ಎರಡು ವರ್ಷದ ಹಿಂದೆ ಭೂಕುಸಿತದಿಂದ ಪಾರಾಗಿದ್ದ ಕುಟುಂಬ
ಆದರೆ ಈ ಬಾರಿ ವಿಧಿ ಲಿಖಿತ ಬೇರೆಯದ್ದೇ ಆಗಿತ್ತು, 7 ಜನ ನಾಪತ್ತೆ
ಸಾಲ ಮಾಡಿ ಮನೆ ಕಟ್ಟಿಸುತ್ತಿದ್ದರು, ಮತ್ತೆ ನೆಲಸಮ ಆಗಿರುವ ನಿವಾಸ
‘ನನ್ನ ಅಜ್ಜಿ ಎಲ್ಲಿ? ಅಪ್ಪ ಯಾಕೆ ಫೋನ್ ಎತ್ತುತ್ತಿಲ್ಲ? ಅಮ್ಮ ಎಲ್ಲಿಗೆ ಹೋದರು? ಸಹೋದರರೂ ಸಂಕಷ್ಟಕ್ಕೆ ಸಿಲುಕಿದ್ದಾರಾ? ಮನೆಯ ಮಕ್ಕಳು ಎಲ್ಲಿ? ಯಾಕೆ ಮನೆಯಿಂದ ಇನ್ನೂ ಫೋನ್ ಬಂದಿಲ್ಲ..?’ ತೀವ್ರ ತಳಮಳ.. ಕಳವಳ..! ವಯನಾಡು ಭೂಕುಸಿತದ ಸಂತ್ರಸ್ತ ಜಿಷ್ಣು ಅನ್ನೋರ ನೋವಿನ ಕತೆ ಇದಾಗಿದೆ.
ಸೌದಿ ಅರೆಬಿಯಾಗೆ ಕೆಲಸಕ್ಕೆ ಹೋಗಿರುವ ಇವರ ನೋವು ಯಾರಿಗೂ ಹೇಳ ತೀರದ್ದಾಗಿದೆ. ಯಾರೇ ಮೊಬೈಲ್ಗೆ ಕರೆ ಮಾಡಿದರೂ, ಭೂಕುಸಿತಕ್ಕೆ ಸಿಲುಕಿರುವ ತನ್ನವರಿಗಾಗಿ ಹಪಹಪಿಸುತ್ತಿದ್ದಾರೆ. ಯಾರಾದರೂ ಬದುಕುಳಿದವರು ಕರೆ ಮಾಡಿದರೇ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಅಂದ್ಹಾಗೆ ಜೀಷ್ಣುವಿನ ಮನೆ ಮುಂಡಕೈನಲ್ಲಿತ್ತು. ಅಲ್ಲಿ ತಂದೆ ರಾಜನ್, ತಾಯಿ ಮಾರು, ಅಣ್ಣ ಜಿನು ಸೇರಿ ಮನೆಯಲ್ಲಿ ಒಟ್ಟು 9 ಮಂದಿ ವಾಸವಿದ್ದರು. ಅವರಲ್ಲಿ 7 ಮಂದಿಯ ಸುಳಿವೇ ಇಲ್ಲ ಎನ್ನಲಾಗಿದೆ.
ಭೂಕುಸಿತದ ವಿಚಾರ ತಿಳಿಯುತ್ತಿದ್ದಂತೆಯೇ ಜಿಷ್ಣು ಹಗಲು ರಾತ್ರಿ ಎನ್ನದೇ ಕರೆ ಮಾಡ್ತಿದ್ದಾರೆ. ತವರಿಗೆ ವಾಪಸ್ ಆಗುವ ಪ್ರಯತ್ನ ಮಾಡುತ್ತಿದ್ದಾರೆ. ಯಾರಿಗೇ ಫೋನ್ ಮಾಡಿದರೂ ಸ್ವಿಚ್ ಆಫ್, ವ್ಯಾಪ್ತಿ ಪ್ರದೇಶದ ಹೊರಗೆ ಇದ್ದಾರೆ ಎಂಬ ಸಂದೇಶ ಬರುತ್ತಿದೆ. ಹೀಗಾಗಿ ದಿಕ್ಕು ತೋಚದೆ ಜಿಷ್ಣು ಕಂಗಾಲ್ ಆಗಿದ್ದಾರೆ.
26 ವರ್ಷದ ಜಿಷ್ಣು ಸೌದಿ ಅರೆಬಿಯಾಗೆ ಕೆಲಸಕ್ಕೆ ಎಂದು ಬಂದು ಕೇವಲ 6 ತಿಂಗಳ ಆಗಿದೆ. ಇದೀಗ ತಮ್ಮ ಮೂಲ ಸ್ಥಳ ಭೂಕುಸಿತಕ್ಕೆ ಒಳಗಾಗಿ ತನ್ನವರ ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಸಣ್ಣ ಪ್ರಮಾಣದ ಭೂಕುಸಿತದಲ್ಲಿ ಈ ಕುಟುಂಬ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿತ್ತು. ಆದರೆ ಈ ಬಾರಿ ಕುಟುಂಬದ 7 ಮಂದಿ ಸದಸ್ಯರು ನಾಪತ್ತೆ ಆಗಿದ್ದಾರೆ. ಅಂದು ಸಂಭವಿಸಿದ ಭೂಕುಸಿತದಲ್ಲಿ ಮನೆಯ ಒಂದು ಭಾಗ ಸಂಪೂರ್ಣ ಕುಸಿದು ಹೋಗಿತ್ತು.
ಇದನ್ನೂ ಓದಿ:ಕೇರಳ ಭೂಕುಸಿತಕ್ಕೆ 3 ಕಾರಣಗಳು; ಬೆಟ್ಟ, ಗುಡ್ಡ ಕುಸಿಯುವ ಹಿಂದಿನ ಸತ್ಯ ಬಿಚ್ಚಿಟ್ಟ ವಿಜ್ಞಾನಿ..!
ಬ್ಯಾಂಕ್ ಸಾಲದಿಂದ ಮನೆ
ಹಿಂದಿನ ಭೂಕುಸಿತದಲ್ಲಿ ಮನೆಗೆ ಹಾನಿಯಾದ ಹಿನ್ನೆಲೆಯಲ್ಲಿ ಸರ್ಕಾರದಿಂದ ಹೊಸ ಮನೆ ಮಂಜೂರಿ ಮಾಡಿಸಿಕೊಂಡು, ಬ್ಯಾಂಕ್ನಿಂದ ಸಾಲ ಮಾಡಿ ಮನೆ ಕಟ್ಟಿಸುತ್ತಿದ್ದರು. ಮನೆ ನಿರ್ಮಾಣದ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಮತ್ತೊಂದು ದುರಂತ ನಡೆದು ಹೋಗಿದೆ. ಸಾಲದ ಜೊತೆಗೆ ಕುಟುಂಬವನ್ನೇ ಕಳೆದುಕೊಂಡಿರುವ ಆತಂಕ ಎದುರಾಗಿದೆ ಜಿಷ್ಣುಗೆ. ಕಟ್ಟಡ ಕಾರ್ಮಿಕರಾಗಿದ್ದ ಇವರ ತಂದೆ ಅನಾರೋಗ್ಯ ಕಾರಣದಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ. ತಾಯಿ ಕ್ಯಾನ್ಸರ್ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೆಲ್ಡರ್ ಆಗಿದ್ದ ಸಹೋದರನ ಪತ್ನಿ ಪ್ರಿಯಾಂಕ ಈಗ ಗರ್ಭಿಣಿ ಆಗಿದ್ದರು. ಮನೆಯ ಓರ್ವ ಸಹೋದರ ರೆಸಾರ್ಟ್ ಕೆಲಸ ಮಾಡುತ್ತಿದ್ದ ಅವರು ಬದುಕಿದ್ದಾರೆ ಎಂದು ಜಿಷ್ಣುಗೆ ಸ್ನೇಹಿತರ ಮೂಲಕ ಗೊತ್ತಾಗಿದೆ. ಇನ್ನು ಸಹೋದರಿಯ ಕೂಡ ಯಾರದ್ದೋ ಮನೆಗೆ ಹೋಗಿದ್ದರಿಂದ ಸೇವ್ ಆಗಿದ್ದಾರೆ. ಇನ್ನುಳಿದ 7 ಮಂದಿಯ ಸುಳಿವು ಇಲ್ಲ ಎಂಬ ಆತಂಕ ಜಿಷ್ಣುಗೆ ಕಾಡಿದೆ.
ಇದನ್ನೂ ಓದಿ:‘ಅಮ್ಮ, ಅಪ್ಪ ಎಲ್ಲಿ..’ ತಂಗಿಯ ಶವದ ಮುಂದೆ ಅಕ್ಕ ರೋದನೆ.. ಭೂಕುಸಿತಕ್ಕೆ ಸ್ಮಶಾನವಾದ ಮದುವೆ ಸಂಭ್ರಮ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಎರಡು ವರ್ಷದ ಹಿಂದೆ ಭೂಕುಸಿತದಿಂದ ಪಾರಾಗಿದ್ದ ಕುಟುಂಬ
ಆದರೆ ಈ ಬಾರಿ ವಿಧಿ ಲಿಖಿತ ಬೇರೆಯದ್ದೇ ಆಗಿತ್ತು, 7 ಜನ ನಾಪತ್ತೆ
ಸಾಲ ಮಾಡಿ ಮನೆ ಕಟ್ಟಿಸುತ್ತಿದ್ದರು, ಮತ್ತೆ ನೆಲಸಮ ಆಗಿರುವ ನಿವಾಸ
‘ನನ್ನ ಅಜ್ಜಿ ಎಲ್ಲಿ? ಅಪ್ಪ ಯಾಕೆ ಫೋನ್ ಎತ್ತುತ್ತಿಲ್ಲ? ಅಮ್ಮ ಎಲ್ಲಿಗೆ ಹೋದರು? ಸಹೋದರರೂ ಸಂಕಷ್ಟಕ್ಕೆ ಸಿಲುಕಿದ್ದಾರಾ? ಮನೆಯ ಮಕ್ಕಳು ಎಲ್ಲಿ? ಯಾಕೆ ಮನೆಯಿಂದ ಇನ್ನೂ ಫೋನ್ ಬಂದಿಲ್ಲ..?’ ತೀವ್ರ ತಳಮಳ.. ಕಳವಳ..! ವಯನಾಡು ಭೂಕುಸಿತದ ಸಂತ್ರಸ್ತ ಜಿಷ್ಣು ಅನ್ನೋರ ನೋವಿನ ಕತೆ ಇದಾಗಿದೆ.
ಸೌದಿ ಅರೆಬಿಯಾಗೆ ಕೆಲಸಕ್ಕೆ ಹೋಗಿರುವ ಇವರ ನೋವು ಯಾರಿಗೂ ಹೇಳ ತೀರದ್ದಾಗಿದೆ. ಯಾರೇ ಮೊಬೈಲ್ಗೆ ಕರೆ ಮಾಡಿದರೂ, ಭೂಕುಸಿತಕ್ಕೆ ಸಿಲುಕಿರುವ ತನ್ನವರಿಗಾಗಿ ಹಪಹಪಿಸುತ್ತಿದ್ದಾರೆ. ಯಾರಾದರೂ ಬದುಕುಳಿದವರು ಕರೆ ಮಾಡಿದರೇ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಅಂದ್ಹಾಗೆ ಜೀಷ್ಣುವಿನ ಮನೆ ಮುಂಡಕೈನಲ್ಲಿತ್ತು. ಅಲ್ಲಿ ತಂದೆ ರಾಜನ್, ತಾಯಿ ಮಾರು, ಅಣ್ಣ ಜಿನು ಸೇರಿ ಮನೆಯಲ್ಲಿ ಒಟ್ಟು 9 ಮಂದಿ ವಾಸವಿದ್ದರು. ಅವರಲ್ಲಿ 7 ಮಂದಿಯ ಸುಳಿವೇ ಇಲ್ಲ ಎನ್ನಲಾಗಿದೆ.
ಭೂಕುಸಿತದ ವಿಚಾರ ತಿಳಿಯುತ್ತಿದ್ದಂತೆಯೇ ಜಿಷ್ಣು ಹಗಲು ರಾತ್ರಿ ಎನ್ನದೇ ಕರೆ ಮಾಡ್ತಿದ್ದಾರೆ. ತವರಿಗೆ ವಾಪಸ್ ಆಗುವ ಪ್ರಯತ್ನ ಮಾಡುತ್ತಿದ್ದಾರೆ. ಯಾರಿಗೇ ಫೋನ್ ಮಾಡಿದರೂ ಸ್ವಿಚ್ ಆಫ್, ವ್ಯಾಪ್ತಿ ಪ್ರದೇಶದ ಹೊರಗೆ ಇದ್ದಾರೆ ಎಂಬ ಸಂದೇಶ ಬರುತ್ತಿದೆ. ಹೀಗಾಗಿ ದಿಕ್ಕು ತೋಚದೆ ಜಿಷ್ಣು ಕಂಗಾಲ್ ಆಗಿದ್ದಾರೆ.
26 ವರ್ಷದ ಜಿಷ್ಣು ಸೌದಿ ಅರೆಬಿಯಾಗೆ ಕೆಲಸಕ್ಕೆ ಎಂದು ಬಂದು ಕೇವಲ 6 ತಿಂಗಳ ಆಗಿದೆ. ಇದೀಗ ತಮ್ಮ ಮೂಲ ಸ್ಥಳ ಭೂಕುಸಿತಕ್ಕೆ ಒಳಗಾಗಿ ತನ್ನವರ ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಸಣ್ಣ ಪ್ರಮಾಣದ ಭೂಕುಸಿತದಲ್ಲಿ ಈ ಕುಟುಂಬ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿತ್ತು. ಆದರೆ ಈ ಬಾರಿ ಕುಟುಂಬದ 7 ಮಂದಿ ಸದಸ್ಯರು ನಾಪತ್ತೆ ಆಗಿದ್ದಾರೆ. ಅಂದು ಸಂಭವಿಸಿದ ಭೂಕುಸಿತದಲ್ಲಿ ಮನೆಯ ಒಂದು ಭಾಗ ಸಂಪೂರ್ಣ ಕುಸಿದು ಹೋಗಿತ್ತು.
ಇದನ್ನೂ ಓದಿ:ಕೇರಳ ಭೂಕುಸಿತಕ್ಕೆ 3 ಕಾರಣಗಳು; ಬೆಟ್ಟ, ಗುಡ್ಡ ಕುಸಿಯುವ ಹಿಂದಿನ ಸತ್ಯ ಬಿಚ್ಚಿಟ್ಟ ವಿಜ್ಞಾನಿ..!
ಬ್ಯಾಂಕ್ ಸಾಲದಿಂದ ಮನೆ
ಹಿಂದಿನ ಭೂಕುಸಿತದಲ್ಲಿ ಮನೆಗೆ ಹಾನಿಯಾದ ಹಿನ್ನೆಲೆಯಲ್ಲಿ ಸರ್ಕಾರದಿಂದ ಹೊಸ ಮನೆ ಮಂಜೂರಿ ಮಾಡಿಸಿಕೊಂಡು, ಬ್ಯಾಂಕ್ನಿಂದ ಸಾಲ ಮಾಡಿ ಮನೆ ಕಟ್ಟಿಸುತ್ತಿದ್ದರು. ಮನೆ ನಿರ್ಮಾಣದ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಮತ್ತೊಂದು ದುರಂತ ನಡೆದು ಹೋಗಿದೆ. ಸಾಲದ ಜೊತೆಗೆ ಕುಟುಂಬವನ್ನೇ ಕಳೆದುಕೊಂಡಿರುವ ಆತಂಕ ಎದುರಾಗಿದೆ ಜಿಷ್ಣುಗೆ. ಕಟ್ಟಡ ಕಾರ್ಮಿಕರಾಗಿದ್ದ ಇವರ ತಂದೆ ಅನಾರೋಗ್ಯ ಕಾರಣದಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ. ತಾಯಿ ಕ್ಯಾನ್ಸರ್ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೆಲ್ಡರ್ ಆಗಿದ್ದ ಸಹೋದರನ ಪತ್ನಿ ಪ್ರಿಯಾಂಕ ಈಗ ಗರ್ಭಿಣಿ ಆಗಿದ್ದರು. ಮನೆಯ ಓರ್ವ ಸಹೋದರ ರೆಸಾರ್ಟ್ ಕೆಲಸ ಮಾಡುತ್ತಿದ್ದ ಅವರು ಬದುಕಿದ್ದಾರೆ ಎಂದು ಜಿಷ್ಣುಗೆ ಸ್ನೇಹಿತರ ಮೂಲಕ ಗೊತ್ತಾಗಿದೆ. ಇನ್ನು ಸಹೋದರಿಯ ಕೂಡ ಯಾರದ್ದೋ ಮನೆಗೆ ಹೋಗಿದ್ದರಿಂದ ಸೇವ್ ಆಗಿದ್ದಾರೆ. ಇನ್ನುಳಿದ 7 ಮಂದಿಯ ಸುಳಿವು ಇಲ್ಲ ಎಂಬ ಆತಂಕ ಜಿಷ್ಣುಗೆ ಕಾಡಿದೆ.
ಇದನ್ನೂ ಓದಿ:‘ಅಮ್ಮ, ಅಪ್ಪ ಎಲ್ಲಿ..’ ತಂಗಿಯ ಶವದ ಮುಂದೆ ಅಕ್ಕ ರೋದನೆ.. ಭೂಕುಸಿತಕ್ಕೆ ಸ್ಮಶಾನವಾದ ಮದುವೆ ಸಂಭ್ರಮ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ