ಚೆನ್ನೈ ಮತ್ತು ಹೈದ್ರಾಬಾದ್ ತಂಡಗಳ ನಡುವೆ ಐಪಿಎಲ್ ಪಂದ್ಯ
ಎಸ್ಆರ್ಹೆಚ್ ವಿರುದ್ಧ ಹೀನಾಯವಾಗಿ ಸೋತ ಸಿಎಸ್ಕೆ
19ನೇ ಓವರ್ನಲ್ಲಿ ಜಡೇಜಾ, ಕಮ್ಮಿನ್ಸ್ ವಿವಾದ ಏನು..?
ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಸೋಲನ್ನು ಕಂಡಿದೆ. ಟಾಸ್ ಸೋತು ಬ್ಯಾಟ್ ಮಾಡಿದ್ದ ಸಿಎಸ್ಕೆ ನಿಗದಿತ ಓವರ್ಗಳಲ್ಲಿ 165 ರನ್ ನೀಡಿತ್ತು. ಶಿವಂ ದುಬೆ ಅವರು 24 ಬಾಲ್ನಲ್ಲಿ 45 ರನ್ ಸಿಡಿಸಿ ಚೆನ್ನೈ ಸೂಪರ್ ಕಿಂಗ್ಸ್ನ ಮಾನ ಕಾಪಾಡಿದರು. ಇನ್ನು ಅಜಿಂಕ್ಯ ರಹಾನೆ 30 ಬಾಲ್ನಲ್ಲಿ 35 ರನ್ ಬಾರಿಸಿದರು. ಇವರಿಬ್ಬರು 65 ರನ್ಗಳ ಜೊತೆಯಾಟ ಆಡಿದರು.
ಇನ್ನು ಸಿಎಸ್ಕೆ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ 23 ಬಾಲ್ನಲ್ಲಿ 31 ರನ್ಗಳಿಸಿ ನಾಟೌಟ್ ಆಗಿ ಉಳಿದರು. ವಿಚಾರ ಏನೆಂದರೆ ಪಂದ್ಯದ ವೇಳೆ ನಡೆದ ಒಂದು ಘಟನೆಯಿಂದ ಸರ್ ರವೀಂದ್ರ ಜಡೇಜಾ ಹೆಡ್ಲೈನ್ ಆಗ್ತಿದ್ದಾರೆ. ಎಸ್ಆರ್ಹೆಚ್ ತಂಡದ 19ನೇ ಓವರ್ ಅನ್ನು ಭುವಿ ಮಾಡುತ್ತಿದ್ದರು. ಭುವಿ ಎಸೆದ ಬಾಲ್ ಅನ್ನು ಜಡೇಜಾ ಲೆಗ್ಸೈಡ್ನಲ್ಲಿ ಹೊಡೆಯಲು ಪ್ರಯತ್ನಿಸಿದರು. ಆದರೆ ಅದು ಬ್ಯಾಟ್ಗೆ ಸರಿಯಾಗಿ ತಾಗದ ಕಾರಣ ಬೌಲರ್ ಭುವಿ ಕೈಗೆ ಹೋಯಿತು. ಈ ವೇಳೆ ರನ್ ಕದಿಯುವ ಆತುರದಲ್ಲಿ ಜಡೇಜಾ ಓಡಲು ಪ್ರಯತ್ನಿಸುತ್ತಾರೆ. ಆಗ ಭುವನೇಶ್ವರ್ ಕುಮಾರ್ ರನೌಟ್ ಮಾಡಲು ಸ್ಟಂಪ್ನತ್ತ ಬಾಲ್ ಎಸೆಯುತ್ತಾರೆ. ಆಗ, ಜಡೇಜಾ ವಿಕೆಟ್ ಉಳಿಸಿಕೊಳ್ಳಲು ಹಿಂದೆ ವಾಪಸ್ ಹೋಗುತ್ತಾರೆ. ಈ ವೇಳೆ ಭುವಿ ಎಸೆದ ಬಾಲ್, ಜಡೇಜಾ ಮೈಗೆ ತಾಗಿದೆ. ಪರಿಣಾಮ ಬಾಲ್ ಸ್ಟಂಪ್ಗೆ ಬಡಿಯಲಿಲ್ಲ.
Obstructing or not? 🤔
Skipper Pat Cummins opts not to appeal 👏👏#SRHvCSK #IPLonJioCinema #TATAIPL pic.twitter.com/l85UXQEa4S
— JioCinema (@JioCinema) April 5, 2024
ಈ ಮೂಲಕ ಜಡೇಜಾ ಅವರು ಫೀಲ್ಡಿಂಗ್ ಅಡ್ಡಿ ಪಡಿಸಿದ್ದಾರೆ ಅನ್ನೋದು ಕ್ರಿಕೆಟ್ ವಿಶ್ಲೇಷಕರ ವಾದ. ಇದೇ ಸಂದರ್ಭದಲ್ಲಿ ಎಸ್ಆರ್ಹೆಚ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್, ಫೀಲ್ಡಿಂಗ್ ಅಡ್ಡಿ ಪಡಿಸಿದ್ದಾರೆಂದು, ಅಂಪೈರ್ಗೆ ಮನವಿ ಮಾಡಬಹುದಿತ್ತು. ಔಟ್ ಎಂದು ಮನವಿ ಮಾಡಲು ವಿಕೆಟ್ ಕೀಪರ್ ಕ್ಲಾಸೆನ್ ಕೂಡ ಕಮ್ಮಿನ್ಸ್ಗೆ ಸಿಗ್ನಲ್ ನೀಡಿದ್ದರು. ಆದರೆ, ಕಮ್ಮಿನ್ಸ್ ಹಾಗೆ ಮಾಡಲಿಲ್ಲ. ಕಮ್ಮಿನ್ಸ್ ಅವರು ಅಪೀಲ್ ಮಾಡದಿರೋದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಒಂದು ವೇಳೆ ಎಸ್ಆರ್ಹೆಚ್ ತಂಡದ ನಾಯಕ ಅಪೀಲ್ ಮಾಡಿದ್ದರೆ ಮೂರನೇ ಅಂಪೈರ್ ಪರಿಶೀಲಿಸಿ ತೀರ್ಪು ನೀಡುತ್ತಿದ್ದರು. ನಿಯಮದ ಪ್ರಕಾರ, ಫೀಲ್ಡಿಂಗ್ ಮಾಡುವ ಬ್ಯಾಟರ್ ಅಡ್ಡಿ ಪಡಿಸಿದರೆ ಔಟ್ ಎಂದು ತೀರ್ಪು ನೀಡಲಾಗುತ್ತದೆ. ಸಿಎಸ್ಕೆ ನೀಡಿದ 165 ರನ್ಗಳ ಗುರಿಯನ್ನು ಹೈದ್ರಾಬಾದ್ 4 ವಿಕೆಟ್ ಕಳೆದುಕೊಂಡು 18.1ನೇ ಓವರ್ನಲ್ಲಿ ಮುಟ್ಟಿತು. ಈ ಮೂಲಕ ಸಿಎಸ್ಕೆ ಎರಡು ಸತತ ಸೋಲುಗಳನ್ನ ಅನುಭವಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಚೆನ್ನೈ ಮತ್ತು ಹೈದ್ರಾಬಾದ್ ತಂಡಗಳ ನಡುವೆ ಐಪಿಎಲ್ ಪಂದ್ಯ
ಎಸ್ಆರ್ಹೆಚ್ ವಿರುದ್ಧ ಹೀನಾಯವಾಗಿ ಸೋತ ಸಿಎಸ್ಕೆ
19ನೇ ಓವರ್ನಲ್ಲಿ ಜಡೇಜಾ, ಕಮ್ಮಿನ್ಸ್ ವಿವಾದ ಏನು..?
ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಸೋಲನ್ನು ಕಂಡಿದೆ. ಟಾಸ್ ಸೋತು ಬ್ಯಾಟ್ ಮಾಡಿದ್ದ ಸಿಎಸ್ಕೆ ನಿಗದಿತ ಓವರ್ಗಳಲ್ಲಿ 165 ರನ್ ನೀಡಿತ್ತು. ಶಿವಂ ದುಬೆ ಅವರು 24 ಬಾಲ್ನಲ್ಲಿ 45 ರನ್ ಸಿಡಿಸಿ ಚೆನ್ನೈ ಸೂಪರ್ ಕಿಂಗ್ಸ್ನ ಮಾನ ಕಾಪಾಡಿದರು. ಇನ್ನು ಅಜಿಂಕ್ಯ ರಹಾನೆ 30 ಬಾಲ್ನಲ್ಲಿ 35 ರನ್ ಬಾರಿಸಿದರು. ಇವರಿಬ್ಬರು 65 ರನ್ಗಳ ಜೊತೆಯಾಟ ಆಡಿದರು.
ಇನ್ನು ಸಿಎಸ್ಕೆ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ 23 ಬಾಲ್ನಲ್ಲಿ 31 ರನ್ಗಳಿಸಿ ನಾಟೌಟ್ ಆಗಿ ಉಳಿದರು. ವಿಚಾರ ಏನೆಂದರೆ ಪಂದ್ಯದ ವೇಳೆ ನಡೆದ ಒಂದು ಘಟನೆಯಿಂದ ಸರ್ ರವೀಂದ್ರ ಜಡೇಜಾ ಹೆಡ್ಲೈನ್ ಆಗ್ತಿದ್ದಾರೆ. ಎಸ್ಆರ್ಹೆಚ್ ತಂಡದ 19ನೇ ಓವರ್ ಅನ್ನು ಭುವಿ ಮಾಡುತ್ತಿದ್ದರು. ಭುವಿ ಎಸೆದ ಬಾಲ್ ಅನ್ನು ಜಡೇಜಾ ಲೆಗ್ಸೈಡ್ನಲ್ಲಿ ಹೊಡೆಯಲು ಪ್ರಯತ್ನಿಸಿದರು. ಆದರೆ ಅದು ಬ್ಯಾಟ್ಗೆ ಸರಿಯಾಗಿ ತಾಗದ ಕಾರಣ ಬೌಲರ್ ಭುವಿ ಕೈಗೆ ಹೋಯಿತು. ಈ ವೇಳೆ ರನ್ ಕದಿಯುವ ಆತುರದಲ್ಲಿ ಜಡೇಜಾ ಓಡಲು ಪ್ರಯತ್ನಿಸುತ್ತಾರೆ. ಆಗ ಭುವನೇಶ್ವರ್ ಕುಮಾರ್ ರನೌಟ್ ಮಾಡಲು ಸ್ಟಂಪ್ನತ್ತ ಬಾಲ್ ಎಸೆಯುತ್ತಾರೆ. ಆಗ, ಜಡೇಜಾ ವಿಕೆಟ್ ಉಳಿಸಿಕೊಳ್ಳಲು ಹಿಂದೆ ವಾಪಸ್ ಹೋಗುತ್ತಾರೆ. ಈ ವೇಳೆ ಭುವಿ ಎಸೆದ ಬಾಲ್, ಜಡೇಜಾ ಮೈಗೆ ತಾಗಿದೆ. ಪರಿಣಾಮ ಬಾಲ್ ಸ್ಟಂಪ್ಗೆ ಬಡಿಯಲಿಲ್ಲ.
Obstructing or not? 🤔
Skipper Pat Cummins opts not to appeal 👏👏#SRHvCSK #IPLonJioCinema #TATAIPL pic.twitter.com/l85UXQEa4S
— JioCinema (@JioCinema) April 5, 2024
ಈ ಮೂಲಕ ಜಡೇಜಾ ಅವರು ಫೀಲ್ಡಿಂಗ್ ಅಡ್ಡಿ ಪಡಿಸಿದ್ದಾರೆ ಅನ್ನೋದು ಕ್ರಿಕೆಟ್ ವಿಶ್ಲೇಷಕರ ವಾದ. ಇದೇ ಸಂದರ್ಭದಲ್ಲಿ ಎಸ್ಆರ್ಹೆಚ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್, ಫೀಲ್ಡಿಂಗ್ ಅಡ್ಡಿ ಪಡಿಸಿದ್ದಾರೆಂದು, ಅಂಪೈರ್ಗೆ ಮನವಿ ಮಾಡಬಹುದಿತ್ತು. ಔಟ್ ಎಂದು ಮನವಿ ಮಾಡಲು ವಿಕೆಟ್ ಕೀಪರ್ ಕ್ಲಾಸೆನ್ ಕೂಡ ಕಮ್ಮಿನ್ಸ್ಗೆ ಸಿಗ್ನಲ್ ನೀಡಿದ್ದರು. ಆದರೆ, ಕಮ್ಮಿನ್ಸ್ ಹಾಗೆ ಮಾಡಲಿಲ್ಲ. ಕಮ್ಮಿನ್ಸ್ ಅವರು ಅಪೀಲ್ ಮಾಡದಿರೋದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಒಂದು ವೇಳೆ ಎಸ್ಆರ್ಹೆಚ್ ತಂಡದ ನಾಯಕ ಅಪೀಲ್ ಮಾಡಿದ್ದರೆ ಮೂರನೇ ಅಂಪೈರ್ ಪರಿಶೀಲಿಸಿ ತೀರ್ಪು ನೀಡುತ್ತಿದ್ದರು. ನಿಯಮದ ಪ್ರಕಾರ, ಫೀಲ್ಡಿಂಗ್ ಮಾಡುವ ಬ್ಯಾಟರ್ ಅಡ್ಡಿ ಪಡಿಸಿದರೆ ಔಟ್ ಎಂದು ತೀರ್ಪು ನೀಡಲಾಗುತ್ತದೆ. ಸಿಎಸ್ಕೆ ನೀಡಿದ 165 ರನ್ಗಳ ಗುರಿಯನ್ನು ಹೈದ್ರಾಬಾದ್ 4 ವಿಕೆಟ್ ಕಳೆದುಕೊಂಡು 18.1ನೇ ಓವರ್ನಲ್ಲಿ ಮುಟ್ಟಿತು. ಈ ಮೂಲಕ ಸಿಎಸ್ಕೆ ಎರಡು ಸತತ ಸೋಲುಗಳನ್ನ ಅನುಭವಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್