಾ ಸೂಪರ್ ಸ್ಟಾರ್ ಆಗಿರೋ ಹಿಂದಿನ ಕಹಾನಿ ಬಿಚ್ಚಿಟ್ಟಿದ್ದಾರೆ. ನಂತರದ ಮೈಲುಗಲ್ಲು ರಚನಾ-ಕೃಷ್ಣ ಭೇಟಿ, ಮಗುನ ಹೆತ್ತರೆ ಮಾತ್ರ ತಾಯಿಯಲ್ಲ. ಮಮತೆ ನೀಡಿದವಳು ತಾಯಿನೋ ಅನ್ನೋದನ್ನ ಬಿತ್ತರಿಸಿತ್ತು. ನಂತರ ಕಥೆ ಹೊರಳಿದ್ದು ಜೀವ-ರಚನಾ ಪ್ರೀತಿಯ ಪಯಣದತ್ತ.
ಹೀಗೆ ಸಾಗುತ್ತಿದ್ದ ಕಥೆಯಲ್ಲಿ ಮಹಾ ತಿರುವು ತಂದುಕೊಟ್ಟಿದ್ದು ಜೀವ ಹಿನ್ನಲೆ ನೂರಾರು ಕೋಟಿ ಆಸ್ತಿ, ಕುಟುಂಬ ಇದ್ರು ಕೂಡ ಎಲ್ಲಾ ತೊರೆದು ಜೀವ ದೂರ ಹೋಗಿದ್ಯಾಕೆ ಅನ್ನೋದರ ಸುತ್ತ ಸದ್ಯ ಕಥೆ ಸಾಗ್ತಿದೆ. ಈ ನಡುವೆ ರಣ ಹದ್ದುಗಳ ರೀತಿ ಅಪ್ಪನ ಆಸ್ತಿಗೆ ಕಿತ್ತಾಡ್ತಿದ್ದಾರೆ ಸೋ ಕಾಲ್ಡ್ ಫ್ಯಾಮಿಲಿ.
ಜೀವ ಅಪ್ಪ ಸಾಯೋಕು ಮೊದಲು ಇಡೀ ಆಸ್ತಿನ ಮೊಮ್ಮಗಳು ಕೃಷ್ಣಾಳ ಹೆಸರಿಗೆ ಬರೆದಿದ್ದಾನೆ. ಕೃಷ್ಣ ವಯಸ್ಸಿಗೆ ಬರೋವರೆಗೂ ರಚನಾ ಆಸ್ತಿಗೆ ಒಡತಿಯಾಗಿರುತ್ತಾಳೆ. ಈ ವಿಲ್ ರಹಸ್ಯ ಹೊರ ಬರ್ತಿದ್ದಾಗೆ, ಆಸ್ತಿ ಬೇಡ ಅಂತಿದ್ದ ಜೀವಗೆ ಶಾಕ್ ಆಗಿದೆ. ಹದ್ದಿನ ಕಣ್ಣೀಟ್ಟಿದ್ದ ಕುಟುಂಬದವ್ರಿಗೆ ನರಕದ ದರ್ಶನ ಕಾದಿದೆ.
ಈ ನಡುವೆ ಜೀವನ ಅಶ್ವಸ್ತ ಅಮ್ಮ ನಂಬ್ತಿಲ್ಲ. ತಾಯಿ ಯಾಕೆ ಹೀಗೆ ಆಡ್ತಿದ್ದಾಳೆ? ಜೀವನ ಆಸೆ ಅಂತೆ ರಚನಾ ಇಡೀ ಆಸ್ತಿನ ಬಿಟ್ಟುಕೊಟ್ಟು ಮನೆಬಿಟ್ಟು ಹೊರಡ್ತಾಳಾ? ಕುಕ್ಕೋಕೆ ಕಾಯ್ತಿರೋ ರಾಣಗೆ ಕೃಷ್ಣ ಆಹಾರ ಆಗ್ತಾಳಾ? ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ