/newsfirstlive-kannada/media/post_attachments/wp-content/uploads/2024/10/BBK11-5-1.jpg)
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆ ಅಬ್ಬರ ಜೋರಾಗಿದೆ. ಇಂದು ಸಂಜೆ 6.00 ಗಂಟೆಯಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಯ ಎಪಿಸೋಡ್ ಪ್ರಸಾರವಾಗಲಿದೆ. 117 ದಿನಗಳ ಕಾಲ ಪ್ರಸಾರವಾಗುತ್ತಿದ್ದ ವೀಕ್ಷಕರ ನೆಚ್ಚಿನ ರಿಯಾಲಿಟಿ ಶೋ ಇನ್ನೂ ಒಂದು ದಿನದಲ್ಲಿ ಮುಕ್ತಾಯಗೊಳ್ಳಲಿದೆ.
ಬಿಗ್ಬಾಸ್ ಮನೆಯಲ್ಲಿ 6 ಫೈನಲಿಸ್ಟ್ಗಳು ಉಳಿದುಕೊಂಡಿದ್ದಾರೆ. ಈ 6ರಲ್ಲಿ ಒಬ್ಬರಿಗೆ ಮಾತ್ರ ಬಿಗ್ಬಾಸ್ ಟ್ರೋಫಿ ಅವರ ಕೈ ಸೇರಲಿದೆ. ಕನ್ನಡದ ವೀಕ್ಷಕರ ನೆಚ್ಚಿನ ಶೋ ಬಿಗ್ಬಾಸ್ ಸೀಸನ್ 11 ಶುರುವಾಗಿ ಇಂದಿಗೆ 117 ದಿನಗಳನ್ನು ಕಳೆದಿವೆ. ಈಗಾಗಲೇ ಬಿಗ್ಬಾಸ್ ಮನೆಗೆ 20 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಆ 20 ಸ್ಪರ್ಧಿಗಳಲ್ಲಿ ಈಗ ಬಿಗ್ಬಾಸ್ ಮನೆಯಲ್ಲಿ 6 ಫೈನಲಿಸ್ಟ್ಗಳು ಇದ್ದಾರೆ.
ಇದನ್ನೂ ಓದಿ:BiggBoss Finale! ಬಿಗ್ಬಾಸ್ ಮೊದಲ ಸೀಸನ್ನಿಂದ ಇಲ್ಲಿವರೆಗೆ ಕಪ್ ಗೆದ್ದಿರೋರ ಲಿಸ್ಟ್
ಮೊದಲು ಬಿಗ್ಬಾಸ್ ಮನೆಗೆ 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. 17 ಸ್ಪರ್ಧಿಗಳು ಮೊದಲ ಇಬ್ಬರು ಸ್ಪರ್ಧಿಗಳಾದ ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಗೌತಮಿ ಜಾದವ್ ಎಮಟ್ರಿ ಕೊಟ್ಟಿದ್ದರು. ಇದಾದ ಬಳಿಕ ಒಬ್ಬರಾದ ಮೇಲೆ ಒಬ್ಬರು ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಇನ್ನೂ ಈ ಬಾರಿಯ ಬಿಗ್ಬಾಸ್ ಹೊಸ ಅಧ್ಯಾಯ ಎಂಬ ಟ್ಯಾಗ್ ಲೈನ್ನೊಂದಿಗೆ ಶುರುವಾಗಿತ್ತು.
ಬಿಗ್ಬಾಸ್ ಶುರುವಿನ ಮೊದಲೇ ಕಿಚ್ಚ ಸುದೀಪ್ ಸೀಸನ್ 11 ಹೊಸ ಅಧ್ಯಾಯ ಎಂದು ಅನೌನ್ಸ್ ಮಾಡಿದ್ದರು. ಹೊಸ ಅಧ್ಯಾಯ ಅನ್ನೋ ಮಾತಿಗೆ ಸ್ವರ್ಗ, ನರಕವೇ ಸಾಕ್ಷಿಯಾಗಿತ್ತು. ಬಿಗ್ಬಾಸ್ ಒಂದೇ ಮನೆಯಲ್ಲಿ ಈ ಬಾರಿ ಎರಡು ಬಾಗಿಲನ್ನು ಹಾಕಲಾಗಿತ್ತು. ಇಲ್ಲೇ ಸ್ವರ್ಗ, ಇಲ್ಲೇ ನರಕ ಅನ್ನೋ ರೀತಿಯಲ್ಲಿ ಬಿಗ್ ಬಾಸ್ ಸೀಸನ್ 11ರ ಮನೆಯನ್ನು ಸಿದ್ಧಪಡಿಸಲಾಗಿತ್ತು. ಬಿಗ್ಬಾಸ್ ಮನೆಯಲ್ಲಿ ರಾಜ ವೈಭೋಗದ ಸ್ವರ್ಗವೂ ಇದೆ. ಯಮಲೋಕವನ್ನೇ ಧರೆಗಿಳಿಸುವ ನರಕವೂ ಇಲ್ಲೇ ಇದೆ ಎಂದು ಹೇಳಿದ್ದರು ಕಿಚ್ಚ ಸುದೀಪ್.
ಇನ್ನೂ, ಮೊದಲು ಬಿಗ್ಬಾಸ್ ಮನೆಯ ನರಕಕ್ಕೆ 7 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಸ್ವರ್ಗಕ್ಕೆ 10 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಈ ಸ್ವರ್ಗ, ನರಕ ಎಂಬ ಕಾನ್ಸೆಪ್ಟ್ನಲ್ಲಿಯೇ ಬಿಗ್ಬಾಸ್ ಹೊಸ ಅಧ್ಯಾಯ ಶುರುವಾಗಿತ್ತು. ಆದ್ರೆ ಇದಾದ ನಾಲ್ಕನೇ ವಾರಕ್ಕೆ ಬಿಗ್ಬಾಸ್ ಸ್ವರ್ಗ, ನರಕ ಎಂಬ ಕಾನ್ಸೆಪ್ಟ್ ಅನ್ನು ನಿಲ್ಲಿಸಿದ್ದರು. ಅಚ್ಚರಿ ಎಂದರೆ ಈ ಹಿಂದಿನ ಸೀಸನ್ಗಳಂತೆ ಈ ಬಾರಿಯಲ್ಲೂ ಇಬ್ಬರು ಸ್ಪರ್ಧಿಗಳನ್ನು ಕಿಕ್ ಔಟ್ ಮಾಡಲಾಗಿತ್ತು.
ಬಿಗ್ಬಾಸ್ ಮನೆಗೆ ಸಖತ್ ಸ್ಟ್ರಾಂಗ್ ಆಗಿ ಎಂಟ್ರಿ ಕೊಟ್ಟಿದ್ದ ಕಿರುತೆರೆ ನಟ ರಂಜಿತ್ ಬಿಗ್ಬಾಸ್ ಮನೆಯಿಂದ ಮೂರನೇ ವಾರಕ್ಕೆ ಆಚೆ ಹಾಕಲಾಗಿತ್ತು. ಸಾಕಷ್ಟು ಕನಸ್ಸನ್ನು ಹೊತ್ತು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ರಂಜಿತ್ ಲಾಯರ್ ಜಗದೀಶ್ ಅವರನ್ನು ಜೋರಾಗಿ ತಳ್ಳಿದ್ದರು. ಹೀಗಾಗಿ ಬಿಗ್ಬಾಸ್ ನಿರ್ಧಾರದ ಮೇಲೆ ಲಾಯರ್ ಜಗದೀಶ್ ಅವರನ್ನು ಮುಖ್ಯ ದ್ವಾರದಿಂದ ಆಚೆ ಕಳುಹಿಸಿದ್ದಾರೆ. ಬಳಿಕ ಎಲ್ಲರನ್ನು ಮತ್ತೆ ಕರೆದ ಬಿಗ್ಬಾಸ್ ನಟ ರಂಜಿತ್ ಅವರನ್ನು ಕೂಡ ಆಚೆ ಕಳುಹಿಸಿದ್ದರು.
ಇದನ್ನೂ ಓದಿ: BBK11: ಶ್ರುತಿ ಬಿಟ್ಟರೆ ಯಾರೂ ಗೆಲ್ಲಲಿಲ್ಲ.. ಬಿಗ್ ಬಾಸ್ ಸೀಸನ್ 3 ರಿಸಲ್ಟ್ ರಿಪೀಟ್ ಆಗುತ್ತಾ?
ಇದು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಬಿಗ್ಬಾಸ್ 50ನೇ ದಿನಕ್ಕೆ ಕಾಲಿಟ್ಟ ಬಳಿಕ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಅರ್ಧಕ್ಕೆ ವಾಕೌಟ್ ಮಾಡಿದ್ದರು. ನನಗೆ ಇಲ್ಲಿ ಇರೋದಕ್ಕೆ ಆಗುತ್ತಿಲ್ಲ. ವೈಯಕ್ತಿಕ ಸಮಸ್ಯೆಗಳಿಂದ ನನಗೆ ಆಟ ಆಡೋದಕ್ಕೆ ಆಗುತ್ತಿಲ್ಲ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದರು. ಹೀಗಾಗಿ ಕಿಚ್ಚ ಸುದೀಪ್ ಅವರು ಶೋಭಾ ಶೆಟ್ಟಿಯನ್ನು ಬಿಗ್ಬಾಸ್ ಮನೆಯಿಂದ ಆಚೆ ಕಳುಹಿಸಿದ್ದರು.
ಇದಾದ ಬಳಿಕ ಅಚ್ಚರಿ ಎಂಬಂತೆ ಬಿಗ್ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಆಚೆ ಬಂದಿದ್ದರು. ಆದ್ರೆ ಗೋಲ್ಡ್ ಸುರೇಶ್ ಆಚೆ ಬಂದಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅವರ ತಂದೆ ನಿಧನರಾಗಿದ್ದಾರೆ ಎನ್ನುವ ಮಾತುಗಳು ಹರಿದಾಡಿತ್ತು. ಇದಾದ ಬಳಿಕ ಖುದ್ದು ಗೋಲ್ಡ್ ಸುರೇಶ್ ಅವರೇ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದರು. ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ನನ್ನ ಪತ್ನಿಗೆ ನನ್ನ ಬ್ಯುಸಿನೆಸ್ ನೋಡಿಕೊಳ್ಳಲು ಹೇಳಿ ಹೋಗಿದ್ದೆ. ನಾನು ನನ್ನದೇ ಆದ ಬ್ಯುಸಿನೆಸ್ ಮಾಡುತ್ತಿದ್ದೇನೆ. ಅದನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಆದರೆ ನನ್ನ ಪತ್ನಿಗೆ ಬ್ಯುಸಿನೆಸ್ ಹ್ಯಾಂಡಲ್ ಮಾಡಲು ಆಗಿಲ್ಲ. ಕೆಲಸ ಒತ್ತಡದಿಂದಾಗಿ ಅದು ಅವರಿಂದ ಸಾಧ್ಯವಾಗಿಲ್ಲ. ಅವರಿಗೆ ಗೊಂದಲ ಉಂಟಾಗಿತ್ತು. ಹಾಗಾಗಿ ನಾನು ಹೊರಗೆ ಬಂದು ಅದನ್ನು ನೋಡಿಕೊಳ್ಳಬೇಕಿತ್ತು. ಹಾಗಾಗಿ ಹೊರಗಡೆ ಬರಬೇಕಾಯಿತು ಎಂದು ಸುರೇಶ್ ಹೇಳಿ ಸುಳ್ಳು ಸುದ್ದಿಗೆ ತೆರೆ ಎಳೆದಿದ್ದರು.
ಇನ್ನುಳಿದಂತೆ 10 ಮಂದಿಯನ್ನು ವೋಟಿಂಗ್ ಆಧಾರದ ಮೇಲೆ ಔಟ್ ಆಗಿದ್ದರು. ಉಳಿದಿರುವ 6 ಸ್ಪರ್ಧಿಗಳಲ್ಲಿ ಯಾರು ಟೈಟಲ್ ಗೆಲ್ಲುತ್ತಾರೆ? ಯಾರು ರನ್ನರ್ ಅಪ್ ಆಗ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಒಟ್ಟಿನಲ್ಲಿ ಇಂದು ಸಂಜೆ 6 ಗಂಟೆಯಿಂದ ಕಲರ್ಸ್ ಕನ್ನಡದಲ್ಲಿ ಗ್ರ್ಯಾಂಡ್ ಫಿನಾಲೆ ಶುರುವಾಗಲಿದೆ. ವೀಕ್ಷಕರಿಗೆ ಭರ್ಜರಿ ಮನರಂಜನೆ ಸಿಗಲಿದೆ. ಟ್ರೋಫಿ ಗೆದ್ದವರಿಗೆ ಆಕರ್ಷಕ ಟೈಟಲ್ ಜೊತೆಗೆ 50 ಲಕ್ಷ ನಗದು ಬಹುಮಾನ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ