ಹೈಕೋರ್ಟ್​ ಮಾಡಿದ ತಪ್ಪನ್ನ ನಾವು ಮಾಡಲ್ಲ, ಎಲ್ಲಾ ಸಮಸ್ಯೆಗೂ ಪವಿತ್ರಗೌಡ ಕಾರಣ -ಸುಪ್ರೀಂ ಕೋರ್ಟ್

author-image
Ganesh
Updated On
ಹೈಕೋರ್ಟ್​ ಮಾಡಿದ ತಪ್ಪನ್ನ ನಾವು ಮಾಡಲ್ಲ, ಎಲ್ಲಾ ಸಮಸ್ಯೆಗೂ ಪವಿತ್ರಗೌಡ ಕಾರಣ -ಸುಪ್ರೀಂ ಕೋರ್ಟ್
Advertisment
  • ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಗೌಡಗೆ ಸಂಕಷ್ಟ
  • ​ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ
  • ಅರ್ಜಿ ವಿಚಾರಣೆಯ ತೀರ್ಪು ಮುಂದಿನ ವಾರ ಪ್ರಕಟ

ರೇಣುಕಾಸ್ವಾಮಿ ಪ್ರಕರಣದ ಮೊದಲ ಆರೋಪಿ ಪವಿತ್ರಗೌಡಗೆ ಮತ್ತೆ ಸಂಕಷ್ಟ ಎದುರಾಗುವ ಲಕ್ಷಣಗಳು ಕಾಣ್ತಿವೆ. ಕರ್ನಾಟಕ ಹೈಕೋರ್ಟ್​​ ಆರೋಪಿಗಳಿಗೆ ನೀಡಿರುವ ಜಾಮೀನು ರದ್ದು ಮಾಡುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಇಂದು ವಾದ-ಪ್ರತಿವಾದ ಆಲಿಸಿರುವ ಸುಪ್ರೀಂ, ತೀರ್ಪನ್ನು ಮುಂದಿನ ವಾರ ಪ್ರಕಟಿಸೋದಾಗಿ ತಿಳಿಸಿದೆ.

ವಿಶೇಷ ಅಂದ್ರೆ ಸುಪ್ರೀಂ ಕೋರ್ಟ್​ ಪವಿತ್ರಗೌಡಗೆ ಸಂಬಂಧಿಸಿ ಕೆಲವು ಪ್ರಶ್ನೆಗಳನ್ನು ಮಾಡಿದೆ. ಪವಿತ್ರಾ ಗೌಡ ಅವರಿಂದಲೇ ಎಲ್ಲವೂ ಆಗಿದೆ. ಎಲ್ಲಾ ಸಮಸ್ಯೆಗೆ ಪವಿತ್ರಾ ಗೌಡನೇ ಕಾರಣ. ಹೈಕೋರ್ಟ್ ಮಾಡಿದ ತಪ್ಪನ್ನು ನಾವು ಮಾಡಲ್ಲ ಎಂದು ಸುಪ್ರೀಂ ಕೋರ್ಟ್​ ಸೂಕ್ಷ್ಮವಾಗಿ ಹೇಳಿದೆ.

ಇದನ್ನೂ ಓದಿ: ಮ್ಯಾಂಚೆಸ್ಟರ್​ ಟೆಸ್ಟ್​ನ ಮೊದಲ ದಿನವೇ ಆಘಾತ.. ರಿಷಬ್ ಪಂತ್​​ಗೆ ಅಸಲಿಗೆ ಆಗಿದ್ದೇನು..?

ಪವಿತ್ರಾ ಗೌಡ ದರ್ಶನ್​ಗೆ 50 ಬಾರಿ ಕಾಲ್ ಮಾಡಿದ್ದು ಏಕೆ? ಪವಿತ್ರಾಗೌಡಗೆ ಮೊದಲ ಮದುವೆ ಡಿವೋರ್ಸ್ ಆಗಿದೆಯಾ? ಪವಿತ್ರಾಗೌಡ ಏನು ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ. ಆಗ ಪವಿತ್ರಾಗೌಡ ಪರ ವಕೀಲರು ವಾದ ಮಂಡಿಸಿ.. ಪವಿತ್ರಾಗೌಡ ಕಲಾವಿದೆ ಎಂದಿದ್ದಾರೆ. ಸದ್ಯ ವಾದ ಪ್ರತಿವಾದ ಆಲಿಸಿರುವ ಸುಪ್ರೀಂ ಕೋರ್ಟ್​ ಮುಂದಿನ ವಾರ ತೀರ್ಪು ಪ್ರಕಟಿಸೋದಾಗಿ ಹೇಳಿದೆ. ಹೀಗಾಗಿ ಮುಂದಿನ ವಾರ ಪ್ರಕರಣದ 7 ಆರೋಪಿಗಳ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.

ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment