ರೈಫಲ್ನಿಂದ ಹಾರಿದ ಗುಂಡಿಗೆ ಪಿಎಸಿ ಕಾನ್ಸ್ಟೇಬಲ್ ಸಾವು
ಕುತ್ತಿಗೆ ಭಾಗಕ್ಕೆ ಗುಂಡು ತಗುಲಿ ಸಾವನ್ನಪ್ಪಿದ ಕಾನ್ಸ್ಟೇಬಲ್
PAC 25 ಬೆಟಾಲಿಯನ್ ರಾಯ್ ಬರೇಲಿ ಬಿ ಕಂಪನಿಯ ಕಾನ್ಸ್ಟೆಬಲ್
ಅಯೋಧ್ಯೆ: ರಾಮಜನ್ಮಭೂಮಿ ಸಂಕೀರ್ಣದ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪಿಎಸಿ ಕಾನ್ಸ್ಟೇಬಲ್ವೊಬ್ಬರು ಆಕಸ್ಮಿಕವಾಗಿ ಹಾರಿದ ಗುಂಡಿಗೆ ಬಲಿಯಾಗಿದ್ದಾರೆ. ಬಂದೂಕು ಸ್ವಚ್ಛಗೊಳಿಸುವ ಸಮಯದಲ್ಲಿ ಗುಂಡು ಹಾರಿದ್ದು, ಇದರಿಂದಾಗಿ ಕುಲದೀಪ್ ಕುಮಾರ್ ತ್ರಿಪಾಠಿ ಸಾವನ್ನಪ್ಪಿದ್ದಾರೆ.
ಶುಕ್ರವಾರ ಮುಂಜಾನೆ 6:15ಕ್ಕೆ ಘಟನೆ ನಡೆದಿದೆ. ಕುಲದೀಪ್ ಮಳೆಯ ನೀರು ರೈಫಲ್ ಒಳಗೆ ಹೋಗಿದೆ ಎಂದು ಸ್ಪಚ್ಛ ಮಾಡುತ್ತಿದ್ದರು. ಆದರೆ ಈ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದೆ. ಕುತ್ತಿಗೆ ಭಾಗಕ್ಕೆ ಗುಂಡು ತಗುಲಿದಂತೆ ರಕ್ತ ಹರಿದಿದೆ. ತಕ್ಷಣವೇ ಅವರನ್ನು ಆಸ್ಪತ್ರೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾರೆ.
ಕುಲದೀಪ್ ಕುಮಾರ್ ತ್ರಿಪಾಠಿ, 30 ವರ್ಷ ವಯಸ್ಸಿನವರಾಗಿದ್ದು, 2019 ಬ್ಯಾಚ್ನವರಾಗಿದ್ದರು. ಪಿಎಸಿ 25 ಬೆಟಾಲಿಯನ್ ರಾಯ್ ಬರೇಲಿ ಬಿ ಕಂಪನಿಯ ಕಾನ್ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಆಕಸ್ಮಿಕ ಗುಂಡು ತಗುಲಿ ಸಾವನ್ನಪ್ಪಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರೈಫಲ್ನಿಂದ ಹಾರಿದ ಗುಂಡಿಗೆ ಪಿಎಸಿ ಕಾನ್ಸ್ಟೇಬಲ್ ಸಾವು
ಕುತ್ತಿಗೆ ಭಾಗಕ್ಕೆ ಗುಂಡು ತಗುಲಿ ಸಾವನ್ನಪ್ಪಿದ ಕಾನ್ಸ್ಟೇಬಲ್
PAC 25 ಬೆಟಾಲಿಯನ್ ರಾಯ್ ಬರೇಲಿ ಬಿ ಕಂಪನಿಯ ಕಾನ್ಸ್ಟೆಬಲ್
ಅಯೋಧ್ಯೆ: ರಾಮಜನ್ಮಭೂಮಿ ಸಂಕೀರ್ಣದ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪಿಎಸಿ ಕಾನ್ಸ್ಟೇಬಲ್ವೊಬ್ಬರು ಆಕಸ್ಮಿಕವಾಗಿ ಹಾರಿದ ಗುಂಡಿಗೆ ಬಲಿಯಾಗಿದ್ದಾರೆ. ಬಂದೂಕು ಸ್ವಚ್ಛಗೊಳಿಸುವ ಸಮಯದಲ್ಲಿ ಗುಂಡು ಹಾರಿದ್ದು, ಇದರಿಂದಾಗಿ ಕುಲದೀಪ್ ಕುಮಾರ್ ತ್ರಿಪಾಠಿ ಸಾವನ್ನಪ್ಪಿದ್ದಾರೆ.
ಶುಕ್ರವಾರ ಮುಂಜಾನೆ 6:15ಕ್ಕೆ ಘಟನೆ ನಡೆದಿದೆ. ಕುಲದೀಪ್ ಮಳೆಯ ನೀರು ರೈಫಲ್ ಒಳಗೆ ಹೋಗಿದೆ ಎಂದು ಸ್ಪಚ್ಛ ಮಾಡುತ್ತಿದ್ದರು. ಆದರೆ ಈ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದೆ. ಕುತ್ತಿಗೆ ಭಾಗಕ್ಕೆ ಗುಂಡು ತಗುಲಿದಂತೆ ರಕ್ತ ಹರಿದಿದೆ. ತಕ್ಷಣವೇ ಅವರನ್ನು ಆಸ್ಪತ್ರೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾರೆ.
ಕುಲದೀಪ್ ಕುಮಾರ್ ತ್ರಿಪಾಠಿ, 30 ವರ್ಷ ವಯಸ್ಸಿನವರಾಗಿದ್ದು, 2019 ಬ್ಯಾಚ್ನವರಾಗಿದ್ದರು. ಪಿಎಸಿ 25 ಬೆಟಾಲಿಯನ್ ರಾಯ್ ಬರೇಲಿ ಬಿ ಕಂಪನಿಯ ಕಾನ್ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಆಕಸ್ಮಿಕ ಗುಂಡು ತಗುಲಿ ಸಾವನ್ನಪ್ಪಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ