ಇಷ್ಟಾದರೂ ಬುದ್ಧಿ ಕಲಿಯಲಿಲ್ಲ.. ಭೀಕರ ದಾಳಿ ಬೆನ್ನಲ್ಲೇ ಪಾಕ್ ಸೇನಾಧಿಕಾರಿ ಏನು ಮಾಡಿದ ನೋಡಿ..! VIDEO

author-image
Ganesh
Updated On
ಇಷ್ಟಾದರೂ ಬುದ್ಧಿ ಕಲಿಯಲಿಲ್ಲ.. ಭೀಕರ ದಾಳಿ ಬೆನ್ನಲ್ಲೇ ಪಾಕ್ ಸೇನಾಧಿಕಾರಿ ಏನು ಮಾಡಿದ ನೋಡಿ..! VIDEO
Advertisment
  • ಆಪರೇಷನ್ ಸಿಂಧೂರ ದಾಳಿ ಮೂಲಕ ಉತ್ತರ
  • ಒಟ್ಟು 9 ಅಡಗುತಾಣಗಳನ್ನು ಗುರುತಿಸಿ ಹೊಡೆದ ಸೇನೆ
  • ಭಾರತದ ಏರ್​ಸ್ಟ್ರೈಕ್​ಗೆ ನಡುಗಿದ ಪಾಕಿಸ್ತಾನ

ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯು ಆಪರೇಷನ್ ಸಿಂಧೂರ ನಡೆಸಿದೆ. ಮಾಹಿತಿಗಳ ಪ್ರಕಾರ 80ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂಬ ಎನ್ನಲಾಗಿದೆ. ಪಾಕ್​ಗೆ ಭಾರತ ಆಗಾಗ ಎಚ್ಚರಿಕೆ ನೀಡುತ್ತಿದ್ದರೂ, ವಿಶ್ವದ ನಾಯಕರುಗಳಿಂದ ಬುದ್ಧಿ ಹೇಳಿಸಿದರೂ ತನ್ನ ನರಿಬುದ್ಧಿಯನ್ನು ಮಾತ್ರ ಬಿಡಲಿಲ್ಲ.

ಇದನ್ನೂ ಓದಿ: ಆಪರೇಷನ್ ಸಿಂಧೂರ್; ಭಾರತದಿಂದ ಮಹತ್ವದ ಸುದ್ದಿಗೋಷ್ಟಿ, ಹೈಲೈಟ್ಸ್​..!

publive-image

ಇದೀಗ ಪಹಲ್ಗಾಮ್ ದಾಳಿಯ ಪ್ರತಿಯಾಗಿ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಇಷ್ಟಿದ್ದೂ ಪಾಕ್​ ನಾಯಿ ಬಾಲ ಡೊಂಕು ಎಂಬಂತೆ ವರ್ತಿಸುತ್ತಿದೆ. ಆಪರೇಷನ್ ಸಿಂಧೂರ್​​ ದಾಳಿಯಲ್ಲಿ ಹಲವು ಉಗ್ರರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಉಗ್ರರ ಆರೋಗ್ಯ ವಿಚಾರಿಸಲು ಪಾಕ್ ಸೇನಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಜೈಷ್ ಇ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಉಗ್ರರನ್ನ ಪಾಕ್ ಸೇನಾಧಿಕಾರಿಯೊಬ್ಬ ಭೇಟಿಯಾಗಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಪಾಕ್ ಸೇನಾಧಿಕಾರಿ ಆಸ್ಪತ್ರೆಗೆ ಬಂದು ಉಗ್ರರ ಕೈಕುಲುಕಿ ಮಾಹಿತಿ ಪಡೆಯುತ್ತಿರೋದನ್ನು ಗಮನಿಸಬಹುದಾಗಿದೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್.. ಭಾರತ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ ಭರತ್ ಭೂಷಣ್ ತಂದೆ

publive-image

ಮಾತ್ರವಲ್ಲ, ಜಮ್ಮು-ಕಾಶ್ಮೀರದ ಪೂಂಚ್​​ನಲ್ಲಿ ಮತ್ತೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಪರಿಣಾಮ ಭಾರತದ 8 ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಇನ್ನು ‘ಆಪರೇಷನ್ ಸಿಂಧೂರ್’ ಮಿಲಿಟರಿ ಕಾರ್ಯಚರಣೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಸುದ್ದಿಗೋಷ್ಟಿ ನಡೆಸಿ ಸಂಪೂರ್ಣ ಮಾಹಿತಿ ನೀಡಿದೆ. ಸುದ್ದಿಗೋಷ್ಟಿಯಲ್ಲಿ ನೀಡಿದ ಮಾಹಿತಿಯಂತೆ ಆಪರೇಷನ್ ಸಿಂಧೂರ್​​​ನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಒಟ್ಟು 9 ಸ್ಥಳಗಳ ಮೇಲೆ ದಾಳಿಯಾಗಿದೆ. ಪಾಕ್ ಮಿಲಿಟರಿ ಕ್ಯಾಂಪ್​​ ಮೇಲೆ ದಾಳಿ ಆಗಿಲ್ಲ. ಸಾಮಾನ್ಯ ನಾಗರಿಕರಿಗೂ ಯಾವುದೇ ಹಾನಿ ಮಾಡಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟವಾಗಿ ತಿಳಿಸಿದೆ. ಆದರೆ, ಪಾಕ್, ಭಾರತದ ನಾಗರಿಕರ ಮೇಲೆ ದಾಳಿ ಮಾಡಿದೆ.

ಇದನ್ನೂ ಓದಿ: ಟಾರ್ಗೆಟ್​ 9! ಆಪರೇಷನ್ ಸಿಂಧೂರ ರೋಚಕ ವಿಡಿಯೋ ರಿಲೀಸ್ ಮಾಡಿದ ಸೇನೆ VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment