ಅನ್ನದಾತರಿಗೆ ಭರ್ಜರಿ ಗುಡ್​​ನ್ಯೂಸ್​.. KRS ಡ್ಯಾಂ ಭರ್ತಿಗೆ ಬೇಕು ಕೆಲವೇ ಕೆಲವು ಅಡಿ ನೀರು..!

author-image
Veena Gangani
Updated On
ರೈತರಿಗೆ ಗುಡ್​ನ್ಯೂಸ್​​.. ಕೆಆರ್​ಎಸ್ ಡ್ಯಾಮ್​​​ ನೀರಿನ ಮಟ್ಟ ಎಷ್ಟಿದೆ ಗೊತ್ತಾ?
Advertisment
  • ಮಂಡ್ಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರೋ KRS ಡ್ಯಾಂ
  • ದಿಢೀರನೇ ಕಾವೇರಿ ಜಲಾನಯನ ಪ್ರದೇಶದಲ್ಲಿ ತಗ್ಗಿದ ಮಳೆ
  • ಜೂನ್ ತಿಂಗಳಿನಲ್ಲಿಯೇ ಡ್ಯಾಂ ಭರ್ತಿಯಾದ್ರೆ ಹೊಸ ದಾಖಲೆ

ಮಂಡ್ಯ: ಮೊನ್ನೆಯಷ್ಟೇ ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಕೆ‌ಆರ್‌ಎಸ್ ಡ್ಯಾಂನ ಒಳಹರಿವು ಹೆಚ್ಚಾಗಿತ್ತು. ಮಂಡ್ಯ ಶ್ರೀರಂಗಪಟ್ಟಣ ತಾಲೂಕಿನ ಕೆ‌ಆರ್‌ಎಸ್ ಡ್ಯಾಂನಲ್ಲಿ ಆಗ ದಿಢೀರನೇ 16 ಸಾವಿರ ಕ್ಯೂಸೆಕ್​ಗೆ ಒಳಹರಿವು ಏರಿಕೆಯಾಗಿತ್ತು.

ಇದನ್ನೂ ಓದಿ: ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿದ್ದ.. ಈಗ 2500 ಕೋಟಿ ಒಡೆಯ.. ಯಾರು ಈ ಸ್ಟಾರ್​ ಹೀರೋ?

ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ತಗ್ಗಿದೆ. ಹೀಗಾಗಿ ಕೆಆರ್‌ಎಸ್ ಡ್ಯಾಂನ ಒಳಹರಿವು ಕುಗ್ಗಿದೆ. ಇನ್ನೂ ಈ ನಡುವೆ 13,359 ಕ್ಯೂಸೆಕ್‌ಗೆ ಡ್ಯಾಂ‌ ಒಳಹರಿವು ಇಳಿದಿದೆ. ಸದ್ಯ ಕೆಆರ್‌ಎಸ್ ಡ್ಯಾಂ ಭರ್ತಿಗೆ ಕೇವಲ 5 ಅಡಿ ಮಾತ್ರ ಬೇಕಿದೆ. ಹೀಗಾಗಿ ಇತಿಹಾಸ ನಿರ್ಮಿಸುವ ತವಕದಲ್ಲಿದೆ. ಜೂನ್ ತಿಂಗಳಿನಲ್ಲಿಯೇ ಭರ್ತಿಯಾದ್ರೆ ಹೊಸ ದಾಖಲೆ ನಿರ್ಮಾಣವಾಗುತ್ತದೆ.

ಆದ್ರೆ ಈ‌‌ ಹೊತ್ತಿನಲ್ಲಿ ಒಳಹರಿವು ಕಡಿಮೆಯಾಗಿದೆ. 124.80 ಅಡಿಯ‌ ಕೆಆರ್‌ಎಸ್ ಡ್ಯಾಂ 119.40 ಅಡಿಯಷ್ಟು ಭರ್ತಿಯಾಗಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 42.291 ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಂನಿಂದ 1,664 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment