‘ಪ್ರಬುದ್ಧ’ ಯೋಜನೆಯಡಿ ನೀಡುತ್ತಿದ್ದ ಸಹಾಯಧನ ರದ್ದು
ಮಗಳ ವಿದ್ಯಾಭ್ಯಾಸಕ್ಕಾಗಿ ಕಿಡ್ನಿದಾನಕ್ಕೆ ಮುಂದಾದ ಪೋಷಕರು
ಆಫಿಸ್ನಿಂದ ಆಫಿಸ್ಗೆ ಸುತ್ತಿದ್ರು ಸಿಕ್ತಿಲ್ಲ ಈ ವಿದ್ಯಾರ್ಥಿಗೆ ನೆರವು
ಬೆಂಗಳೂರು: ಕಣ್ಣಿಗೆ ಕಾಣೋ ದೇವರು ಅಂದ್ರೆ ಅದು ಜನ್ಮ ಕೊಟ್ಟ ಅಪ್ಪ-ಅಮ್ಮ, ತಮ್ಮ ಮಕ್ಕಳಿಗಾಗಿ ಇಡೀ ಜೀವನವನ್ನೇ ಸವಿಸಿಬಿಡ್ತಾರೆ. ಆದ್ರೆ ಈ ಸ್ಟೋರಿಯಲ್ಲಿ ಸರ್ಕಾರದ ವಿರುದ್ಧ ಸಮರ ಸಾರಿರೋ ಪೋಷಕರು ತನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಕಿಡ್ನಿಯನ್ನೇ ಮಾರೋಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ನಡುರೋಡಲ್ಲಿ ಹರಿದ ನೆತ್ತರು.. ಆನೇಕಲ್ ಪುರಸಭೆ ಸದಸ್ಯ ಸ್ಕ್ರಾಪ್ ರವಿ ಬರ್ಬರ ಹತ್ಯೆ; ಕಾರಣವೇನು?
ನಮ್ಮ ಕಿಡ್ನಿ ಮಾರಾಟ ಮಾಡೋ ನಿರ್ಧಾರ ಮಾಡಿದ್ದೀವಿ
ಹೆಸರು ನೇಹಾ.. ಇವರು ವಿದೇಶದಲ್ಲಿ PHD ಮಾಡಿ ಡಾಕ್ಟರೇಟ್ ಪಡೆಯೋ ಕನಸು ಕಂಡಿದ್ದಾಕೆ. ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ತನ್ನ ಹಕ್ಕಿಗಾಗಿ ಹೋರಾಡ್ತಿದ್ದಾರೆ. ಖುದ್ದು ಸಂಬಂಧಪಟ್ಟ ಮಿನಿಸ್ಟರ್ನ ಭೇಟಿಯಾದ್ರೂ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಮಗಳ ಕನಸಿಗೆ ಸಾಥ್ ಕೊಟ್ಟಿರೋ ಪೋಷಕರು ಕಿಡ್ನಿ ಮಾರೋದಕ್ಕೆ ಮುಂದಾಗಿದ್ದಾರೆ. ಸಮಾಜ ಎಷ್ಟೇ ಮುಂದುವರೆದಿದ್ರೂ ಈಗಲೂ ಹೆಣ್ಣು ಮಕ್ಕಳಿಗ್ಯಾಕೆ ಬೇಕು ವಿದ್ಯಾಬ್ಯಾಸ ಅನ್ನೋ ಮನಸ್ಥಿತಿಗಳ ಮಧ್ಯೆ. ತನ್ನ ಮಗಳ ಶಿಕ್ಷಣಕ್ಕಾಗಿ ಈ ಪೋಷಕರು ಜೀವವನ್ನೇ ಪಣಕ್ಕಿಡಲು ರೆಡಿಯಾಗಿದ್ದಾರೆ.
ಇದನ್ನೂ ಓದಿ: ಗೋವಿಂದ, ಗೋವಿಂದ.. ಅಹೋರಾತ್ರಿ ಧರಣಿಯಲ್ಲಿ ಬಿಜೆಪಿ, ಜೆಡಿಎಸ್ ಸದಸ್ಯರ ಹಂಗಾಮ; ಫೋಟೋಗಳಲ್ಲಿ ನೋಡಿ!
ಎದುರಾಗಿರೋ ಸಮಸ್ಯೆ ಏನು?
‘ಪ್ರಬುದ್ಧ’ ಯೋಜನೆಯಡಿ ನೀಡುತ್ತಿದ್ದ ಸಹಾಯಧನ ರದ್ದುಗೊಳಿಸಲಾಗಿದೆ. ಪ್ರಬುದ್ಧ ಯೋಜನೆ ಪರಿಶಿಷ್ಟ ಜಾತಿ ಹಾಗೂ ಪಂಗಡದ PHD ವಿದ್ಯಾರ್ಥಿಗಳಿಗಿರೋ ಸ್ಕೀಮ್. ಈ ಯೋಜನೆಯಡಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗುತ್ತೆ. ಈ ಸ್ಕಾಲರ್ ಶಿಪ್ ಅಡಿ ಎಷ್ಟು ವರ್ಷ ಓದುತ್ತಾರೋ ಅಷ್ಟು ವರ್ಷದ ಟ್ಯೂಷನ್ ಫೀಸ್, ಅಕಮಡೇಷನ್ ಫೀಸ್, ಹೀಗೆ ಉಚಿತ ಬುಕ್ಸ್ ಕೂಡ ಈ ಪ್ರಬುದ್ಧ ಯೋಜನೆಯಡಿ ಸಿಗುತ್ತೆ. ಬಟ್ ಈ ಸಹಾಯಧನವನ್ನ ಸರ್ಕಾರ ದಿಢೀರ್ ರದ್ದು ಮಾಡಿದೆ. ಇದರಿಂದ ವಿದೇಶದಲ್ಲಿ PHD ಮಾಡಲು ಮುಂದಾಗಿದ್ದವರಿಗೆ ಶಾಕ್ ಎದುರಾಗಿದೆ.
ನೇಹಾಗೆ ಈಗಾಗಲೇ ಟಾಪ್ ಯೂನಿವರ್ಸಿಟಿಯಲ್ಲಿ ಸೀಟ್ ಸಿಕ್ಕಿದ್ದು ಸ್ಕಾಲರ್ಶಿಪ್ಗೆ ಅಪ್ಲೈ ಮಾಡಲು ಹೋದಾಗ ವಿಚಾರ ಗೊತ್ತಾಗಿದೆ. ಸದ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಯೋಜನೆ ಮರುಜಾರಿ ಮಾಡ್ತೀವೆಂದು ಭರವಸೆ ಕೊಟ್ಟಿದ್ದಾರಂತೆ. ಬಟ್ ಸ್ಕಾಲರ್ ಶಿಪ್ PHD ಮಾಡೋರಿಗೆ ಸಿಗುತ್ತಾ ಅನ್ನೋ ಗೊಂದಲವಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
‘ಪ್ರಬುದ್ಧ’ ಯೋಜನೆಯಡಿ ನೀಡುತ್ತಿದ್ದ ಸಹಾಯಧನ ರದ್ದು
ಮಗಳ ವಿದ್ಯಾಭ್ಯಾಸಕ್ಕಾಗಿ ಕಿಡ್ನಿದಾನಕ್ಕೆ ಮುಂದಾದ ಪೋಷಕರು
ಆಫಿಸ್ನಿಂದ ಆಫಿಸ್ಗೆ ಸುತ್ತಿದ್ರು ಸಿಕ್ತಿಲ್ಲ ಈ ವಿದ್ಯಾರ್ಥಿಗೆ ನೆರವು
ಬೆಂಗಳೂರು: ಕಣ್ಣಿಗೆ ಕಾಣೋ ದೇವರು ಅಂದ್ರೆ ಅದು ಜನ್ಮ ಕೊಟ್ಟ ಅಪ್ಪ-ಅಮ್ಮ, ತಮ್ಮ ಮಕ್ಕಳಿಗಾಗಿ ಇಡೀ ಜೀವನವನ್ನೇ ಸವಿಸಿಬಿಡ್ತಾರೆ. ಆದ್ರೆ ಈ ಸ್ಟೋರಿಯಲ್ಲಿ ಸರ್ಕಾರದ ವಿರುದ್ಧ ಸಮರ ಸಾರಿರೋ ಪೋಷಕರು ತನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಕಿಡ್ನಿಯನ್ನೇ ಮಾರೋಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ನಡುರೋಡಲ್ಲಿ ಹರಿದ ನೆತ್ತರು.. ಆನೇಕಲ್ ಪುರಸಭೆ ಸದಸ್ಯ ಸ್ಕ್ರಾಪ್ ರವಿ ಬರ್ಬರ ಹತ್ಯೆ; ಕಾರಣವೇನು?
ನಮ್ಮ ಕಿಡ್ನಿ ಮಾರಾಟ ಮಾಡೋ ನಿರ್ಧಾರ ಮಾಡಿದ್ದೀವಿ
ಹೆಸರು ನೇಹಾ.. ಇವರು ವಿದೇಶದಲ್ಲಿ PHD ಮಾಡಿ ಡಾಕ್ಟರೇಟ್ ಪಡೆಯೋ ಕನಸು ಕಂಡಿದ್ದಾಕೆ. ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ತನ್ನ ಹಕ್ಕಿಗಾಗಿ ಹೋರಾಡ್ತಿದ್ದಾರೆ. ಖುದ್ದು ಸಂಬಂಧಪಟ್ಟ ಮಿನಿಸ್ಟರ್ನ ಭೇಟಿಯಾದ್ರೂ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಮಗಳ ಕನಸಿಗೆ ಸಾಥ್ ಕೊಟ್ಟಿರೋ ಪೋಷಕರು ಕಿಡ್ನಿ ಮಾರೋದಕ್ಕೆ ಮುಂದಾಗಿದ್ದಾರೆ. ಸಮಾಜ ಎಷ್ಟೇ ಮುಂದುವರೆದಿದ್ರೂ ಈಗಲೂ ಹೆಣ್ಣು ಮಕ್ಕಳಿಗ್ಯಾಕೆ ಬೇಕು ವಿದ್ಯಾಬ್ಯಾಸ ಅನ್ನೋ ಮನಸ್ಥಿತಿಗಳ ಮಧ್ಯೆ. ತನ್ನ ಮಗಳ ಶಿಕ್ಷಣಕ್ಕಾಗಿ ಈ ಪೋಷಕರು ಜೀವವನ್ನೇ ಪಣಕ್ಕಿಡಲು ರೆಡಿಯಾಗಿದ್ದಾರೆ.
ಇದನ್ನೂ ಓದಿ: ಗೋವಿಂದ, ಗೋವಿಂದ.. ಅಹೋರಾತ್ರಿ ಧರಣಿಯಲ್ಲಿ ಬಿಜೆಪಿ, ಜೆಡಿಎಸ್ ಸದಸ್ಯರ ಹಂಗಾಮ; ಫೋಟೋಗಳಲ್ಲಿ ನೋಡಿ!
ಎದುರಾಗಿರೋ ಸಮಸ್ಯೆ ಏನು?
‘ಪ್ರಬುದ್ಧ’ ಯೋಜನೆಯಡಿ ನೀಡುತ್ತಿದ್ದ ಸಹಾಯಧನ ರದ್ದುಗೊಳಿಸಲಾಗಿದೆ. ಪ್ರಬುದ್ಧ ಯೋಜನೆ ಪರಿಶಿಷ್ಟ ಜಾತಿ ಹಾಗೂ ಪಂಗಡದ PHD ವಿದ್ಯಾರ್ಥಿಗಳಿಗಿರೋ ಸ್ಕೀಮ್. ಈ ಯೋಜನೆಯಡಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗುತ್ತೆ. ಈ ಸ್ಕಾಲರ್ ಶಿಪ್ ಅಡಿ ಎಷ್ಟು ವರ್ಷ ಓದುತ್ತಾರೋ ಅಷ್ಟು ವರ್ಷದ ಟ್ಯೂಷನ್ ಫೀಸ್, ಅಕಮಡೇಷನ್ ಫೀಸ್, ಹೀಗೆ ಉಚಿತ ಬುಕ್ಸ್ ಕೂಡ ಈ ಪ್ರಬುದ್ಧ ಯೋಜನೆಯಡಿ ಸಿಗುತ್ತೆ. ಬಟ್ ಈ ಸಹಾಯಧನವನ್ನ ಸರ್ಕಾರ ದಿಢೀರ್ ರದ್ದು ಮಾಡಿದೆ. ಇದರಿಂದ ವಿದೇಶದಲ್ಲಿ PHD ಮಾಡಲು ಮುಂದಾಗಿದ್ದವರಿಗೆ ಶಾಕ್ ಎದುರಾಗಿದೆ.
ನೇಹಾಗೆ ಈಗಾಗಲೇ ಟಾಪ್ ಯೂನಿವರ್ಸಿಟಿಯಲ್ಲಿ ಸೀಟ್ ಸಿಕ್ಕಿದ್ದು ಸ್ಕಾಲರ್ಶಿಪ್ಗೆ ಅಪ್ಲೈ ಮಾಡಲು ಹೋದಾಗ ವಿಚಾರ ಗೊತ್ತಾಗಿದೆ. ಸದ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಯೋಜನೆ ಮರುಜಾರಿ ಮಾಡ್ತೀವೆಂದು ಭರವಸೆ ಕೊಟ್ಟಿದ್ದಾರಂತೆ. ಬಟ್ ಸ್ಕಾಲರ್ ಶಿಪ್ PHD ಮಾಡೋರಿಗೆ ಸಿಗುತ್ತಾ ಅನ್ನೋ ಗೊಂದಲವಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ