/newsfirstlive-kannada/media/post_attachments/wp-content/uploads/2025/05/BharjariBachelorsSeason2.jpg)
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ಇದೇ ಶೋನಲ್ಲಿ 10 ಮಂದಿ ಬ್ಯಾಚುಲರ್ಸ್ಗಳಿಗೆ 10 ಸುಂದರಿಯರು ಮೆಂಟರ್ಸ್ ಆಗಿದ್ದಾರೆ. ವಾರದಿಂದ ವಾರಕ್ಕೆ ಬ್ಯಾಚುಲರ್ಸ್ಗಳು ಚೇಂಚ್ ಆಗ್ತಿದ್ದಾರೆ.
ಇದನ್ನೂ ಓದಿ: ಇವತ್ತೇ SSLC ಫಲಿತಾಂಶ ಪ್ರಕಟ; ಮಕ್ಕಳೇ ನಿಮ್ಮ ರಿಸಲ್ಟ್ ನೋಡೋದು ಹೇಗೆ..?
ಕಳೆದ ವಾರ ಭರ್ಜರಿ ಬ್ಯಾಚುಲರ್ಸ್ 2 ಶೋನಲ್ಲಿ ಫ್ಯಾಮಿಲಿ ರೌಂಡ್ ನಡೆದಿತ್ತು. ಆದ್ರೆ ಈ ವಾರ
ಮನರಂಜನಾ ಸುತ್ತು (Entertainment Round) ನಡೆಯಲಿದೆ. ಹೀಗಾಗಿ ಜೀ ಭರ್ಜರಿ ಬ್ಯಾಚುಲರ್ಸ್ ಪ್ರೋಮೋಗಳನ್ನು ಒಂದೊಂದಾಗಿ ಬಿಡುಗಡೆ ಮಾಡುತ್ತಿದೆ. ಇದೀಗ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ದರ್ಶನ್ ಹಾಗೂ ಅಪೇಕ್ಷಾ ಜೋಡಿ ಮಾಡಿದ ಆ ಒಂದು ಪರ್ಫಾರ್ಮೆನ್ಸ್ ನೋಡಿ ಎಲ್ಲರೂ ಭಾವುಕರಾಗಿದ್ದಾರೆ.
View this post on Instagram
ಹೌದು, ಏಪ್ರಿಲ್ 22ರಂದು ನಡೆದ ಘೋರ ದುರಂತವನ್ನು ಭರ್ಜರಿ ಬ್ಯಾಚುಲರ್ಸ್ ಮರು ಸೃಷ್ಟಿ ಮಾಡಿದೆ. ಹನಿಮೂನ್ಗೆಂದು ಪಹಲ್ಗಾಮ್ಗೆ ಬಂದಿದ್ದ ನವ ಜೋಡಿಯನ್ನು ಭಯೋತ್ಪಾದಕರು ಕೊಂದು ಹಾಕಿದ್ದರು. ಮದುವೆಯಾಗಿ ಕೇವಲ 6 ದಿನಕ್ಕೆ ಪತಿಯನ್ನು ಕಳೆದುಕೊಂಡಿದ್ದ ಆ ಮಹಿಳೆಯ ಸ್ಥಿತಿ ಹೇಗಿತ್ತು ಎಂದು ಭರ್ಜರಿ ಬ್ಯಾಚುಲರ್ಸ್ ಜೋಡಿ ಪರ್ಫಾರ್ಮೆನ್ಸ್ ಮೂಲಕ ಮಾಡಿ ತೋರಿಸಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರೂ 1 ನಿಮಿಷ ಮೇಣದ ಬತ್ತಿ ಹಿಡಿದುಕೊಂಡು ಮೌನಾಚರಣೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ