ಪಾರು ಸೀರಿಯಲ್ ನಟ ಶ್ರೀಧರ್ ದಿಢೀರ್‌ ಅಸ್ವಸ್ಥ.. ಬೆಂಗಳೂರಿನ ಆಸ್ಪತ್ರೆಗೆ ದಾಖಲು; ಏನಾಯ್ತು?

author-image
Veena Gangani
Updated On
ಪಾರು ಸೀರಿಯಲ್ ನಟ ಶ್ರೀಧರ್ ದಿಢೀರ್‌ ಅಸ್ವಸ್ಥ.. ಬೆಂಗಳೂರಿನ ಆಸ್ಪತ್ರೆಗೆ ದಾಖಲು; ಏನಾಯ್ತು?
Advertisment
  • ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಶ್ರೀಧರ್
  • ವಧು ಸೀರಿಯಲ್​ನಲ್ಲಿ ಚಿಕ್ಕಪ್ಪನ ಪಾತ್ರದಲ್ಲಿ ಅಭಿನಯಿಸುತ್ತಿದ್ದ ನಟ
  • ಸಹಾಯದ ನಿರೀಕ್ಷೆಯಲ್ಲಿದ್ದಾರೆ ಸಂಕಷ್ಟದಲ್ಲಿರೋ ಕಿರುತೆರೆ ಶ್ರೀಧರ್

ಕನ್ನಡ ಕಿರುತೆರೆಯ ಸೂಪರ್​​ ಹಿಟ್​ ಧಾರಾವಾಹಿಗಳಲ್ಲಿ ಪಾರು ಕೂಡ ಒಂದಾಗಿದೆ. ಪಾರು, ವಧು ಸೀರಿಯಲ್‌ನಲ್ಲಿ ನಾಯಕಿ ಡಿವೋರ್ಸ್ ಲಾಯರ್‌ ವಧು ಚಿಕ್ಕಪ್ಪನ ಪಾತ್ರದಲ್ಲಿ ನಟ ಶ್ರೀಧರ್‌ ಅಭಿನಯಿಸುತ್ತಿದ್ದರು. ಆದರೆ, ದಿಢೀರ್‌ ಅಂತ ನಟ ಶ್ರೀಧರ್ ಅವರು ಆಸ್ಪತ್ರೆಯ ಬೆಡ್​ ಮೇಲೆ ಮಲಗಿಕೊಂಡಿರೋ ಫೋಟೋವೊಂದು ವೈರಲ್ ಆಗಿದೆ.

ಇದನ್ನೂ ಓದಿ:ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ನಿಶ್ಚಿತಾರ್ಥ.. ಸ್ನೇಹಾಗೆ ಸಾಹೇಬ್ರ ಮೇಲಿರೋ ಪ್ರೀತಿಗೆ ಟ್ವಿಸ್ಟ್

publive-image

ಹೌದು, ನಟ ಶ್ರೀಧರ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇನ್‌ಫೆಕ್ಷನ್‌ನಿಂದಾಗಿ ನಟ ಶ್ರೀಧರ್‌ ತೀವ್ರ ಅಸ್ವಸ್ಥರಾಗಿದ್ದಾರೆ. ಸದ್ಯ ನಟ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾರು, ವಧು ಹಲವು ಸೀರಿಯಲ್‌ಗಳಲ್ಲಿ ನಟ ಶ್ರೀಧರ್‌ ಅಭಿನಯಿಸಿದ್ದಾರೆ.

publive-image

ಅಲ್ಲದೇ ಕಿಚ್ಚ ಸುದೀಪ್‌ ನಟನೆಯ ಕೆಲವೇ ತಿಂಗಳ ಹಿಂದೆಯಷ್ಟೇ ರಿಲೀಸ್ ಆದ ‘ಮ್ಯಾಕ್ಸ್’ ಸಿನಿಮಾದಲ್ಲೂ ಶ್ರೀಧರ್‌ ನಟಿಸಿದ್ದರು. ಆದ್ರೆ ಈಗಹ ಅಚ್ಚರಿ ಎಂಬಂತೆ ಶ್ರೀಧರ್‌ ತಮ್ಮ ಚಿಕಿತ್ಸೆಗಾಗಿ ಜನರಲ್ಲಿ ಸಹಾಯ ಕೋರಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶ್ರೀಧರ್‌ ವಧು ಸೀರಿಯಲ್​ನಿಂದ ಆಚೆ ಬಂದಿದ್ದರು. ಶ್ರೀಧರ್‌ ನಿರ್ವಹಿಸುತ್ತಿದ್ದ ಪಾತ್ರಕ್ಕೆ ಬೇರೆ ನಟನ ಎಂಟ್ರಿಯಾಗಿತ್ತು.

ಕಮಲಿ ಸೀರಿಯಲ್ ನಟಿ ಅಂಕಿತಾ ಅವರು ಈ ಬಗ್ಗೆ ಮಾತಾಡಿ ಇದ್ದಕ್ಕಿದ ಹಾಗೆ ಅನಾರೋಗ್ಯಕ್ಕೆ ತುತ್ತಾಗಿ ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅವರನ್ನು ಅಡ್ಮಿಟ್ ಮಾಡಲಾಗಿದೆ. ದಯಮಾಡಿ ತಾವೆಲ್ಲರೂ ಶ್ರೀಧರನಿಗೆ ಕೈಲಾದ ಹಣದ ಸಹಾಯ ಮಾಡಬೇಕೆಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದೇನೆ. ನಿಮಗೆ ಕೈಲಾದಷ್ಟು ಹಣದ ಸಹಾಯ ಮಾಡಿ ಎಂದು ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment