/newsfirstlive-kannada/media/post_attachments/wp-content/uploads/2025/01/STONE-PELTING-ON-TRAIN.jpg)
ಜಾನ್ಸಿಯಿಂದ ಪ್ರಯಾಗರಾಜ್ಗೆ ಹೊರಟಿದ್ದ ವಿಶೇಷ ರೈಲಿನ ಮೇಲೆ ಪ್ರಯಾಣಿಕನೊಬ್ಬ ಆಕ್ರೋಶಗೊಂಡು ಕಲ್ಲು ತೂರಾಟ ನಡೆಸಿದ್ದಾನೆ. ಈ ಒಂದು ಘಟನೆ ಹರ್ಪಲ್ಪುರ್ ರೇಲ್ವೆ ಸ್ಟೇಷನ್ನಲ್ಲಿ ನಡೆದಿದೆ. ಪ್ರಯಾಗರಾಜ್ಗೆ ಹೊರಟಿದ್ದ ರೈಲಿಗಾಗಿ ಪ್ಯಾಸೆಂಜರ್ ಪ್ಲಾಟ್ಫಾರ್ಮ್ನಲ್ಲಿ ಕಾಯುತ್ತಿದ್ದ ಈ ವೇಳೆ ಟ್ರೈನ್ ಬಂದರು ಕೂಡ ಅದರ ಬಾಗಿಲುಗಳು ಬಂದ್ ಆಗಿದ್ದವು ಇದರಿಂದ ರೊಚ್ಚಿಗೆದ್ದ ಪ್ರಯಾಣಿಕ ಕಲ್ಲಿನಿಂದ ರೈಲಿನ ಡೋರ್ಗೆ ಹೊಡೆದಿದ್ದಾನೆ. ಇದರಿಂದ ಒಳಗಿದ್ದ ಪ್ರಯಾಣಿಕರೆಲ್ಲರು ಬೆಚ್ಚಿ ಬಿದ್ದಿದ್ದಾರೆ.
ಸದ್ಯ ಈ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಯಾಣಿಕರು ಹೇಳುವ ಪ್ರಕಾರ ನಿನ್ನೆ ಜಾನ್ಸಿಯಿಂದ ಪ್ರಯಾಗರಾಜ್ನತ್ತ ವಿಶೇಷ ರೈಲು ರಾತ್ರಿ 8 ಗಂಟೆಗೆ ಹೊರಟಿತ್ತು. ಯಾವಾಗ ಹರ್ಪಲ್ಪುರ್ಕ್ಕೆ ಟ್ರೈ ನ್ ತಲುಪಿತೋ ಅಲ್ಲಿ ಕಲ್ಲು ತೂರಾಟ ನಡೆಯಿತು. ಕಲ್ಲಿನಿಂದ ಟ್ರೈನ್ ಹೊಡೆದು ರೈಲಿಗೆ ಹಾನಿ ಮಾಡಿದ. ಅವರು ಪ್ರಯಾಣಿಕರನ್ನು ಕೊಲ್ಲಲು ಪ್ರಯತ್ನ ಮಾಡಿದರು. ಒಳಗಡೆ ಮಕ್ಕಳು ಮಹಿಳೆಯರು ಇದ್ದರು. ಕಲ್ಲು ಎಸೆತ ಶುರುವಾದ ಕೂಡಲೇ ಎಲ್ಲರೂ ಕಿಟಕಿಯ ಡೋರ್ಗಳನ್ನು ಮುಚ್ಚಿಕೊಂಡರು ಎಂದು ಹೇಳಲಾಗಿದೆ.
ಇದನ್ನೂ ಓದಿ:ಮೌನಿ ಅಮವಾಸ್ಯೆ ಪ್ರಯುಕ್ತ ದಶದಿಕ್ಕುಗಳಿಂದ ಭಕ್ತರ ಆಗಮನ; ರೈಲ್ವೆ ಇಲಾಖೆಯಿಂದ ವ್ಯವಸ್ಥೆಯಾದ ಟ್ರೈನ್ಗಳ ಸಂಖ್ಯೆಯಷ್ಟು?
ಆದರೆ ವರದಿಯ ಪ್ರಕಾರ ಹರ್ಪಲ್ಪುರ್ ರೈಲ್ವೆ ಸ್ಟೇಷನ್ನಲ್ಲಿ ಪ್ರಯಾಗರಾಜ್ ರೈಲಿಗಾಗಿ ಅನೇಕ ಪ್ರಯಾಣಿಕರು ಕಾಯುತ್ತಿದ್ದರು. ಟ್ರೈನ್ ಬಂದ ವೇಳೆ ಎಲ್ಲರಿಗೂ ಒಳಗೆ ಹೋಗುವ ಅವಸರವಿತ್ತು. ಆದ್ರೆ ಟ್ರೈನ್ನ ಬಾಗಿಲುಗಳು ಲಾಕ್ ಆಗಿದ್ದ ಕಾರಣ ವ್ಯಕ್ತಿಯೊಬ್ಬ ಸಹನೆ ಕಳೆದುಕೊಂಡು ಕಲ್ಲಿನಿಂದ ಟ್ರೈನ್ನ ಬಾಗಿಲಿಗೆ ಹೊಡೆದಿದ್ದಾನೆ. ಆಗ ರೈಲಿನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡು ಕೂಗಾಟ, ಚೀರಾಟ ನಡೆಸಿದ್ದಾರೆ. ಕೂಡಲೇ ಕಿಟಕಿಯ ಬಾಗಿಲುಗಳನ್ನು ಕ್ಲೋಸ್ ಮಾಡಿಕೊಂಡಿದ್ದಾರೆ.
Vandalism and stone pelting in Maha Kumbh Special train going from Jhansi to Prayagraj. Live video surfaced. The reason for this is not known yet. pic.twitter.com/MizAwOaxJw
— amrish morajkar (@mogambokhushua)
Vandalism and stone pelting in Maha Kumbh Special train going from Jhansi to Prayagraj. Live video surfaced. The reason for this is not known yet. pic.twitter.com/MizAwOaxJw
— amrish morajkar (@mogambokhushua) January 28, 2025
">January 28, 2025
ಇನ್ನು ಹರ್ಪಲ್ಪುರ್ದ ರೈಲ್ವೆ ವಿಭಾಗದ ವಕ್ತಾರ ಹೇಳುವ ಪ್ರಕಾರ, ನಡುರಾತ್ರಿ 2 ಗಂಟೆಗೆ ರೈಲು ಹರ್ಪಲ್ಪುರ ಬಂದು ತಲುಪಿತು. ಟ್ರೈನ್ ಒಳಗೆ ಹೋಗಲೆಂದು ಪ್ರಯಾಣಿಕರು ಪ್ರಯತ್ನಿಸಿದ್ದಾರೆ. ಈ ವೇಳೆ ಟ್ರೈನ್ ಡೋರ್ಗಳು ಲಾಕ್ ಆಗಿದ್ದ ಕಾರಣ ರೊಚ್ಚಿಗೆದ್ದ ವ್ಯಕ್ತಿಯಿಂದ ಈ ಘಟನೆ ನಡೆದಿದೆ. ಕೂಡಲೇ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ಶಾಂತಗೊಳಿಸಿ ಅವರ ಪ್ರಯಾಣಕ್ಕೆ ಆಗಬೇಕಾದ ವ್ಯವಸ್ಥೆ ಮಾಡಿದ್ದಾರೆ. ಕೆಲವೊಮ್ಮೆ ಇಂತಹ ಸಮಸ್ಯೆಗಳು ಆಗುತ್ತವೆ. ದಯವಿಟ್ಟ ಪ್ರಯಾಣಿಕರು ಆದಷ್ಟು ಶಾಂತರೀತಿಯಿಂದ ಇದ್ದು ಸರಳವಾದ ಪ್ರಯಾಣ ಮಾಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ ಎಂದು ವಕ್ತಾರ ಮನೋಜ್ ಸಿಂಗ್ ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ