ಅವರೇ ನಮ್ಮ ಹೀರೋ.. ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರು ರಜತ್ ಪಾಟೀದಾರ್..?

author-image
Ganesh
Updated On
ಆರ್​ಸಿಬಿಗೆ ಪದೇ ಪದೆ ಕೈಕೊಡ್ತಿದ್ದಾರೆ 3 ಸೂಪರ್ ಸ್ಟಾರ್ಸ್​.. ಪ್ಲೇ ಆಫ್​ ಅಂಚಿನಲ್ಲಿ ಟೆನ್ಶನ್..!
Advertisment
  • ಮುಂಬೈ ಇಂಡಿಯನ್ಸ್​ ಸೋಲಿಸಿದ ನಮ್ಮ ಆರ್​ಸಿಬಿ
  • 12 ರನ್​ಗಳ ರೋಚಕ ಗೆಲುವು ಸಾಧಿಸಿದ ಆರ್​ಸಿಬಿ
  • ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಏನಂದ್ರು ಕ್ಯಾಪ್ಟನ್..?

ಐಪಿಎಲ್​​ನಲ್ಲಿ ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ರಣ ರೋಚಕ ಪಂದ್ಯ ನಡೆಯಿತು. ಬಿಗ್ ಸ್ಕೋರಿಂಗ್ ಪಂದ್ಯದಲ್ಲಿ ಬೆಂಗಳೂರು ತಂಡವು 12 ರನ್‌ಗಳ ರೋಮಾಂಚಕ ಗೆಲುವು ಸಾಧಿಸಿದೆ.

ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ರನ್ ಗಳಿಸಿದರೂ ಗೆಲುವಿನ ನಂತರ RCB ಕ್ಯಾಪ್ಟನ್ ರಜತ್ ಪಾಟೀದಾರ್, ಬೌಲರ್​ಗಳು ರಿಯಲ್ ಹೀರೋ ಎಂದು ಬಣ್ಣಿಸಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ (67 ) ಮತ್ತು ರಜತ್ ಪಾಟೀದಾರ್ (64 ರನ್) ಅವರ ಅರ್ಧಶತಕಗಳ ನೆರವಿನಿಂದ ಆರ್​ಸಿಬಿ 5 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಮುಂಬೈ ಇಂಡಿಯನ್ಸ್, 9 ವಿಕೆಟ್‌ ಕಳೆದುಕೊಂಡು 209 ರನ್‌ಗಳಿಸಿ ಸೋಲನ್ನು ಒಪ್ಪಿಕೊಳ್ತು.

ಇದನ್ನೂ ಓದಿ: ಕೊನೆ ಬಾಲ್​ವರೆಗೆ ರಣರೋಚಕ ಐಪಿಎಲ್ ಮ್ಯಾಚ್.. ಮುಂಬೈ ವಿರುದ್ಧ RCB ಜಯಭೇರಿ

ಪಂದ್ಯ ಮುಗಿದ ಬಳಿಕ ‘ಪಂದ್ಯ ಶ್ರೇಷ್ಠ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿರುವ ಪಾಟೀದಾರ್, ನಮ್ಮ ಬೌಲರ್​ಗಳ ಧೈರ್ಯ ಶ್ಲಾಘನೀಯ. ಈ ಪ್ರಶಸ್ತಿ (ಪಂದ್ಯಶ್ರೇಷ್ಠ)ಯು ಇಡೀ ಬೌಲಿಂಗ್ ಘಟಕಕ್ಕೆ ಸಲ್ಲುತ್ತದೆ. ನಿಜಕ್ಕೂ ಅದ್ಭುತ ಪಂದ್ಯವಾಗಿತ್ತು. ಬೌಲರ್‌ಗಳು ತೋರಿಸಿದ ಧೈರ್ಯ ಅದ್ಭುತ. ಈ ಮೈದಾನದಲ್ಲಿ ಬ್ಯಾಟಿಂಗ್ ಘಟಕವನ್ನು ಕಂಟ್ರೋಲ್ ಮಾಡೋದು ಸುಲಭ ಇಲ್ಲ. ಹಾಗಾಗಿ ಗೆಲುವಿನ ಶ್ರೇಯಸು ಬೌಲರ್​​ಗಳಿಗೆ ಸಲ್ಲುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಕೇಂದ್ರದಿಂದ ಮತ್ತೊಂದು ಶಾಕ್; ಇಂದಿನಿಂದ ಅಡುಗೆ ಗ್ಯಾಸ್​ ಸಿಲಿಂಡರ್​ ಬೆಲೆಯಲ್ಲಿ ಭಾರೀ ಏರಿಕೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment