Advertisment

ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ! ಬಸ್​ ಹಿಂದಿಕ್ಕಲು ಹೋಗಿ ಆಟೋ ಅಪ್ಪಚ್ಚಿ

author-image
Gopal Kulkarni
Updated On
ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ! ಬಸ್​ ಹಿಂದಿಕ್ಕಲು ಹೋಗಿ ಆಟೋ ಅಪ್ಪಚ್ಚಿ
Advertisment
  • ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಸರಣಿ ಅಪಘಾತ
  • ಕೆಎಸ್ಆರ್ಟಿಸಿ ಬಸ್ & ಆಟೋ ಮಧ್ಯೆ ಭೀಕರ ಆ್ಯಕ್ಸಿಡೆಂಟ್
  • ಇಬ್ಬರು ಚಾಲಕರಿಗೂ ಗಂಭೀರ ಗಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆ

ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಸರಣಿ ಅಪಘಾತವಾಗಿದೆ. ಕೆಎಸ್​ಆರ್​ಟಿಸಿ ಬಸ್ ಮತ್ತು ಆಟೋ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು ಪರಿಣಾಮ ಇಬ್ಬರು ಚಾಲಕರು ಗಂಭೀರವಾಗಿ ಗಾಯಗೊಂಡಿದ್ದು ಪಕ್ಕದಲ್ಲಿದ್ದ ವಾಹನಗಳಿಗೂ ಡ್ಯಾಮೇಜ್ ಆಗಿದೆ.

Advertisment

ಅಪಘಾತದ ಭೀಕರತೆ ಎಷ್ಟು ಇತ್ತು ಅಂದ್ರೆ ಡಿವೈಡರ್​ಗೆ ಗುದ್ದಿ ಬಸ್​ ಆಚೆಗೆ ಬಂದಿದೆ. ಬಲಬದಿಯಿಂದ ಬಸ್​ನ್ನು ಓವರ್​ಟೇಕ್​ ಮಾಡಲು ಬಂದ ಆಟೋ ಚಾಲಕ ಬಸ್​ ಹಾಗೂ ಡಿವೈಡರ್​ ನಡುವೆ ಸಿಲುಕಿ ಇಡೀ ಆಟೋವೇ ಜಖಂಗೊಂಡಿದೆ. ಇದರ ಜೊತೆಗೆ ಒಂದು ಕಾರ್​ನ ಹಿಂಭಾಗವೂ ಕೂಡ ಛಿದ್ರಗೊಂಡಿದ್ದು, ಖಾಸಗಿ ಬಸ್​ಗೂ ಕೂಡ ಹಾನಿಯುಂಟಾಗಿದೆ.'

ಇದನ್ನೂ ಓದಿ:ಸ್ನೇಹಿತೆ ಸೋಗಿನಲ್ಲಿ ಚಿನ್ನದ ಉದ್ಯಮಿಗೆ ವಂಚನೆ ಕೇಸ್; ಇಂದು ಪೊಲೀಸರ ಎದುರು ವರ್ತೂರು​ ಪ್ರಕಾಶ್ ಹಾಜರ್

ಇನ್ನು ಇಬ್ಬರೂ ಚಾಲಕರಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಿನ್ನೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment