ಜೀವಕ್ಕೆ ಸಂಚಕಾರ ತರುತ್ತೆ ಟೀ, ಕಾಫಿ! ಕುಡಿಯುವಾಗ ಇರಲಿ ಈ ಎಚ್ಚರ! ಸತ್ಯ ಬಿಚ್ಚಿಟ್ಟ ಆರೋಗ್ಯ ಇಲಾಖೆ

author-image
Ganesh
Updated On
ಜೀವಕ್ಕೆ ಸಂಚಕಾರ ತರುತ್ತೆ ಟೀ, ಕಾಫಿ! ಕುಡಿಯುವಾಗ ಇರಲಿ ಈ ಎಚ್ಚರ! ಸತ್ಯ ಬಿಚ್ಚಿಟ್ಟ ಆರೋಗ್ಯ ಇಲಾಖೆ
Advertisment
  • ಆರೋಗ್ಯ ಇಲಾಖೆಯಿಂದ ಶಾಕಿಂಗ್ ಮಾಹಿತಿ
  • ಪ್ರಯೋಗಾಲಯದಲ್ಲಿ ನಡೆದ ಟೆಸ್ಟ್​ನಲ್ಲಿ ಸಾಬೀತು
  • ಇನ್ಮುಂದೆ ಯದ್ವಾ, ತದ್ವಾ ಟೀ ಕುಡಿಯೋದು ಬಿಟ್ಟುಬಿಡಿ

ಬೆಂಗಳೂರು: ಚಳಿ ಮತ್ತು ಮಳೆ! ಬೆಂಗಳೂರಿಗರನ್ನ ಬಿಟ್ಟೂ ಬಿಡದೇ ಕಾಡ್ತಿದೆ. ಇಂಥ ಪರಿಸ್ಥಿತಿಯಲ್ಲಿ ಬಹುತೇಕ ಮಂದಿ ಕಾಫಿ, ಟೀ ಮೊರೆ ಹೋಗ್ತಾರೆ. ಸಣ್ಣ ಬಿಡುವು ಮಾಡ್ಕೊಂಡು ಬಿಸಿಬಿಸಿ ಚಹಾ, ಕಾಫಿ ಹೀರಿ ಕೆಲಸ ಕಾರ್ಯಕ್ಕೆ ಮುಂದಾಗ್ತಾರೆ. ಹೀಗೆ, ಚಹಾ, ಕಾಫಿ, ಬೂಸ್ಟ್​ ಕುಡಿಯುತ್ತಿರೋ ಮಂದಿಗೆ ಆರೋಗ್ಯ ಇಲಾಖೆ ಶಾಕಿಂಗ್ ನ್ಯೂಸ್ ಕೊಟ್ಟಿದೆ.

ಸಿಟಿಯಲ್ಲಿರುವ ಬಹುತೇಕ ಮಂದಿ ಹೋಟೆಲ್​, ಟೀ ಸ್ಟಾಲ್, ಆಫೀಸ್​ ಸೆರಿದಂತೆ ಹಲವು ಕಡೆ ಪೇಪರ್​ ಕಪ್​​ನಲ್ಲಿ ಟೀ, ಕಾಫಿ ಕುಡಿಯುತ್ತಾರೆ. ನೀವು ಏನಾದರೂ ಯದ್ವಾ-ತದ್ವಾ ಕಾಫಿ, ಟೀ ಕುಡಿಯುತ್ತಿದ್ದರೆ ಇಂದೇ ನಿಲ್ಲಿಸಿಬಿಡಿ. ಯಾಕೆಂದ್ರೆ ಆ ಪೇಪರ್ ಗ್ಲಾಸ್ ನಿಮ್ಮ ಪ್ರಾಣ ತೆಗೆದರೂ ಅಚ್ಚರಿ ಇಲ್ಲ.

ಇದನ್ನೂ ಓದಿ:ಪವಾಡ ಎಂಬಂತೆ ಕ್ಯಾನ್ಸರ್ ಗೆದ್ದ ಮಗಳು.. 1500 Km ದೂರದ ಅಯೋಧ್ಯೆಗೆ ಪಾದಯಾತ್ರೆ ಮಾಡಿದ ತಂದೆ

ಪ್ರಯೋಗಾಲದಲ್ಲಿ ಆಹಾರ ಇಲಾಖೆ ನಡೆಸಿದ ಟೆಸ್ಟ್ ಒಂದರಲ್ಲಿ ಇದು ದೃಢವಾಗಿದೆ. ಪರೀಕ್ಷೆ ವೇಳೆ ಕ್ಯಾನ್ಸರ್ ತರುವ ಅಂಶ ಪತ್ತೆಯಾಗಿದೆ. ಪೇಪರ್ ಗ್ಲಾಸ್​ನಲ್ಲಿ ಶೆಕಡಾ 20ರಷ್ಟು ಪ್ಲಾಸ್ಟಿಕ್ ಬಳಕೆ ಮಾಡಲಾಗ್ತಿದೆ. ಇದರಿಂದ ಜನರಲ್ಲಿ ಕ್ಯಾನ್ಸರ್ ಹರಡುವ ಭೀತಿ ಹೆಚ್ಚಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಪ್ಲಾಸ್ಟಿಕ್ ಮಿಕ್ಸ್ ಇಲ್ಲದ ಕಪ್ ಬಳಸಲು ಸೂಚನೆ ನೀಡಿದೆ. ಯಾವುದೇ ಕಡೆ ಪ್ಲಾಸ್ಟಿಕ್ ಮಿಕ್ಸ್ ಇರೋ ಕಪ್​​​ನಲ್ಲಿ ಟೀ, ಕಾಫಿ ಕೊಟ್ಟರೆ ಕುಡಿಯದೇ ಇರೋದು ಬೆಸ್ಟ್. ಇನ್ನು ಆರೋಗ್ಯ ಇಲಾಖೆ ಪ್ಲಾಸ್ಟಿಕ್ ಮಿಶ್ರಿತ ಪೇಪರ್ ಕಪ್ ಬ್ಯಾನ್ ಮಾಡಲು ತಯಾರಿ ನಡೆಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:Air pollution: ಬೆಂಗಳೂರಲ್ಲಿ ಹೆಚ್ಚಾದ ಕಲುಷಿತ ಗಾಳಿ.. ಸಿಟಿಯ ಈ ಏರಿಯಾಗಳಲ್ಲಿ ಮಾಸ್ಕ್​ ಧರಿಸಲೇಬೇಕು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment