/newsfirstlive-kannada/media/post_attachments/wp-content/uploads/2025/03/niveditha-gowda.jpg)
ಬಿಗ್ಬಾಸ್ ಮಾಜಿ ಸ್ಪರ್ಧಿ, ಗಿಚ್ಚಿ ಗಿಲಿಗಿಲಿ ಮೂಲಕ ಸಖತ್ ಫೇಮಸ್ ಆಗಿದ್ದ ನಿವೇದಿತಾ ಗೌಡ ವಿಚ್ಛೇದನದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾರೆ. ಸುಮಾರು 9 ತಿಂಗಳ ಬಳಿಕ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಮತ್ತೆ ಮುಖಾಮುಖಿಯಾಗಿದ್ದಾರೆ.
ಇದನ್ನೂ ಓದಿ: ತಾಯಿ- ಮಗನ ಬಗ್ಗೆ ಸುಮಲತಾ ಸ್ಪಷ್ಟನೆ; ದರ್ಶನ್ ಅನ್ಫಾಲೋ ವಿಚಾರಕ್ಕೂ ಉತ್ತರ..!
ಹೌದು, ‘ಮುದ್ದು ರಾಕ್ಷಸಿ’ ಚಿತ್ರದಲ್ಲಿ ಚಂದನ್ ಹಾಗೂ ನಿವೇದಿತಾ ಒಟ್ಟಾಗಿ ನಟಿಸಿದ್ದಾರೆ. ವಿಚ್ಛೇದನದ ಬಳಿಕವೂ ಇವರು ಒಟ್ಟಾಗಿ ನಟಿಸುತ್ತಿದ್ದಾರೆ. ಹೀಗಾಗಿ ಇದೇ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ಗೆ ಈ ಇಬ್ಬರು ಭಾಗಿಯಾಗಿದ್ದರು. ಇದೇ ಶೂಟಿಂಗ್ನ ಕೊನೆಯ ಸೀನ್ನಲ್ಲಿ ನಿವೇದಿತಾ ಗೌಡ ಕಣ್ಣೀರು ಹಾಕಿದ್ದಾರೆ. ಇದನ್ನೇ ನೋಡಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.
ಇನ್ನೂ, ಈ ಚಿತ್ರದ ಶೂಟಿಂಗ್ ಬಳಿಕ ಸುದ್ದಿಗೋಷ್ಠಿಯಲ್ಲಿ ನಿವೇದಿತಾ ಗೌಡ ಕೆಲವು ಟ್ರೋಲ್ಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದರು. ಮಹಿಳೆಯ ಮೇಲೆ ಬ್ಲೇಮ್ ಗೇಮ್ ನಡೆಯುತ್ತಲೇ ಇರುತ್ತದೆ. ಈ ರೀತಿ ಕೆಟ್ಟದಾಗಿ ಕಮೆಂಟ್ ಮಾಡಬಾರದು ಎಂದು ಅವರಿಗೇ ಅನಿಸಬೇಕು. ಏಕೆಂದರೆ, ಮಾನವೀಯತೆ ಎಲ್ಲರಲ್ಲೂ ಇರಲ್ಲ. ನನ್ನ ಕೆಲಸದ ಮೇಲೆ ಗಮನ ಹರಿಸುತ್ತೇನೆ. ಈ ಮೂಲಕ ನಾನು ಇದರಿಂದ ಓವರ್ಕಮ್ ಮಾಡುತ್ತೇನೆ. ಯಾರಾದರೂ ನನ್ನ ಬಗ್ಗೆ ಏನಾದರೂ ತಿಳಿದುಕೊಂಡರೆ ಅದು ಅವರ ಪ್ರಾಬ್ಲಂ. ಇದಕ್ಕೆ ನಾನು ಕುಗ್ಗಲ್ಲ. ಏಕೆಂದರೆ ನಾನು ಅಷ್ಟು ವೀಕ್ ಅಲ್ಲ. ನನ್ನ ಕೆಲಸವನ್ನು ಪ್ಯಾಷನೇಟ್ ಆಗಿ ಮಾಡುತ್ತೇನೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ