ಚಿಕ್ಕಬಳ್ಳಾಪುರದಲ್ಲಿ ಒನ್ ಫ್ಯಾಮಿಲಿ, ಒನ್ ವರ್ಲ್ಡ್ ಕಪ್
ಕ್ರಿಕೆಟ್ ದೇವರ ಬಾಯಲ್ಲಿ ಕನ್ನಡದ ಕಂಪು..!
ಸಹೋದರರ ಸವಾಲಿನಲ್ಲಿ ಇರ್ಫಾನ್ ಗೆದ್ದಿದ್ದೇಗೆ..?
ಏಳು ದೇಶಗಳ ದಿಗ್ಗಜರ ಕಾದಾಟ. ಹೈ ಎಕ್ಸ್ಪೆಕ್ಟೇಶನ್, ಹೈ ಎನರ್ಜಿ ಬ್ಯಾಟಲ್ ಎಂದೇ ಬಿಂಬಿತವಾಗಿತ್ತು. ಕೊನೆಗೂ ಆ ನಿರೀಕ್ಷೆ ಹುಸಿಗೊಳ್ಳಲಿಲ್ಲ. ಒನ್ ವರ್ಲ್ಡ್, ಒನ್ ಫ್ಯಾಮಿಲಿ ಕಪ್ನಲ್ಲಿ ಸಚಿನ್ ತೆಂಡೂಲ್ಕರ್ ಬಳಗ ಥ್ರಿಲ್ಲಿಂಗ್ ವಿಕ್ಟರಿ ದಾಖಲಿಸ್ತು. ಕ್ರಿಕೆಟ್ ದೇವರು ಆಲ್ರೌಂಡರ್ ಆಟದ ಮೂಲಕ ಅಭಿಮಾನಿಗಳನ್ನ ರಂಜಿಸಿದ್ರು.
ಸಚಿನ್ ತೆಂಡೂಲ್ಕರ್ ವರ್ಸಸ್ ಯುವರಾಜ್ ಸಿಂಗ್ ತಂಡಗಳ ನಡುವಿನ ಚಾರಿಟಿ ಕದನ. ವಿಶ್ವ ದಿಗ್ಗಜರ ಸಮ್ಮಿಲ್ಲನ. ಇಂತಹ ಲೆಜೆಂಡ್ಸ್ ಬ್ಯಾಟಲ್ನಲ್ಲಿ ಸಚಿನ್ ನಾಯಕತ್ವದ ಒನ್ ವರ್ಲ್ಡ್ ತಂಡ 4 ವಿಕೆಟ್ಗಳ ಗೆಲುವು ದಾಖಲಿಸ್ತು. ಪಂದ್ಯ ತೀರ ಎಕ್ಸೈಟಿಂಗ್ನಿಂದ ಕೂಡಿದ್ದರಿಂದ ಕೊನೆ ಓವರ್ನಲ್ಲಿ ಎಂಡ್ ಆಗಿ ಭರಪೂಜರ ಮನರಂಜನೆ ಉಣಬಡಿಸ್ತು.
ಮ್ಯಾಡಿ ಜಬರ್ದಸ್ತ್ ಆಟ.. ನಡೆಯದ ಬೌಲರ್ಸ್ ಮೋಡಿ..!
ಮೊದಲು ಬ್ಯಾಟ್ ಮಾಡಿದ ಒನ್ ಫ್ಯಾಮಿಲಿ ಬ್ಯಾಟರ್ಸ್ ಆರಂಭದಿಂದಲೇ ಅಟ್ಯಾಕಿಂಗ್ ನಡೆಸಿದ್ರು. ಅಬ್ಬರಿಸಿ ಬೊಬ್ಬಿರಿದ ಡರೆನ್ ಮ್ಯಾಡಿ ಎದುರಾಳಿ ಬೌಲರ್ಗಳನ್ನ ಚೆಂಡಾಡಿದ್ರು. ಸ್ಫೋಟಕ ಅರ್ಧಶತ ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದ್ರು.
ಯೂಸುಫ್ ವೈಲೆಂಟ್.. ಗುಡುಗಿದ ಸಿಕ್ಸರ್ ಕಿಂಗ್..
ಮ್ಯಾಡಿ ನಿರ್ಗಮನದ ಬಳಿಕ ಡೇಂಜರಸ್ ಯೂಸುಫ್ ಪಠಾಣ್ ಹಾಗೂ ಸಿಕ್ಸರ್ ಕಿಂಗ್ ಯುವರಾಜ್ ಕೂಡಿ ರನ್ವೇಗವನ್ನ ಹೆಚ್ಚಿಸಿದ್ರು. ಸಿಕ್ಸರ್-ಬೌಂಡ್ರಿಗಳ ಮಳೆಗರೆದ ಯೂಸುಫ್ ಸ್ಫೋಟಕ 38 ರನ್ ಸಿಡಿಸಿದ್ರೆ ಕ್ಯಾಪ್ಟನ್ ಯುವಿ 10 ಎಸೆತಗಳಲ್ಲಿ ಬಿರುಸಿನ 23 ರನ್ ಗಳಿಸಿದ್ರು. ಫೈನಲಿ ಒನ್ ಫ್ಯಾಮಿಲಿ ತಂಡ 20 ಓವರ್ಗಳಲ್ಲಿ 6 ವಿಕೆಟ್ಗೆ 180 ರನ್ ಬಾರಿಸ್ತು.
ಸವಾಲಿನ ಗುರಿ ಬೆನ್ನಟ್ಟಿದ ಒನ್ ವರ್ಲ್ಡ್ ತಂಡಕ್ಕೆ ಅಲ್ವಿರೋ ಪೀಟರ್ಸನ್ ಆಸರೆಯಾದ್ರು. ದಂಡುಂ ದಶಗುಣಂ ಇನ್ನಿಂಗ್ಸ್ ಕಟ್ಟಿದ ಆಫ್ರಿಕಾ ಬ್ಯಾಟರ್ 74 ರನ್ಗಳ ಕಾಂಟ್ರಿಬ್ಯೂಟ್ ನೀಡಿದ್ರು. ಇವರಿಗೆ ಉತ್ತಮ ಸಾಥ್ ನೀಡಿದ ತೆಂಡುಲ್ಕರ್ 27, ಉಪುಲ್ ತರಂಗ ಬಿರುಸಿನ 29 ರನ್ ಗಳಿಸಿ ಪೆವಿಲಿಯನ್ ಸೇರಿದ್ರು.
ಸಹೋದರರ ಸವಾಲಿನಲ್ಲಿ ಗೆದ್ದ ಇರ್ಫಾನ್ ಪಠಾಣ್
ತೀರ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಒನ್ ವರ್ಲ್ಡ್ ತಂಡ ಗೆಲ್ಲಲು ಕೊನೆ ಓವರ್ನಲ್ಲಿ 6 ರನ್ ಗಳಿಸಬೇಕಿತ್ತು. ಯೂಸುಫ್ ಪಠಾಣ್ ದಾಳಿಗಿಳಿದ್ರು. ಮೊದಲ ನಾಲ್ಕು ಎಸೆತದಲ್ಲಿ ನಾಲ್ಕು ರನ್ ಬಿಟ್ಟುಕೊಟ್ರು. 5ನೇ ಎಸೆತದಲ್ಲಿ ತಮ್ಮ ಇರ್ಫಾನ್ ಪಠಾಣ್ ಚೆಂಡನ್ನ ಸಿಕ್ಸರ್ಗಟ್ಟಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು.
ಸಚಿನ್ ಆಲ್ರೌಂಡರ್ ಆಟ.. ಫ್ಯಾನ್ಸ್ ಖುಷ್..!
ಎಲ್ಲಾ ಅಭಿಮಾನಿಗಳ ಚಿತ್ತ ಕ್ರಿಕೆಟ್ ದೇವರ ಮೇಲೆ ನೆಟ್ಟಿತ್ತು. ಸುದೀರ್ಘ ಸಮಯದ ಬಳಿಕ ಅಂಗಳಕ್ಕಿಳಿದ ಸಚಿನ್ ಫ್ಯಾನ್ಸ್ಗೆ ನಿರಾಸೆ ಮಾಡಲಿಲ್ಲ. ಬೌಲಿಂಗ್ನಲ್ಲಿ ಎರಡು ಪಡೆದು ಸೈ ಅನ್ನಿಸಿಕೊಂಡ್ರೆ, ಬ್ಯಾಟಿಂಗ್ನಲ್ಲಿ ಬಿರುಸಿನ 27 ರನ್ ಗಳಿಸಿ ಆಲ್ರೌಂಡರ್ ಪ್ರದರ್ಶನ ನೀಡಿದ್ರು.
ಸಚಿನ್ ಕನ್ನಡಕ್ಕೆ ಕರುನಾಡಿಗರು ಫಿದಾ..!
ಬರೀ ಬ್ಯಾಟಿಂಗ್-ಬೌಲಿಂಗ್ ಅಷ್ಟೇ ಅಲ್ಲ. ಮಾತಿನಿಂದಲೂ ಸಚಿನ್ ಕನ್ನಡಿಗರ ದಿಲ್ ಗೆದ್ರು. ಪಂದ್ಯಕ್ಕೂ ಮುನ್ನ ಕನ್ನಡದಲ್ಲಿ ಮಾತನಾಡಿದ ತೆಂಡುಲ್ಕರ್ ಎಲ್ಲರಿಗೂ ನಮಸ್ಕಾರ ಎಂದು ಹೇಳಿದ್ರು. ಒಟ್ಟಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ ಲೆಜೆಂಡ್ಸ್ ಕಾಳಗ ನೋಡುಗರಿಗೆ ಸಖತ್ ಕಿಕ್ ಕೊಡ್ತು. ಅದ್ರಲ್ಲೂ ಸಚಿನ್ ಬಾಯಲ್ಲಿ ಕನ್ನಡ ಕೇಳಿದ ಕರುನಾಡಿಗರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಚಿಕ್ಕಬಳ್ಳಾಪುರದಲ್ಲಿ ಒನ್ ಫ್ಯಾಮಿಲಿ, ಒನ್ ವರ್ಲ್ಡ್ ಕಪ್
ಕ್ರಿಕೆಟ್ ದೇವರ ಬಾಯಲ್ಲಿ ಕನ್ನಡದ ಕಂಪು..!
ಸಹೋದರರ ಸವಾಲಿನಲ್ಲಿ ಇರ್ಫಾನ್ ಗೆದ್ದಿದ್ದೇಗೆ..?
ಏಳು ದೇಶಗಳ ದಿಗ್ಗಜರ ಕಾದಾಟ. ಹೈ ಎಕ್ಸ್ಪೆಕ್ಟೇಶನ್, ಹೈ ಎನರ್ಜಿ ಬ್ಯಾಟಲ್ ಎಂದೇ ಬಿಂಬಿತವಾಗಿತ್ತು. ಕೊನೆಗೂ ಆ ನಿರೀಕ್ಷೆ ಹುಸಿಗೊಳ್ಳಲಿಲ್ಲ. ಒನ್ ವರ್ಲ್ಡ್, ಒನ್ ಫ್ಯಾಮಿಲಿ ಕಪ್ನಲ್ಲಿ ಸಚಿನ್ ತೆಂಡೂಲ್ಕರ್ ಬಳಗ ಥ್ರಿಲ್ಲಿಂಗ್ ವಿಕ್ಟರಿ ದಾಖಲಿಸ್ತು. ಕ್ರಿಕೆಟ್ ದೇವರು ಆಲ್ರೌಂಡರ್ ಆಟದ ಮೂಲಕ ಅಭಿಮಾನಿಗಳನ್ನ ರಂಜಿಸಿದ್ರು.
ಸಚಿನ್ ತೆಂಡೂಲ್ಕರ್ ವರ್ಸಸ್ ಯುವರಾಜ್ ಸಿಂಗ್ ತಂಡಗಳ ನಡುವಿನ ಚಾರಿಟಿ ಕದನ. ವಿಶ್ವ ದಿಗ್ಗಜರ ಸಮ್ಮಿಲ್ಲನ. ಇಂತಹ ಲೆಜೆಂಡ್ಸ್ ಬ್ಯಾಟಲ್ನಲ್ಲಿ ಸಚಿನ್ ನಾಯಕತ್ವದ ಒನ್ ವರ್ಲ್ಡ್ ತಂಡ 4 ವಿಕೆಟ್ಗಳ ಗೆಲುವು ದಾಖಲಿಸ್ತು. ಪಂದ್ಯ ತೀರ ಎಕ್ಸೈಟಿಂಗ್ನಿಂದ ಕೂಡಿದ್ದರಿಂದ ಕೊನೆ ಓವರ್ನಲ್ಲಿ ಎಂಡ್ ಆಗಿ ಭರಪೂಜರ ಮನರಂಜನೆ ಉಣಬಡಿಸ್ತು.
ಮ್ಯಾಡಿ ಜಬರ್ದಸ್ತ್ ಆಟ.. ನಡೆಯದ ಬೌಲರ್ಸ್ ಮೋಡಿ..!
ಮೊದಲು ಬ್ಯಾಟ್ ಮಾಡಿದ ಒನ್ ಫ್ಯಾಮಿಲಿ ಬ್ಯಾಟರ್ಸ್ ಆರಂಭದಿಂದಲೇ ಅಟ್ಯಾಕಿಂಗ್ ನಡೆಸಿದ್ರು. ಅಬ್ಬರಿಸಿ ಬೊಬ್ಬಿರಿದ ಡರೆನ್ ಮ್ಯಾಡಿ ಎದುರಾಳಿ ಬೌಲರ್ಗಳನ್ನ ಚೆಂಡಾಡಿದ್ರು. ಸ್ಫೋಟಕ ಅರ್ಧಶತ ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದ್ರು.
ಯೂಸುಫ್ ವೈಲೆಂಟ್.. ಗುಡುಗಿದ ಸಿಕ್ಸರ್ ಕಿಂಗ್..
ಮ್ಯಾಡಿ ನಿರ್ಗಮನದ ಬಳಿಕ ಡೇಂಜರಸ್ ಯೂಸುಫ್ ಪಠಾಣ್ ಹಾಗೂ ಸಿಕ್ಸರ್ ಕಿಂಗ್ ಯುವರಾಜ್ ಕೂಡಿ ರನ್ವೇಗವನ್ನ ಹೆಚ್ಚಿಸಿದ್ರು. ಸಿಕ್ಸರ್-ಬೌಂಡ್ರಿಗಳ ಮಳೆಗರೆದ ಯೂಸುಫ್ ಸ್ಫೋಟಕ 38 ರನ್ ಸಿಡಿಸಿದ್ರೆ ಕ್ಯಾಪ್ಟನ್ ಯುವಿ 10 ಎಸೆತಗಳಲ್ಲಿ ಬಿರುಸಿನ 23 ರನ್ ಗಳಿಸಿದ್ರು. ಫೈನಲಿ ಒನ್ ಫ್ಯಾಮಿಲಿ ತಂಡ 20 ಓವರ್ಗಳಲ್ಲಿ 6 ವಿಕೆಟ್ಗೆ 180 ರನ್ ಬಾರಿಸ್ತು.
ಸವಾಲಿನ ಗುರಿ ಬೆನ್ನಟ್ಟಿದ ಒನ್ ವರ್ಲ್ಡ್ ತಂಡಕ್ಕೆ ಅಲ್ವಿರೋ ಪೀಟರ್ಸನ್ ಆಸರೆಯಾದ್ರು. ದಂಡುಂ ದಶಗುಣಂ ಇನ್ನಿಂಗ್ಸ್ ಕಟ್ಟಿದ ಆಫ್ರಿಕಾ ಬ್ಯಾಟರ್ 74 ರನ್ಗಳ ಕಾಂಟ್ರಿಬ್ಯೂಟ್ ನೀಡಿದ್ರು. ಇವರಿಗೆ ಉತ್ತಮ ಸಾಥ್ ನೀಡಿದ ತೆಂಡುಲ್ಕರ್ 27, ಉಪುಲ್ ತರಂಗ ಬಿರುಸಿನ 29 ರನ್ ಗಳಿಸಿ ಪೆವಿಲಿಯನ್ ಸೇರಿದ್ರು.
ಸಹೋದರರ ಸವಾಲಿನಲ್ಲಿ ಗೆದ್ದ ಇರ್ಫಾನ್ ಪಠಾಣ್
ತೀರ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಒನ್ ವರ್ಲ್ಡ್ ತಂಡ ಗೆಲ್ಲಲು ಕೊನೆ ಓವರ್ನಲ್ಲಿ 6 ರನ್ ಗಳಿಸಬೇಕಿತ್ತು. ಯೂಸುಫ್ ಪಠಾಣ್ ದಾಳಿಗಿಳಿದ್ರು. ಮೊದಲ ನಾಲ್ಕು ಎಸೆತದಲ್ಲಿ ನಾಲ್ಕು ರನ್ ಬಿಟ್ಟುಕೊಟ್ರು. 5ನೇ ಎಸೆತದಲ್ಲಿ ತಮ್ಮ ಇರ್ಫಾನ್ ಪಠಾಣ್ ಚೆಂಡನ್ನ ಸಿಕ್ಸರ್ಗಟ್ಟಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು.
ಸಚಿನ್ ಆಲ್ರೌಂಡರ್ ಆಟ.. ಫ್ಯಾನ್ಸ್ ಖುಷ್..!
ಎಲ್ಲಾ ಅಭಿಮಾನಿಗಳ ಚಿತ್ತ ಕ್ರಿಕೆಟ್ ದೇವರ ಮೇಲೆ ನೆಟ್ಟಿತ್ತು. ಸುದೀರ್ಘ ಸಮಯದ ಬಳಿಕ ಅಂಗಳಕ್ಕಿಳಿದ ಸಚಿನ್ ಫ್ಯಾನ್ಸ್ಗೆ ನಿರಾಸೆ ಮಾಡಲಿಲ್ಲ. ಬೌಲಿಂಗ್ನಲ್ಲಿ ಎರಡು ಪಡೆದು ಸೈ ಅನ್ನಿಸಿಕೊಂಡ್ರೆ, ಬ್ಯಾಟಿಂಗ್ನಲ್ಲಿ ಬಿರುಸಿನ 27 ರನ್ ಗಳಿಸಿ ಆಲ್ರೌಂಡರ್ ಪ್ರದರ್ಶನ ನೀಡಿದ್ರು.
ಸಚಿನ್ ಕನ್ನಡಕ್ಕೆ ಕರುನಾಡಿಗರು ಫಿದಾ..!
ಬರೀ ಬ್ಯಾಟಿಂಗ್-ಬೌಲಿಂಗ್ ಅಷ್ಟೇ ಅಲ್ಲ. ಮಾತಿನಿಂದಲೂ ಸಚಿನ್ ಕನ್ನಡಿಗರ ದಿಲ್ ಗೆದ್ರು. ಪಂದ್ಯಕ್ಕೂ ಮುನ್ನ ಕನ್ನಡದಲ್ಲಿ ಮಾತನಾಡಿದ ತೆಂಡುಲ್ಕರ್ ಎಲ್ಲರಿಗೂ ನಮಸ್ಕಾರ ಎಂದು ಹೇಳಿದ್ರು. ಒಟ್ಟಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ ಲೆಜೆಂಡ್ಸ್ ಕಾಳಗ ನೋಡುಗರಿಗೆ ಸಖತ್ ಕಿಕ್ ಕೊಡ್ತು. ಅದ್ರಲ್ಲೂ ಸಚಿನ್ ಬಾಯಲ್ಲಿ ಕನ್ನಡ ಕೇಳಿದ ಕರುನಾಡಿಗರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್