Advertisment

ವಿಮಾನ ದುರಂತದಲ್ಲಿ ಒಂದು ಪವಾಡ.. ಓರ್ವ ಬದುಕಿರುವ ಬಗ್ಗೆ ಕಮಿಷನರ್ ಮಾಹಿತಿ..

author-image
Ganesh
Updated On
ವಿಮಾನ ದುರಂತದಲ್ಲಿ ಒಂದು ಪವಾಡ.. ಓರ್ವ ಬದುಕಿರುವ ಬಗ್ಗೆ ಕಮಿಷನರ್ ಮಾಹಿತಿ..
Advertisment
  • ಗುಜರಾತ್​ನ ಅಹ್ಮದಾಬಾದ್​ನಲ್ಲಿ ಘನ ಘೋರ ದುರಂತ
  • ವಿಮಾನ ಪತನದಲ್ಲಿ ಸ್ಥಳೀಯರು ಜೀವ ಕಳೆದುಕೊಂಡಿದ್ದಾರೆ
  • ಎಂಬಿಬಿಎಸ್ ಹಾಸ್ಟೆಲ್​ ಮೇಲೆ ಪತನಗೊಂಡಿರುವ ವಿಮಾನ

ಅಹ್ಮದಾಬಾದ್​ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಜೀವಹಾನಿಯಾದ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ದಟ್ಟವಾಗಿದೆ.

Advertisment

ಅಲ್ಲಿನ ಪೊಲೀಸ್ ಆಯುಕ್ತ GS ಮಲಿಕ್ ನೀಡಿದ ಮಾಹಿತಿ ಪ್ರಕಾರ.. ವಿಮಾನ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ತೋರುತ್ತದೆ. ವಿಮಾನವು ವಸತಿ ಪ್ರದೇಶದಲ್ಲಿ ಪತನಗೊಂಡ ಕಾರಣ ಕೆಲವು ಸ್ಥಳೀಯರೂ ಜೀವ ಕಳೆದುಕೊಂಡಿದ್ದಾರೆ. ಆದಾಗ್ಯೂ ಓರ್ವ ವ್ಯಕ್ತಿ ಬದುಕುಳಿದಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತವನ್ನ ಬೆಚ್ಚಿಬೀಳಿಸಿದ 10 ಘೋರ ವಿಮಾನ ದುರಂತಗಳು.. ಒಂದಕ್ಕಿಂತ ಒಂದು ಕರಾಳ ಅಪಘಾತಗಳು..

ಅಹ್ಮದಾಬಾದ್​ ಏರ್​ಪೋರ್ಟ್​ನಿಂದ (Ahmedabad airport) ಏರ್ ಇಂಡಿಯಾ ವಿಮಾನ (Air India ) ಟೇಕ್ ಆಫ್ ಆದ ಐದು ನಿಮಿಷದಲ್ಲಿ ಮೇಘನಿನಗರ್​​ (Meghaninagar)ದಲ್ಲಿ ಪತನಗೊಂಡಿದೆ. ವಿಮಾನದಲ್ಲಿ ಗುಜರಾತ್​​ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ (Vijay Rupani) ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಅವರಲ್ಲಿ 230 ಪ್ರಯಾಣಿಕರು, 12 ಮಂದಿ ಸಿಬ್ಬಂದಿಯಿದ್ದರು. 242 ಪ್ರಯಾಣಿಕರಲ್ಲಿ 169 ಭಾರತೀಯರು, 53 ಬ್ರಿಟಿಷ್, ಒಂದು ಕೆನಡಾ, ಪೋರ್ಚುಗಿಸ್ ಪ್ರಜೆಗಳು ವಿಮಾನದಲ್ಲಿದ್ದರು.

Advertisment

ಇದನ್ನೂ ಓದಿ: ಇದೇ ವಿಮಾನ ನಿಲ್ದಾಣದಲ್ಲಿ ನಡೆದಿತ್ತು ಘನ ಘೋರ ದುರಂತ.. 37 ವರ್ಷಗಳ ಬಳಿಕ ಮತ್ತೊಂದು ಅಪಘಾತ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment