ಕೆಲವೇ ನಿಮಿಷಗಳ ಹಿಂದೆ ರೀಲ್ಸ್ ಮಾಡಿದ್ದ ಮಂಜುನಾಥ್ ದಂಪತಿ.. ವಿಡಿಯೋ ನೋಡಿದ್ರೆ ಕರುಳು ಚುರ್ ಅನ್ನುತ್ತೆ..

author-image
Veena Gangani
Updated On
ಕೆಲವೇ ನಿಮಿಷಗಳ ಹಿಂದೆ ರೀಲ್ಸ್ ಮಾಡಿದ್ದ ಮಂಜುನಾಥ್ ದಂಪತಿ.. ವಿಡಿಯೋ ನೋಡಿದ್ರೆ ಕರುಳು ಚುರ್ ಅನ್ನುತ್ತೆ..
Advertisment
  • ಭೀಕರ ದಾಳಿಯಲ್ಲಿ ಭಾರತದ ಹಲವು ರಾಜ್ಯದ ಪ್ರವಾಸಿಗರು ಬಲಿ
  • ಉಗ್ರರ ನರಮೇಧದಲ್ಲಿ ಪ್ರಾಣ ಕಳೆದುಕೊಂಡ ಒಟ್ಟು 26 ಮಂದಿ
  • ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಈ ವಿಡಿಯೋ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಭೀಕರ ದಾಳಿಯಲ್ಲಿ ಭಾರತದ ಹಲವು ರಾಜ್ಯದ ಪ್ರವಾಸಿಗರು ಬಲಿಯಾಗಿದ್ದಾರೆ. ಉಗ್ರರ ನರಮೇಧದಲ್ಲಿ ಒಟ್ಟು 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಕರ್ನಾಟಕದ ಮಂಜುನಾಥ್​ ರಾವ್ ಹಾಗೂ ಭರತ್​ ಭೂಷಣ್​ ಕೂಡ ಉಸಿರು ನಿಲ್ಲಿಸಿದ್ದಾರೆ.

ಇದನ್ನೂ ಓದಿ:ಹಣೆಯ ಬೊಟ್ಟು, ಕೈ ಬಳೆ ನೋಡಿ ಗುಂಡಿಟ್ರು.. ಶಿವಮೊಗ್ಗದಲ್ಲಿ ಕರಾಳತೆ ಬಿಚ್ಚಿಟ್ಟ ಮಂಜುನಾಥ್ ಮಗ ಅಭಿ ಜೈ!

publive-image

ಪಹಲ್ಗಾಮ್​ನಲ್ಲಿ ಉಗ್ರರು ನಡೆಸಿದ್ದ​ ದಾಳಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಪೈಶಾಚಿಕ ಕೃತ್ಯ ನಡೆಸಿರುವ ಭಯೋತ್ಪಾದಕರ ವಿರುದ್ಧ ಪ್ರತೀಕಾರ ಆಗಲೇಬೇಕು ಎಂಬ ಕೂಗು ಜೋರಾಗಿದೆ. ಇದರ ಮಧ್ಯೆ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ದಾಳಿಗೂ ಮೊದಲು ಮಂಜುನಾಥ್​ ರಾವ್ ಕುಟುಂಬ ಪಹಲ್ಗಾಮ್ ಎಷ್ಟು ಎಂಜಾಯ್​​ ಮಾಡ್ತಾ ಇದ್ರು ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ.

publive-image

ಮಗ ದ್ವಿತೀಯ ಪಿಯುಸಿಯಲ್ಲಿ ಚೆನ್ನಾಗಿ ಅಂಕ ಕಳಿಸಿದ್ದ ಅಂತ ಕಾಶ್ಮೀರಕ್ಕೆ ಹೋಗೋಣ ಅಂತ ಪ್ಲಾನ್​ ಮಾಡಿಕೊಂಡಿದ್ದರು. ಅದರಂತೆ ಶಿವಮೊಗ್ಗದ ಮಂಜುನಾಥ್​ ರಾವ್​, ಪತ್ನಿ ಪಲ್ಲವಿ ಹಾಗೂ ಮಗ ಅಭಿಜೈ ಒಟ್ಟಾಗಿ ಖುಷಿ ಖುಷಿಯಾಗಿ ಕಾಶ್ಮೀರ ಪ್ರವಾಸದಲ್ಲಿತ್ತು. ಇನ್ನೇನು ಕೆಲವೇ ನಿಮಿಷಗಳಲ್ಲಿ ದಾಳಿಯಾಗೋ ಮೊದಲು ಈ ಕಟುಂಬ ಫೋಟೋಶೂಟ್​ ಮಾಡಿಸಿಕೊಂಡಿದೆ.

ಮಗ ಅಭಿಜೈ, ಮಂಜುನಾಥ್​ ರಾವ್​, ಪತ್ನಿ ಪಲ್ಲವಿ ದಂಪತಿ ಒಟ್ಟಾಗಿ ಒಂದೇ ಫ್ರೇಮ್​ನಲ್ಲಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಈ ಫೋಟೋಗಳನ್ನು ನೋಡಿದ್ರೆ ಕರಳು ಚುರುಕ್​ ಅನ್ನುವಂತಿದೆ. ಅಷ್ಟು ಮುದ್ದಾಗಿದೆ ಈ ಕುಟುಂಬ. ಆದ್ರೆ ರಾಕ್ಷಕರು ಏಕಾಏಕಿ ಬಂದು ತುಂಬಾ ಖುಷಿಯಾಗಿ ಕಾಶ್ಮೀರದ ಸೌಂದರ್ಯವನ್ನು ಅನುಭವಿಸುತ್ತಿದ್ದ ಕುಟುಂಬದ ಮೇಲೆ ಗುಂಡಿನ ಮಳೆಗೈದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment