ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಅಣ್ವಸ್ತ್ರ ಹೊಂದುವ ಕನಸಲ್ಲಿ ಪಾಕ್
ಬಜೆಟ್ನಲ್ಲಿ ರಕ್ಷಣಾ ವಲಯಕ್ಕೆ ಮೀಸಲಿಟ್ಟ ಹಣವೆಷ್ಟು
ಪಾಕ್ ಮಾಜಿ ಪ್ರಧಾನಿಯ ಅಂದಿನ ಮಾತು ಇಂದು ನೆನಪಾಗಿದ್ದೇಕೆ..?
ಇಸ್ಲಾಮಾಬಾದ್: ಪಾಕಿಸ್ತಾನ.. ಸದ್ಯ ಭೀಕಾರಿಗಿಂತಲೂ ಕಡೆಯಾಗಿರುವ ದೇಶ. ನಮ್ಮಲ್ಲಿರುವ ಕತ್ತೆಗಳನ್ನು ಕೊಡ್ತೀವಿ ಅವುಗಳ ಬದಲಿಗೆ ನೀವು ನಮಗೆ ಹಿಟ್ಟನ್ನು ಕೊಡಿ ಅಂತ ಅನ್ಯ ರಾಷ್ಟ್ರಗಳಿಗೆ ಬೇಡಿಕೊಳ್ಳುವಷ್ಟು ದಯನೀಯ ಸ್ಥಿತಿಗೆ ಬಂದು ತಲುಪಿದೆ ಪಾಕಿಸ್ತಾನ. ಎಲ್ಲವೂ ಇತ್ತು.. ಫಲವತ್ತಾದ ಭೂಮಿ.. ಏಷ್ಯಾದ ಹೆಬ್ಬಾಗಿಲು ಅಂತಲೇ ಕರೆಯುವಂತ ಕಣಿವೆಗಳು. ಯಥೇಚ್ಛವಾಗಿ ನೀರು ನೀಡುವ ನದಿಗಳು. ಒಂದು ದೇಶ ಸುವರ್ಣಯುಗ ಕಟ್ಟಲು ಇನ್ನೇನು ಬೇಕು. ಬಂಗಾರದಂತ ಬೆಳೆಯನ್ನು ಬೆಳೆಯಬೇಕಾದಂತ ಭೂಮಿಯಲ್ಲಿ ಬೆಳೆದದ್ದು ಅಕ್ಷರಶಃ ಜಗತ್ತಿಗೆ ಮಾರಕವಾದ ಭಯೋತ್ಪಾದನೆಯೆಂಬ ಬೆಳೆ. ಸರ್ವಾಧಿಕಾರಿ ಅಧಿಕಾರಿಗಳು. ದೇಶವಾಗಿ ಇನ್ನೂ ಶೈಶಾವ್ಯಸ್ಥೆಯಲ್ಲಿದ್ದಾಗಲೇ ಗಡಿಯನ್ನು ವಿಸ್ತರಿಸಿಕೊಳ್ಳಲು ನೆರೆ ದೇಶದೊಂದಿಗೆ ಯುದ್ಧಕ್ಕೆ ಬೀಳುವ ದೂರದೃಷ್ಟಿಯಿಲ್ಲದ ನಾಯಕರು ಹೀಗೆ ಒಂದೊಂರ ಹಿಂದೊಂದು ಪ್ರಮಾದಗಳ ಸರಮಾಲೆಗಳಿಂದಾಗಿ ಈಗ ಪಾಕಿಸ್ತಾನ ಅಧೋಗತಿಗೆ ತಲುಪಿದೆ. ಜನರು ಹಿಡಿ ಹಿಟ್ಟಿಗಾಗಿ ಉಡಿಯನ್ನು ಚಾಚುತ್ತಿದ್ದರೆ ಇತ್ತ ಪಾಕಿಸ್ತಾನ ಸರ್ಕಾರ ಬೇರೆಯದ್ದೇ ತಿರುಕನ ಕನಸು ಕಾಣುತ್ತಿದೆ.
ಇದನ್ನೂ ಓದಿ: ಆಳ ಸಮುದ್ರದಲ್ಲಿ ಅನಾಹುತ.. ತೈಲ ಟ್ಯಾಂಕರ್ ಮುಳುಗಿ 13 ಭಾರತೀಯರು ಸೇರಿ 16 ಮಂದಿ ನಾಪತ್ತೆ
ಕಳೆದ ಹಲವು ವರ್ಷಗಳಿಂದ ಪಾಕಿಸ್ತಾನವೆಂಬ ನೆರೆ ರಾಜ್ಯ ಆರ್ಥಿಕವಾಗಿ ಜರ್ಜರಿತವಾಗಿ ಹೋಗಿದೆ.. ಇತಿಹಾಸದಲ್ಲಿ ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟನ್ನು ಈ ದೇಶ ಅನುಭವಿಸುತ್ತಿದೆ. ಹಣದುಬ್ಬರ ಅನ್ನೋದು ಪಾಕಿಸ್ತಾನವೆಂಬ ಪಾಕಿಸ್ತಾನವನ್ನೇ ನುಂಗಿಬಿಟ್ಟಿದೆ. ಪರಿಣಾಮ ಸದ್ಯ ಪಾಕ್ ಪ್ರಜೆಗಳು ಒಂದು ಕಿಲೋ ಗೋದಿ ಹಿಟ್ಟು ಖರೀದಿಸಲು ಅಲ್ಲಿಯ ಪ್ರಜೆ ಬರೋಬ್ಬರಿ 800 ಪಾಕಿಸ್ತಾನದ ರೂಪಾಯಿಗಳನ್ನು ಕೊಡಬೇಕು. ಒಂದು ಲೀಟರ್ ಅಡುಗೆ ಎಣ್ಣೆ ಖರೀದಿಸಬೇಕಾದ್ರೆ 900 ಪಾಕಿಸ್ತಾನದ ರೂಪಾಯಿಗಳನ್ನು ನೀಡಬೇಕು. ಇಲ್ಲಿಗೆ ಬಂದು ನಿಂತಿದೆ ಪಾಕ್ ಪ್ರಜೆಗಳ ಗತಿ. ಇದರ ಜೊತೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಬಂಡಾಯ. ಬಲೂಚಿಸ್ತಾನದಲ್ಲಿನ ಹಿಂಸಾಚಾರ, ಇವೆಲ್ಲವೂ ಕೆಂಡದಂತೆ ಸೆರಗಲ್ಲಿ ಕುಳಿತು ಕಾಡುತ್ತಿದ್ದರೂ ಪಾಕಿಸ್ತಾನಕ್ಕೆ ಮಾತ್ರ ಅಣ್ವಸ್ತ್ರದ ಕನಸು ಮಾಗಿಲ್ಲ.. ಈಗಲೂ ಮತ್ತೆ ಅಣ್ವಸ್ತ್ರಗಳನ್ನು ಹೊಂದುವ, ರಕ್ಷಣಾ ಕ್ಷೇತ್ರದಲ್ಲಿ ಬಲಾಢ್ಯ ಎನಿಸಿಕೊಳ್ಳುವ ಹುಚ್ಚು ಕನಸಿನಲ್ಲಿಯೇ ತೇಲುತ್ತಿದೆ.
ಜುಲ್ಫೀಕರ್ ಅಲಿ ಬುಟ್ಟೋ ಮಾತನ್ನೇ ವೇದವಾಕ್ಯ ಮಾಡಿಕೊಳ್ತಾ ಪಾಕ್..?
ಪಾಕಿಸ್ತಾನದ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಬುಟ್ಟೊಗೂ ಇದೇ ತರದ ಹುಚ್ಚೊಂದು ಮೆಟ್ಟಿಕೊಂಡಿತ್ತು. ದೇಶದ ಆರ್ಥಿಕ ಸ್ಥಿತಿ ಎಲ್ಲಿಗಾದ್ರೂ ಹೋಗಿ ತಲುಪಲಿ ನಾವು ಅಣ್ವಸ್ತ್ರಗಳನ್ನು ಹೊಂದಿಯೇ ಹೊಂದುತ್ತೇವೆ.. ಇಡೀ ದೇಶ ಹುಲ್ಲು ತಿಂದು ಆದ್ರೂ ಬದುಕುತ್ತೆ ಆದ್ರೆ ಅಣ್ವಸ್ತ್ರ ತಯಾರಿಕೆಯಿಂದ ಮಾತ್ರ ಹಿಂದೆ ಸರಿಯುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ರು. ಈಗ ಹಿರಿಯಜ್ಜನ ಪರಂಪರೆಯನ್ನೇ ಪಾಕ್ ಮುಂದುವರಿಸಿಕೊಂಡು ಬರುತ್ತಿದೆ.. ದೇಶದ ಜನರಿಗೆ ತಿನ್ನಲು ಅನ್ನವಿಲ್ಲ ಉಡಲು ವಸ್ತ್ರವಿಲ್ಲ ಆದ್ರೆ ಪಾಕ್ ಸರ್ಕಾರಕ್ಕೆ ಮಾತ್ರ ಅಣ್ವಸ್ತ್ರಗಳನ್ನು ತಯಾರಿಸುವ ಹುಚ್ಚು ಮಾತ್ರ ಇನ್ನೂ ಬಿಟ್ಟಿಲ್ಲ.. ಅದಕ್ಕೆ ಕೈಗನ್ನಡಿ ಹಿಡಿದಂತಿದೆ ಪಾಕಿಸ್ತಾನದ ಈ ಬಾರಿಯ ರಕ್ಷಣಾ ಬಜೆಟ್.
ಇದನ್ನೂ ಓದಿ: ಡ್ರೋನ್ ಮೂಲಕ ಹೆಂಡತಿ ಅಕ್ರಮ ಸಂಬಂಧ ಪತ್ತೆ ಹಚ್ಚಿದ ಗಂಡ.. ಆಮೇಲೆ ನಡೆದಿದ್ದೇ ಬೇರೆ!
ಇಷ್ಟೆಲ್ಲಾ ಆರ್ಥಿಕ ಬಿಕ್ಕಟ್ಟು ಇಡೀ ದೇಶವನ್ನೇ ಹಿಂಡಿ ಹಿಪ್ಪೆ ಮಾಡುತ್ತಿದ್ರೆ, ಮತ್ತೊಂದು ಕಡೆ ಪಾಕಿಸ್ತಾನ ತನ್ನ ರಕ್ಷಣಾ ಬಜೆಟ್ನಲ್ಲಿ ಶೇಕಡಾ 15ರಷ್ಟು ಏರಿಕೆ ಮಾಡಿದೆ. ಇದೇ ಜೂನ್ 15 ರಂದು ಬಜೆಟ್ ಮಂಡಿಸಿದ ಪಾಕಿಸ್ತಾನದ ಹಣಕಾಸು ಮಂತ್ರಿ ಮೊಹಮ್ಮದ್ ಔರಂಗ್ಜೇಬ್ ರಕ್ಷಣಾ ಇಲಾಖೆಗೆ ಪಾಕಿಸ್ತಾನದ ರೂಪಾಯಿಯಲ್ಲಿ 2,122 ಬಿಲಿಯನ್ ಅಂದ್ರೆ 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಮೀಸಲಿಡಲಾಗಿದೆ. ಇದು ಮತ್ತೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಹೊಸದಾಗಿ ಸಾಲ ಪಡೆಯುವ ಸಾಹಸದ ಒಂದು ಭಾಗವಾಗಿದ್ದಲ್ಲದೇ. ಅತ್ಯಾಧುನಿಕ ಅಣ್ವಸ್ತ್ರಗಳನ್ನು ತಯಾರಿಕೆಗೆ ಮಾಡಿಕೊಂಡಿರುವ ತಯಾರಿ ಎಂದು ಕೂಡ ಹೇಳಲಾಗುತ್ತಿದೆ. ಸದ್ಯ ಹಣದುಬ್ಬರ, ಜಿಡಿಪಿ ಕುಸಿತದಂತಹ ಕಠಿಣ ಪರಿಸ್ಥಿತಿಯಲ್ಲಿಯೂ ರಕ್ಷಣಾ ವಿಭಾಗಕ್ಕೆ ಈ ಮಟ್ಟಿನ ಹಣವನ್ನು ಮೀಸಲಿಟ್ಟಿರುವುದು ಸಹಜವಾಗಿ ಪಾಕ್ ಪ್ರಜೆಗಳ ಆಕ್ರೋಶವನ್ನು ಹೆಚ್ಚಿಸಿದೆ. ಹಣದುಬ್ಬರ, ನಿರುದ್ಯೋಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾತಾಳಕ್ಕೆ ಕುಸಿದಿರುವ ಪಾಕಿಸ್ತಾಣದ ರೂಪಾಯಿ ಮೌಲ್ಯ ಇವೆಲ್ಲದರಿಂದಲೂ ಪಾರಾಗುವ ಯಾವ ಯೋಚನೆಯೂ ಪಾಕ್ಗೆ ಇದ್ದಂತಿಲ್ಲ. ಸದ್ಯ ಇರುವ ಶೇಕಡಾ 3.5 ಜಿಡಿಪಿಯನ್ನು ಮುಂಬರುವ ದಿನಗಳಲ್ಲಿ 3.6ಕ್ಕೆ ಏರಿಸುವ ಗುರಿಯೊಂದಿಗೆ ಪಾಕಿಸ್ತಾನ ತನ್ನ ಬಜೆಟ್ ಮಂಡಿಸಿದೆ. ಮುಸ್ಲಿಂ ರಾಷ್ಟ್ರಗಳ ಮುಂದೆ, ಐಎಂಎಫ್ ಮುಂದೆ ಭಿಕ್ಷಾಂದೇಹಿ ಅಂತ ನಿಲ್ಲುವ ಎಲ್ಲ ತಯಾರಿಗೂ ಪಾಕ್ ಮರಳಿ ಸಿದ್ಧವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಅಣ್ವಸ್ತ್ರ ಹೊಂದುವ ಕನಸಲ್ಲಿ ಪಾಕ್
ಬಜೆಟ್ನಲ್ಲಿ ರಕ್ಷಣಾ ವಲಯಕ್ಕೆ ಮೀಸಲಿಟ್ಟ ಹಣವೆಷ್ಟು
ಪಾಕ್ ಮಾಜಿ ಪ್ರಧಾನಿಯ ಅಂದಿನ ಮಾತು ಇಂದು ನೆನಪಾಗಿದ್ದೇಕೆ..?
ಇಸ್ಲಾಮಾಬಾದ್: ಪಾಕಿಸ್ತಾನ.. ಸದ್ಯ ಭೀಕಾರಿಗಿಂತಲೂ ಕಡೆಯಾಗಿರುವ ದೇಶ. ನಮ್ಮಲ್ಲಿರುವ ಕತ್ತೆಗಳನ್ನು ಕೊಡ್ತೀವಿ ಅವುಗಳ ಬದಲಿಗೆ ನೀವು ನಮಗೆ ಹಿಟ್ಟನ್ನು ಕೊಡಿ ಅಂತ ಅನ್ಯ ರಾಷ್ಟ್ರಗಳಿಗೆ ಬೇಡಿಕೊಳ್ಳುವಷ್ಟು ದಯನೀಯ ಸ್ಥಿತಿಗೆ ಬಂದು ತಲುಪಿದೆ ಪಾಕಿಸ್ತಾನ. ಎಲ್ಲವೂ ಇತ್ತು.. ಫಲವತ್ತಾದ ಭೂಮಿ.. ಏಷ್ಯಾದ ಹೆಬ್ಬಾಗಿಲು ಅಂತಲೇ ಕರೆಯುವಂತ ಕಣಿವೆಗಳು. ಯಥೇಚ್ಛವಾಗಿ ನೀರು ನೀಡುವ ನದಿಗಳು. ಒಂದು ದೇಶ ಸುವರ್ಣಯುಗ ಕಟ್ಟಲು ಇನ್ನೇನು ಬೇಕು. ಬಂಗಾರದಂತ ಬೆಳೆಯನ್ನು ಬೆಳೆಯಬೇಕಾದಂತ ಭೂಮಿಯಲ್ಲಿ ಬೆಳೆದದ್ದು ಅಕ್ಷರಶಃ ಜಗತ್ತಿಗೆ ಮಾರಕವಾದ ಭಯೋತ್ಪಾದನೆಯೆಂಬ ಬೆಳೆ. ಸರ್ವಾಧಿಕಾರಿ ಅಧಿಕಾರಿಗಳು. ದೇಶವಾಗಿ ಇನ್ನೂ ಶೈಶಾವ್ಯಸ್ಥೆಯಲ್ಲಿದ್ದಾಗಲೇ ಗಡಿಯನ್ನು ವಿಸ್ತರಿಸಿಕೊಳ್ಳಲು ನೆರೆ ದೇಶದೊಂದಿಗೆ ಯುದ್ಧಕ್ಕೆ ಬೀಳುವ ದೂರದೃಷ್ಟಿಯಿಲ್ಲದ ನಾಯಕರು ಹೀಗೆ ಒಂದೊಂರ ಹಿಂದೊಂದು ಪ್ರಮಾದಗಳ ಸರಮಾಲೆಗಳಿಂದಾಗಿ ಈಗ ಪಾಕಿಸ್ತಾನ ಅಧೋಗತಿಗೆ ತಲುಪಿದೆ. ಜನರು ಹಿಡಿ ಹಿಟ್ಟಿಗಾಗಿ ಉಡಿಯನ್ನು ಚಾಚುತ್ತಿದ್ದರೆ ಇತ್ತ ಪಾಕಿಸ್ತಾನ ಸರ್ಕಾರ ಬೇರೆಯದ್ದೇ ತಿರುಕನ ಕನಸು ಕಾಣುತ್ತಿದೆ.
ಇದನ್ನೂ ಓದಿ: ಆಳ ಸಮುದ್ರದಲ್ಲಿ ಅನಾಹುತ.. ತೈಲ ಟ್ಯಾಂಕರ್ ಮುಳುಗಿ 13 ಭಾರತೀಯರು ಸೇರಿ 16 ಮಂದಿ ನಾಪತ್ತೆ
ಕಳೆದ ಹಲವು ವರ್ಷಗಳಿಂದ ಪಾಕಿಸ್ತಾನವೆಂಬ ನೆರೆ ರಾಜ್ಯ ಆರ್ಥಿಕವಾಗಿ ಜರ್ಜರಿತವಾಗಿ ಹೋಗಿದೆ.. ಇತಿಹಾಸದಲ್ಲಿ ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟನ್ನು ಈ ದೇಶ ಅನುಭವಿಸುತ್ತಿದೆ. ಹಣದುಬ್ಬರ ಅನ್ನೋದು ಪಾಕಿಸ್ತಾನವೆಂಬ ಪಾಕಿಸ್ತಾನವನ್ನೇ ನುಂಗಿಬಿಟ್ಟಿದೆ. ಪರಿಣಾಮ ಸದ್ಯ ಪಾಕ್ ಪ್ರಜೆಗಳು ಒಂದು ಕಿಲೋ ಗೋದಿ ಹಿಟ್ಟು ಖರೀದಿಸಲು ಅಲ್ಲಿಯ ಪ್ರಜೆ ಬರೋಬ್ಬರಿ 800 ಪಾಕಿಸ್ತಾನದ ರೂಪಾಯಿಗಳನ್ನು ಕೊಡಬೇಕು. ಒಂದು ಲೀಟರ್ ಅಡುಗೆ ಎಣ್ಣೆ ಖರೀದಿಸಬೇಕಾದ್ರೆ 900 ಪಾಕಿಸ್ತಾನದ ರೂಪಾಯಿಗಳನ್ನು ನೀಡಬೇಕು. ಇಲ್ಲಿಗೆ ಬಂದು ನಿಂತಿದೆ ಪಾಕ್ ಪ್ರಜೆಗಳ ಗತಿ. ಇದರ ಜೊತೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಬಂಡಾಯ. ಬಲೂಚಿಸ್ತಾನದಲ್ಲಿನ ಹಿಂಸಾಚಾರ, ಇವೆಲ್ಲವೂ ಕೆಂಡದಂತೆ ಸೆರಗಲ್ಲಿ ಕುಳಿತು ಕಾಡುತ್ತಿದ್ದರೂ ಪಾಕಿಸ್ತಾನಕ್ಕೆ ಮಾತ್ರ ಅಣ್ವಸ್ತ್ರದ ಕನಸು ಮಾಗಿಲ್ಲ.. ಈಗಲೂ ಮತ್ತೆ ಅಣ್ವಸ್ತ್ರಗಳನ್ನು ಹೊಂದುವ, ರಕ್ಷಣಾ ಕ್ಷೇತ್ರದಲ್ಲಿ ಬಲಾಢ್ಯ ಎನಿಸಿಕೊಳ್ಳುವ ಹುಚ್ಚು ಕನಸಿನಲ್ಲಿಯೇ ತೇಲುತ್ತಿದೆ.
ಜುಲ್ಫೀಕರ್ ಅಲಿ ಬುಟ್ಟೋ ಮಾತನ್ನೇ ವೇದವಾಕ್ಯ ಮಾಡಿಕೊಳ್ತಾ ಪಾಕ್..?
ಪಾಕಿಸ್ತಾನದ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಬುಟ್ಟೊಗೂ ಇದೇ ತರದ ಹುಚ್ಚೊಂದು ಮೆಟ್ಟಿಕೊಂಡಿತ್ತು. ದೇಶದ ಆರ್ಥಿಕ ಸ್ಥಿತಿ ಎಲ್ಲಿಗಾದ್ರೂ ಹೋಗಿ ತಲುಪಲಿ ನಾವು ಅಣ್ವಸ್ತ್ರಗಳನ್ನು ಹೊಂದಿಯೇ ಹೊಂದುತ್ತೇವೆ.. ಇಡೀ ದೇಶ ಹುಲ್ಲು ತಿಂದು ಆದ್ರೂ ಬದುಕುತ್ತೆ ಆದ್ರೆ ಅಣ್ವಸ್ತ್ರ ತಯಾರಿಕೆಯಿಂದ ಮಾತ್ರ ಹಿಂದೆ ಸರಿಯುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ರು. ಈಗ ಹಿರಿಯಜ್ಜನ ಪರಂಪರೆಯನ್ನೇ ಪಾಕ್ ಮುಂದುವರಿಸಿಕೊಂಡು ಬರುತ್ತಿದೆ.. ದೇಶದ ಜನರಿಗೆ ತಿನ್ನಲು ಅನ್ನವಿಲ್ಲ ಉಡಲು ವಸ್ತ್ರವಿಲ್ಲ ಆದ್ರೆ ಪಾಕ್ ಸರ್ಕಾರಕ್ಕೆ ಮಾತ್ರ ಅಣ್ವಸ್ತ್ರಗಳನ್ನು ತಯಾರಿಸುವ ಹುಚ್ಚು ಮಾತ್ರ ಇನ್ನೂ ಬಿಟ್ಟಿಲ್ಲ.. ಅದಕ್ಕೆ ಕೈಗನ್ನಡಿ ಹಿಡಿದಂತಿದೆ ಪಾಕಿಸ್ತಾನದ ಈ ಬಾರಿಯ ರಕ್ಷಣಾ ಬಜೆಟ್.
ಇದನ್ನೂ ಓದಿ: ಡ್ರೋನ್ ಮೂಲಕ ಹೆಂಡತಿ ಅಕ್ರಮ ಸಂಬಂಧ ಪತ್ತೆ ಹಚ್ಚಿದ ಗಂಡ.. ಆಮೇಲೆ ನಡೆದಿದ್ದೇ ಬೇರೆ!
ಇಷ್ಟೆಲ್ಲಾ ಆರ್ಥಿಕ ಬಿಕ್ಕಟ್ಟು ಇಡೀ ದೇಶವನ್ನೇ ಹಿಂಡಿ ಹಿಪ್ಪೆ ಮಾಡುತ್ತಿದ್ರೆ, ಮತ್ತೊಂದು ಕಡೆ ಪಾಕಿಸ್ತಾನ ತನ್ನ ರಕ್ಷಣಾ ಬಜೆಟ್ನಲ್ಲಿ ಶೇಕಡಾ 15ರಷ್ಟು ಏರಿಕೆ ಮಾಡಿದೆ. ಇದೇ ಜೂನ್ 15 ರಂದು ಬಜೆಟ್ ಮಂಡಿಸಿದ ಪಾಕಿಸ್ತಾನದ ಹಣಕಾಸು ಮಂತ್ರಿ ಮೊಹಮ್ಮದ್ ಔರಂಗ್ಜೇಬ್ ರಕ್ಷಣಾ ಇಲಾಖೆಗೆ ಪಾಕಿಸ್ತಾನದ ರೂಪಾಯಿಯಲ್ಲಿ 2,122 ಬಿಲಿಯನ್ ಅಂದ್ರೆ 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಮೀಸಲಿಡಲಾಗಿದೆ. ಇದು ಮತ್ತೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಹೊಸದಾಗಿ ಸಾಲ ಪಡೆಯುವ ಸಾಹಸದ ಒಂದು ಭಾಗವಾಗಿದ್ದಲ್ಲದೇ. ಅತ್ಯಾಧುನಿಕ ಅಣ್ವಸ್ತ್ರಗಳನ್ನು ತಯಾರಿಕೆಗೆ ಮಾಡಿಕೊಂಡಿರುವ ತಯಾರಿ ಎಂದು ಕೂಡ ಹೇಳಲಾಗುತ್ತಿದೆ. ಸದ್ಯ ಹಣದುಬ್ಬರ, ಜಿಡಿಪಿ ಕುಸಿತದಂತಹ ಕಠಿಣ ಪರಿಸ್ಥಿತಿಯಲ್ಲಿಯೂ ರಕ್ಷಣಾ ವಿಭಾಗಕ್ಕೆ ಈ ಮಟ್ಟಿನ ಹಣವನ್ನು ಮೀಸಲಿಟ್ಟಿರುವುದು ಸಹಜವಾಗಿ ಪಾಕ್ ಪ್ರಜೆಗಳ ಆಕ್ರೋಶವನ್ನು ಹೆಚ್ಚಿಸಿದೆ. ಹಣದುಬ್ಬರ, ನಿರುದ್ಯೋಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾತಾಳಕ್ಕೆ ಕುಸಿದಿರುವ ಪಾಕಿಸ್ತಾಣದ ರೂಪಾಯಿ ಮೌಲ್ಯ ಇವೆಲ್ಲದರಿಂದಲೂ ಪಾರಾಗುವ ಯಾವ ಯೋಚನೆಯೂ ಪಾಕ್ಗೆ ಇದ್ದಂತಿಲ್ಲ. ಸದ್ಯ ಇರುವ ಶೇಕಡಾ 3.5 ಜಿಡಿಪಿಯನ್ನು ಮುಂಬರುವ ದಿನಗಳಲ್ಲಿ 3.6ಕ್ಕೆ ಏರಿಸುವ ಗುರಿಯೊಂದಿಗೆ ಪಾಕಿಸ್ತಾನ ತನ್ನ ಬಜೆಟ್ ಮಂಡಿಸಿದೆ. ಮುಸ್ಲಿಂ ರಾಷ್ಟ್ರಗಳ ಮುಂದೆ, ಐಎಂಎಫ್ ಮುಂದೆ ಭಿಕ್ಷಾಂದೇಹಿ ಅಂತ ನಿಲ್ಲುವ ಎಲ್ಲ ತಯಾರಿಗೂ ಪಾಕ್ ಮರಳಿ ಸಿದ್ಧವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ