ಧರ್ಮಸ್ಥಳದಿಂದ ಬರ್ತಿದ್ದಾಗ ಭೀಕರ ಅಪಘಾತ.. ಗಂಡ, ಹೆಂಡತಿ, ಮಗ, ಮಗಳು ನಿಧನ

author-image
Ganesh
Updated On
ಧರ್ಮಸ್ಥಳದಿಂದ ಬರ್ತಿದ್ದಾಗ ಭೀಕರ ಅಪಘಾತ.. ಗಂಡ, ಹೆಂಡತಿ, ಮಗ, ಮಗಳು ನಿಧನ
Advertisment
  • ತುಮಕೂರಿನ ಕುಣಿಗಲ್ ಬೈಪಾಸ್​​ನಲ್ಲಿ ದುರ್ಘಟನೆ
  • ಮೃತರೆಲ್ಲರೂ ಮಾಗಡಿ ತಾಲೂಕಿನ ನಿವಾಸಿಗಳು
  • ಕುಣಿಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ

ತುಮಕೂರು: ಕುಣಿಗಲ್ ಬೈಪಾಸ್​​ನಲ್ಲಿ ಕಾರು ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಜೀವ ಕಳೆದುಕೊಂಡಿದ್ದಾರೆ.

ಧರ್ಮಸ್ಥಳದಿಂದ ವಾಪಾಸ್ ಆಗುವ ವೇಳೆ ಅಪಘಾತ ಸಂಭವಿಸಿದೆ. ಗಂಡ, ಹೆಂಡತಿ, ಮಗ, ಮಗಳು ದುರ್ಮರಣ ಹೊಂದಿದ್ದಾರೆ. ಕುಣಿಗಲ್ ಬೈಪಾಸ್​ನಲ್ಲಿರುವ ಉಗಿಬಂಡಿ ರೆಸ್ಟೋರೆಂಟ್ ಬಳಿ ದುರ್ಘಟನೆ ಸಂಭವಿಸಿದೆ. ಕುಣಿಗಲ್ ಬಳಿ ಹಾದು ಹೋಗಿರುವ ಬೆಂಗಳೂರು ಟು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಇದಾಗಿದೆ.

ಮೃತರೆಲ್ಲರೂ ಮಾಗಡಿ ತಾಲೂಕಿನ ಯಲಗಲವಾಡಿ ಹ್ಯಾಂಡ್​ಪೊಸ್ಟ್​ನ ಸಿಬೇಗೌಡ ಕುಟುಂಬದವರು ಎಂದು ಹೇಳಲಾಗ್ತಿದೆ. ಯುಟರ್ನ್ ತೆಗೆದು ಕೊಳ್ಳುವಾಗ ಕಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳು ಕುಣಿಗಲ್ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ: ಜೈಲು ಹಕ್ಕಿಗೆ ಕೈದಿಗಳಿಂದ ಟಾರ್ಚರ್​​.. ನಟಿ ರನ್ಯಾ ರಾವ್​ಗೆ ಸಂಬಂಧಿಸಿದ ಶಾಕಿಂಗ್ ವಿಷಯ ರಿವೀಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment