ಭಾರತದ ದಿಟ್ಟ ಹೆಜ್ಜೆಗೆ ಹೆದರಿದ ಪಾಕಿಸ್ತಾನ.. ತುರ್ತು ಪರಿಸ್ಥಿತಿ ಘೋಷಣೆ; ಅಪಾಯ ಕಟ್ಟಿಟ್ಟ ಬುತ್ತಿ!

author-image
admin
Updated On
3 ದಿನದಲ್ಲಿ 850 ಮಂದಿ ಭಾರತೀಯರು ವಾಪಸ್.. ಭಾರತ ತೊರೆದ ಪಾಕಿಸ್ತಾನೀಯರ ಸಂಖ್ಯೆ ಎಷ್ಟು..?
Advertisment
  • ಮೊದಲು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಅಮಾನತು
  • ಉರಿ ಡ್ಯಾಂನಿಂದ ಪಾಕ್‌ಗೆ ಹರಿಯುವ ಝೇಲಂ ನದಿಗೆ ನೀರು ಬಿಡುಗಡೆ
  • ಕಾಶ್ಮೀರ ಮಾರ್ಗವಾಗಿ ಪಾಕಿಸ್ತಾನಕ್ಕೆ ಹರಿಯುವ ಝೇಲಂ ನದಿ ನೀರು

ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಅಮಾನತು ಮಾಡಿದೆ. ಭಾರತದ ಈ ‘ಜಲ’ಯುದ್ಧ ಆರಂಭಿಸಿದ್ದಕ್ಕೆ ಪಾಕಿಸ್ತಾನ ಬೆಚ್ಚಿ ಬಿದ್ದಿದೆ.

ಸಿಂಧೂ ಒಪ್ಪಂದ ಅಮಾನತು ಜೊತೆಗೆ ಭಾರತ, ಪಾಕಿಸ್ತಾನಕ್ಕೆ ಝೇಲಂ ನದಿಯ ನೀರು ಬಿಡುಗಡೆ ಮಾಡಿದೆ. ಭಾರತ ಏಕಾಏಕಿ ನೀರು ಬಿಟ್ಟಿದ್ದರಿಂದ ಮುಜಾಫರಾಬಾದ್ ಭಾಗದಲ್ಲಿ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ.

publive-image

1992ರಲ್ಲಿ ಈ ರೀತಿ ದೊಡ್ಡ ಪ್ರಮಾಣದ ನೀರು ಬಿಡುಗಡೆ ಮಾಡಿತ್ತು. ಇದೀಗ ಯಾವುದೇ ಸೂಚನೆ ನೀಡದೇ ಭಾರತ ಝೇಲಂ ನದಿ ನೀರನ್ನು ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡಿದೆ ಎಂದು ಜನರು ಹೇಳುತ್ತಿದ್ದಾರೆ. ಪಾಕಿಸ್ತಾನದ ಮುಜಾಫರಾಬಾದ್ ಭಾಗದ ಜನರಲ್ಲಿ ಪ್ರವಾಹದ ವಾತಾವರಣ ಸೃಷ್ಟಿಯಾಗಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲೂ ಬ್ರೇಕಿಂಗ್ ನ್ಯೂಸ್ ಆದ ಸಿಎಂ ಸಿದ್ದರಾಮಯ್ಯ ಹೇಳಿಕೆ; ವಿಡಿಯೋ ಫುಲ್‌ ವೈರಲ್‌! 

ಭಾರತ ಉರಿ ಡ್ಯಾಂನಿಂದ ಝೇಲಂ ನದಿಗೆ ಹೆಚ್ಚು ನೀರು ಬಿಡುಗಡೆ ಮಾಡಿದೆ. ಈ ಭಾರೀ ಪ್ರಮಾಣದ ನೀರು ಬಿಡುಗಡೆಗೆ ಪಾಕ್ ಕಂಗಾಲಾಗಿದೆ. ಮುಜಾಫರ್ ಬಾದ್ ಸೇರಿ ಹಲವೆಡೆ ಭಾರೀ ಪ್ರಮಾಣದ ನೀರು ಬರ್ತಿರೋದು ಜನರಿಗೆ ಭೀತಿ ತಂದಿದೆ. ಮುಜಾಫರ್ ಬಾದ್​ನಲ್ಲಿ ಅಲರ್ಟ್‌ ನೀಡುವ ಜೊತೆಗೆ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

publive-image

ಭಾರತದಲ್ಲಿ ಹುಟ್ಟುವ ಝೇಲಂ ನದಿ ಕಾಶ್ಮೀರ ಮಾರ್ಗವಾಗಿ ಪಾಕಿಸ್ತಾನಕ್ಕೆ ಹರಿಯುತ್ತದೆ. ಉರಿ ಡ್ಯಾಂನಿಂದ ಝೇಲಂಗೆ ಹೆಚ್ಚು ಪ್ರಮಾಣದ ನೀರು ರಿಲೀಸ್ ಆಗಿದೆ. ಈ ಭಾರೀ ಪ್ರಮಾಣದ ನೀರು ಹರಿದು ಬರ್ತಿರೋದ್ರಿಂದ ಪಾಕ್​ಗೆ ಟೆನ್ಷನ್ ಹೆಚ್ಚಾಗಿದೆ.

publive-image

ಮುಜಾಫರ್ ಬಾದ್ ಸೇರಿ ಪಾಕಿಸ್ತಾನದ ಹಲವು ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಇಲ್ಲಿನ ಜನರಿಗೆ ಪ್ರವಾಹದ ಜೊತೆಗೆ ಭಾರೀ ಪ್ರಮಾಣದ ಬೆಳೆ ನಷ್ಟವಾಗೋ ಭೀತಿ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment