/newsfirstlive-kannada/media/post_attachments/wp-content/uploads/2025/05/FIGHT-BACK-INDIA-2.jpg)
ನಾಯಿ ಬಾಲಕ್ಕೆ ಎಷ್ಟೇ ದಬ್ಬೆ ಕಟ್ಟಿದ್ರೂ ಅದು ಹೇಗೆ ನೆಟ್ಟಗಾಗಲ್ವೋ ಹಾಗಾಗಿದೆ ಪಾಕಿಸ್ತಾನದ ಕತೆ. ಭಾರತದ ಹೊಡೆತದಿಂದ ಬಚಾಬ್ ಆಗಲು ಕದನ ವಿರಾಮದ ಕಳ್ಳಾಟವಾಡಿದ್ದ ಪಾಪಿಸ್ತಾನ ಮೂರೇ ಗಂಟೆಗೆ ತನ್ನ ಕುತಂತ್ರಿ ಬುದ್ಧಿ ತೋರಿಸಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತಿಗೂ ಪಾಕ್ ಬಿಡುಗಾಸಿನ ಬೆಲೆ ಇಲ್ಲದಂತೆ ಮಾಡಿದೆ.
ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈ, ಕಾಲು ಹಿಡಿದು ಕದನ ವಿರಾಮದ ಭಿಕ್ಷೆ ಬೇಡಿದ ಪಾಪಿಸ್ತಾನ ಕದನ ವಿರಾಮ ಘೋಷಣೆಯಾದ ಮೂರೇ ಗಂಟೆಗೆ ತನ್ನ ನರಿ ಬುದ್ಧಿ ತೋರಿಸಿದೆ. ಈ ಮೂಲಕ ಟ್ರಂಪ್ ಮರ್ಯಾದೆಯನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಹರಾಜಿಗಿಡ್ತಾ ಅನ್ನೋ ಚರ್ಚೆ ಶುರುವಾಗಿದೆ. ಪ್ರಧಾನಿ ಮಾತನ್ನೂ ಧಿಕ್ಕರಿಸಿರೋ ಪಾಕಿಸ್ತಾನ ಸೇನೆ ಮತ್ತೆ ಭಾರತದ ಮೇಲೆ ದಾಳಿ ಮಾಡಿದೆ.
ಟ್ರಂಪ್ ಬಂದು ದಬ್ಬೆಕಟ್ಟಿದರೂ ನೆಟ್ಟಗಾಗದ ಪಾಕ್ ಬಾಲ!
ಕದನ ವಿರಾಮ ಘೋಷಣೆಯಾದ ಮೂರೇ ಗಂಟೆಗೆ ಕಳ್ಳಾಟ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶದಿಂದ ಯುದ್ಧ ವಿರಾಮದ ಹೈಡ್ರಾಮಾ ಮಾಡಿದ್ದ ಪಾಪಿಸ್ತಾನ ಮೂರೇ ಗಂಟೆಗೆ ತನ್ನ ವರಸೆ ಬದಲಿಸಿದೆ. ಜಮ್ಮುವಿನ ಹಲವೆಡೆ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೇನೆ ಮೊಂಡಾಟ ಮೆರೆದಿದೆ.
ಗಡಿಭಾಗದ 11 ಪ್ರದೇಶಗಳಲ್ಲಿ ಪಾಕ್ ಸೇನೆಯ ಗುಂಡಿನ ದಾಳಿ
ಭಾರತ ಮತ್ತು ಪಾಕ್ ಗಡಿಯ 11 ಪ್ರದೇಶಗಳಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಉಧಂಪುರ, ಅಖ್ನೂರ್, ನೌಶಾರಾ, ಪೂಂಚ್, ರಜೌರಿ, ಮೆಂಧಾರ್, ಜಮ್ಮು, ಸುಂದರ್ಬನಿ, ಆರ್.ಎಸ್ ಪುರ, ಅರ್ನೆಯಾ, ಕಥುವಾದಲ್ಲಿ ಪಾಕ್ನಿಂದ ಕದನವಿರಾಮ ಉಲ್ಲಂಘನೆಯಾಗಿದೆ.
ಪಾಕ್ನ 100ಕ್ಕೂ ಹೆಚ್ಚು ಡ್ರೋನ್ಗಳಿಂದ ದಾಳಿಗೆ ಯತ್ನ
ಕಳೆದ ರಾತ್ರಿ ಜಮ್ಮು-ಕಾಶ್ಮೀರದ ಹಲವು ಪ್ರದೇಶಗಳ ಮೇಲೆ ಪಾಕಿಸ್ತಾನದ 100ಕ್ಕೂ ಹೆಚ್ಚು ಡ್ರೋನ್ಗಳು ದಾಳಿ ಯತ್ನ ನಡೆಸಿವೆ. ಪಾಕ್ ಡ್ರೋನ್ಗಳ ಹಾರಾಟದಿಂದ ಶ್ರೀನಗರ, ಕಾರ್ಗಿಲ್, ಜಮ್ಮು, ಪಂಜಾಬ್, ರಾಜಸ್ಥಾನ, ಗುಜರಾತ್, ಪಠಾಣ್ಕೋಟ್ನಲ್ಲಿ ಸಂಪೂರ್ಣ ಬ್ಲ್ಯಾಕ್ ಔಟ್ಗೆ ಕರೆ ನೀಡಲಾಗಿತ್ತು. ಜನರಿಗೆ ಮನೆಯಿಂದ ಹೊರಬರದಿರಲು ಸೂಚನೆ ನೀಡಲಾಗಿತ್ತು.
ಉದಮ್ಪುರದಲ್ಲಿ ಪಾಪಿ ಪಾಕ್ನಿಂದ ಭಾರೀ ಶೆಲ್ ದಾಳಿ
ಜಮ್ಮು-ಕಾಶ್ಮೀರದ ಉದಮ್ಪುರದಲ್ಲಿ ಪಾಕಿಸ್ತಾನ ಭಾರೀ ಶೆಲ್ ದಾಳಿ ನಡೆಸಿತ್ತು. ಈ ಹಿನ್ನೆಲೆ ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ಹೈ ಅಲರ್ಟ್ ಆಗಿತ್ತು. ಭಾರತದ ಚಿನಾರ್ ಕಾರ್ಪ್ಸ್ ಹೆಡ್ ಕ್ವಾರ್ಟರ್ ಟಾರ್ಗೆಟ್ಗೆ ಪಾಕಿಸ್ತಾನ ಯತ್ನಿಸಿತ್ತು. ಶ್ರೀನಗರದಲ್ಲಿರುವ ಸೇನೆಯ ಚಿನಾರ್ ಕಾರ್ಪ್ಸ್ ಹೆಡ್ ಕ್ವಾರ್ಟರ್ ಮೇಲಿನ ಅಟ್ಯಾಕ್ ಯತ್ನವನ್ನ ಭಾರತದ ವಾಯುಪಡೆ ವಿಫಲ ಗೊಳಿಸಿದೆ.
ಪಾಕ್ ದಾಳಿಗೆ ಬಿಎಸ್ಎಫ್ ಸಬ್ಇನ್ಸ್ಪೆಕ್ಟರ್ ಸಾವು
ನಗ್ರೋಟಾ ಮಿಲಿಟರಿ ನೆಲೆ ಮೇಲೆ ಉಗ್ರರ ದಾಳಿ ಯತ್ನ
ಪಾಪಿ ಪಾಕಿಸ್ತಾನದ ದಾಳಿಗೆ ಜಮ್ಮುನಲ್ಲಿ ಬಿಎಸ್ಎಫ್ ಸಬ್ ಇನ್ಸ್ಪೆಕ್ಟರ್ ಇಮ್ತಿಯಾಜ್ ಸಾವನ್ನಪ್ಪಿದ್ದಾರೆ. ನಗ್ರೋಟಾ ಮಿಲಿಟರಿ ನೆಲೆ ಮೇಲೆ ಉಗ್ರರ ದಾಳಿ ಯತ್ನ ನಡೆಸಿದ್ದಾರೆ. ಉಗ್ರರೊಂದಿಗೆ ಸೇನಾಪಡೆ ರಾತ್ರಿ ಗುಂಡಿನ ಚಕಮಕಿ ನಡೆಸಿದೆ. ದಾಳಿ ಬಳಿಕ ಕಾಡಿನಲ್ಲಿ ತಲೆಮರೆಸಿಕೊಂಡಿರೋ ಉಗ್ರರಿಗಾಗಿ ಶೋಧಕಾರ್ಯ ನಡೆದಿದೆ.
ಇದನ್ನೂ ಓದಿ: ತಂದೆ, ತಾಯಿಗೆ ಒಬ್ಬನೇ ಒಬ್ಬ ಮಗ.. ವಾಯುನೆಲೆಯಲ್ಲಿ ಹುತಾತ್ಮನಾದ ಸುರೇಂದ್ರ ಕುಮಾರ್
ಪಾಕ್ ಸೇನೆಯ ಹುಚ್ಚಾಟಕ್ಕೆ ಭಾರತದ ದಿಟ್ಟ ಉತ್ತರ
ಪಾಕ್ ಸೈನಿಕರ ಗುಂಡಿನ ದಾಳಿಗೆ ಗುಂಡಿನ ದಾಳಿ ಮೂಲಕವೇ ಬಿಎಸ್ಎಫ್ ಯೋಧರು ತಕ್ಕ ಉತ್ತರ ನೀಡಿದ್ದಾರೆ. ಇತ್ತ ಆಗಸದಲ್ಲಿ ಹಾರಿಬಂದ ಪಾಕ್ ಡ್ರೋನ್ಗಳನ್ನ ಏರ್ ಡಿಫೆನ್ಸ್ ಸಿಸ್ಟಮ್ ಉಡೀಸ್ ಮಾಡಿದೆ. ಕಳೆದೆರೆಡು ದಿನಗಳಿಗಿಂತ ರಾತ್ರಿ ತೀವ್ರ ಸ್ವರೂಪದ ದಾಳಿ ನಡೆಸಿದ ಪಾಕ್ಗೆ ತಿಪ್ಪರಲಾಗ ಹಾಕಿದ್ರು ಏನು ಕಿತ್ತುಕೊಳ್ಳಲಾಗಲ್ಲ ಅನ್ನೋದನ್ನ ಭಾರತ ಮತ್ತೆ ಸಾರಿ ಹೇಳಿದೆ.
ನಾಯಿ ಬಾಲಕ್ಕೆ ದಬ್ಬೆ ಕಟ್ಟಿದ್ರೆ ನೆಟ್ಟಗಾಗಲ್ಲ ಅನ್ನೋ ಹಾಗೇ ಕದನ ವಿರಾಮದ ಕುತಂತ್ರ ಮಾಡಿದ ಪಾಪಿ ಪಾಕ್ ನರಿ ಬುದ್ಧಿ ತೋರಿಸಿದೆ. ಕದನ ವಿರಾಮ ಘೋಷಿಸಿದ್ದಾಯ್ತು, ಅದರ ಉಲ್ಲಂಘನೆಯೂ ಆಯ್ತು, ವಿಶ್ವದ ಮುಂದೆ ಪಾಕ್ ನರಿ ಬುದ್ಧಿ ಮತ್ತೊಮ್ಮೆ ಬೆತ್ತಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ