ಒಂದೊಂದು ನೋವಿನ ಕತೆ ಹೇಳುತ್ತಿದೆ ‘ವಯನಾಡು ದುರಂತ’
ಎಸ್ಟೇಟ್ನಲ್ಲಿ ದುಡಿದು ಮಗಳನ್ನು ವಿದೇಶಕ್ಕೆ ಕಳುಹಿಸಿಕೊಟ್ಟ ಪೋಷಕರು
ಈಗ ಪೋಷಕರೇ ಇಲ್ಲ.. ಎಲ್ಲರನ್ನು ಸರ್ವನಾಶ ಮಾಡಿದ ಭಯಾನಕ ಭೂಕುಸಿತ
ಎಂಥಾ ದುರ್ವಿಧಿ. ಮಗಳನ್ನು ಕಷ್ಟಪಟ್ಟು ಓದಿಸಿ ಕೊನೆಗೆ ಉದ್ಯೋಗಕ್ಕೆ ವಿದೇಶಕ್ಕೆ ಕಳುಹಿಸಿದ ತಂದೆ-ತಾಯಿ ಇಬ್ಬರು ವಯನಾಡಿದ ಭೂಕುಸಿತದಲ್ಲಿ ನಾಪತ್ತೆಯಾಗಿದ್ದಾರೆ. ಮುಂಡಕ್ಕೈ ದುರಂತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಅತ್ತ ಯುಕೆಯಲ್ಲಿರುವ ಮಗಳು ತನ್ನವರಿಗಾಗಿ ಹುಡುಕಾಡುತ್ತಿದ್ದಾಳೆ. ಜೀವಿತ ಅವಧಿಯಲ್ಲಿ ಎಸ್ಟೇಟ್ನಲ್ಲಿ ದುಡಿದು ಮಗಳನ್ನು ವಿದೇಶಕ್ಕೆ ಕಳುಹಿಸಿ, ಆದರೀಗ ಪೋಷಕರಿಲ್ಲದೆ ಮಗಳು ಕಂಗಾಲಾಗಿದ್ದಾಳೆ.
ವಯನಾಡಿನ ಭೂಕುಸಿತದಲ್ಲಿ 290ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. 200 ಜನರು ನಾಪತ್ತೆಯಾಗಿದ್ದಾರೆ. ಸದ್ಯ ಸ್ಥಳದಲ್ಲಿ ಶೋಧಕಾರ್ಯ ನಡೆಯುತ್ತಿದೆ. ಸಾಕಷ್ಟು ಕುಟುಂಬಗಳು ತನ್ನವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅದರಂತೆಯೇ ಯುಕೆಯಲ್ಲಿ ಉದ್ಯೋಗದಲ್ಲಿದ್ದ ಮಗಳನ್ನು ತನ್ನ ತಂದೆ-ತಾಯಿಗಾಗಿ ಕಣ್ಣೀರು ಹಾಕುತ್ತಿದ್ದಾಳೆ. ದೇವರಿಗೆ ಹಿಡಿಶಾಪ ಹಾಕುತ್ತಿದ್ದಾಳೆ.
ಇದನ್ನೂ ಓದಿ: ಪಡ್ಡೆ ಹುಡುಗರೇ ಹುಷಾರ್.. ಜಸ್ಟ್ ಕೈ ಹಿಡಿದು ‘I LOVE YOU’ ಅಂದಿದ್ದಕ್ಕೆ ಜೈಲು ಶಿಕ್ಷೆ; ಎಷ್ಟು ವರ್ಷ?
ಮುಂಡಕ್ಕೈಯಲ್ಲಿ ಕುಟುಂಬವೊಂದು ಅಲ್ಲಿನ ಎಸ್ಟೇಟ್ನಲ್ಲಿ ದುಡಿದು, ಮಗಳನ್ನು ಚೆನ್ನಾಗಿ ಓದಿಸಿ, ಕೊನೆಗೆ ಉದ್ಯೋಗಕ್ಕಾಗಿ ಯುಕೆಗೆ ಕಳುಹಿಸುತ್ತಾರೆ. ಅಪ್ಪ-ಅಮ್ಮನ ಆಸೆಯಂತೆ ಮಗಳು ಒಳ್ಳೆಯ ಉದ್ಯೋಗವನ್ನು ಗಿಟ್ಟಿಸುತ್ತಾಳೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ಪೋಷಕರೇ ಎಚ್ಚರ.. ಮಕ್ಕಳನ್ನು ಆಟ ಆಡಲು ಬಿಟ್ಟು ಯಾಮಾರಿದ್ರೆ ಅಪಾಯ; ಈ ವಿಡಿಯೋ ನೋಡಿ!
ಮಗಳ ವಿದೇಶ ಉದ್ಯೋಗದಿಂದ ಕುಟುಂಬ ಸಂತೋಷದಿಂದ ಜೀವನ ಕಳೆಯುತ್ತಿತ್ತು. ಅಷ್ಟೇ ಏಕೆ ಕಳೆದ ತಿಂಗಳು ತಂದೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಂದೆಗೆ ಯುಕೆಯಿಂದ ಒಂದೂವರೆ ಪವನ್ ಚಿನ್ನವನ್ನು ಗಿಫ್ಟ್ ಕೂಡ ನೀಡಿದ್ದಳು. ಆದರೀಗ ಅವರೆಲ್ಲರೂ ಕಣ್ಣರೆಯಾಗಿದ್ದಾರೆ. ಮುಂಡಕ್ಕೈ ದುರಂತದಿಂದ ತಂದೆ-ತಾಯಿ, ಆಕೆಯ ಸಹೋದರ ಎಲ್ಲರೂ ಸಾವನ್ನಪ್ಪಿದ್ದಾರೆ. ಸದ್ಯದ ಪರಿಸ್ಥಿತಿ ಗಮನಿಸಿದಾಗ ಆಕೆಯ ನೋವು, ಬೇಸರ ಆಲಿಸಲು ಕುಟುಂಬವೇ ಇಲ್ಲದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಒಂದೊಂದು ನೋವಿನ ಕತೆ ಹೇಳುತ್ತಿದೆ ‘ವಯನಾಡು ದುರಂತ’
ಎಸ್ಟೇಟ್ನಲ್ಲಿ ದುಡಿದು ಮಗಳನ್ನು ವಿದೇಶಕ್ಕೆ ಕಳುಹಿಸಿಕೊಟ್ಟ ಪೋಷಕರು
ಈಗ ಪೋಷಕರೇ ಇಲ್ಲ.. ಎಲ್ಲರನ್ನು ಸರ್ವನಾಶ ಮಾಡಿದ ಭಯಾನಕ ಭೂಕುಸಿತ
ಎಂಥಾ ದುರ್ವಿಧಿ. ಮಗಳನ್ನು ಕಷ್ಟಪಟ್ಟು ಓದಿಸಿ ಕೊನೆಗೆ ಉದ್ಯೋಗಕ್ಕೆ ವಿದೇಶಕ್ಕೆ ಕಳುಹಿಸಿದ ತಂದೆ-ತಾಯಿ ಇಬ್ಬರು ವಯನಾಡಿದ ಭೂಕುಸಿತದಲ್ಲಿ ನಾಪತ್ತೆಯಾಗಿದ್ದಾರೆ. ಮುಂಡಕ್ಕೈ ದುರಂತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಅತ್ತ ಯುಕೆಯಲ್ಲಿರುವ ಮಗಳು ತನ್ನವರಿಗಾಗಿ ಹುಡುಕಾಡುತ್ತಿದ್ದಾಳೆ. ಜೀವಿತ ಅವಧಿಯಲ್ಲಿ ಎಸ್ಟೇಟ್ನಲ್ಲಿ ದುಡಿದು ಮಗಳನ್ನು ವಿದೇಶಕ್ಕೆ ಕಳುಹಿಸಿ, ಆದರೀಗ ಪೋಷಕರಿಲ್ಲದೆ ಮಗಳು ಕಂಗಾಲಾಗಿದ್ದಾಳೆ.
ವಯನಾಡಿನ ಭೂಕುಸಿತದಲ್ಲಿ 290ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. 200 ಜನರು ನಾಪತ್ತೆಯಾಗಿದ್ದಾರೆ. ಸದ್ಯ ಸ್ಥಳದಲ್ಲಿ ಶೋಧಕಾರ್ಯ ನಡೆಯುತ್ತಿದೆ. ಸಾಕಷ್ಟು ಕುಟುಂಬಗಳು ತನ್ನವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅದರಂತೆಯೇ ಯುಕೆಯಲ್ಲಿ ಉದ್ಯೋಗದಲ್ಲಿದ್ದ ಮಗಳನ್ನು ತನ್ನ ತಂದೆ-ತಾಯಿಗಾಗಿ ಕಣ್ಣೀರು ಹಾಕುತ್ತಿದ್ದಾಳೆ. ದೇವರಿಗೆ ಹಿಡಿಶಾಪ ಹಾಕುತ್ತಿದ್ದಾಳೆ.
ಇದನ್ನೂ ಓದಿ: ಪಡ್ಡೆ ಹುಡುಗರೇ ಹುಷಾರ್.. ಜಸ್ಟ್ ಕೈ ಹಿಡಿದು ‘I LOVE YOU’ ಅಂದಿದ್ದಕ್ಕೆ ಜೈಲು ಶಿಕ್ಷೆ; ಎಷ್ಟು ವರ್ಷ?
ಮುಂಡಕ್ಕೈಯಲ್ಲಿ ಕುಟುಂಬವೊಂದು ಅಲ್ಲಿನ ಎಸ್ಟೇಟ್ನಲ್ಲಿ ದುಡಿದು, ಮಗಳನ್ನು ಚೆನ್ನಾಗಿ ಓದಿಸಿ, ಕೊನೆಗೆ ಉದ್ಯೋಗಕ್ಕಾಗಿ ಯುಕೆಗೆ ಕಳುಹಿಸುತ್ತಾರೆ. ಅಪ್ಪ-ಅಮ್ಮನ ಆಸೆಯಂತೆ ಮಗಳು ಒಳ್ಳೆಯ ಉದ್ಯೋಗವನ್ನು ಗಿಟ್ಟಿಸುತ್ತಾಳೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ಪೋಷಕರೇ ಎಚ್ಚರ.. ಮಕ್ಕಳನ್ನು ಆಟ ಆಡಲು ಬಿಟ್ಟು ಯಾಮಾರಿದ್ರೆ ಅಪಾಯ; ಈ ವಿಡಿಯೋ ನೋಡಿ!
ಮಗಳ ವಿದೇಶ ಉದ್ಯೋಗದಿಂದ ಕುಟುಂಬ ಸಂತೋಷದಿಂದ ಜೀವನ ಕಳೆಯುತ್ತಿತ್ತು. ಅಷ್ಟೇ ಏಕೆ ಕಳೆದ ತಿಂಗಳು ತಂದೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಂದೆಗೆ ಯುಕೆಯಿಂದ ಒಂದೂವರೆ ಪವನ್ ಚಿನ್ನವನ್ನು ಗಿಫ್ಟ್ ಕೂಡ ನೀಡಿದ್ದಳು. ಆದರೀಗ ಅವರೆಲ್ಲರೂ ಕಣ್ಣರೆಯಾಗಿದ್ದಾರೆ. ಮುಂಡಕ್ಕೈ ದುರಂತದಿಂದ ತಂದೆ-ತಾಯಿ, ಆಕೆಯ ಸಹೋದರ ಎಲ್ಲರೂ ಸಾವನ್ನಪ್ಪಿದ್ದಾರೆ. ಸದ್ಯದ ಪರಿಸ್ಥಿತಿ ಗಮನಿಸಿದಾಗ ಆಕೆಯ ನೋವು, ಬೇಸರ ಆಲಿಸಲು ಕುಟುಂಬವೇ ಇಲ್ಲದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ