ಆರೋಪಿಯಾಗಿ ದರ್ಶನ್ನನ್ನು ಕಂಡಾಗ ನನಗೆ ದುಃಖ ಆಯ್ತು
ಒಬ್ಬ ನಟನಿಗೆ ಈ ಸ್ಥಿತಿ ಬರಬಾರದಾಗಿತ್ತು ಎಂದ ಅಡ್ಡಂಡ ಕಾರ್ಯಪ್ಪ
ಮೈಸೂರಿಗೂ ಕೆಟ್ಟ ಹೆಸರು ಬಂತು ಎಂದ ರಂಗಾಯಣದ ಮಾಜಿ ನಿರ್ದೇಶಕ
ಕೊಲೆ ಆರೋಪಿಯಾಗಿ ದರ್ಶನ್ನನ್ನು ಕಂಡಾಗ ನನಗೆ ತುಂಬ ದುಃಖ ಆಯ್ತು. ಒಬ್ಬ ನಟನಿಗೆ ಈ ಸ್ಥಿತಿ ಬರಬಾರದಾಗಿತ್ತು ಎಂದು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬೇಸರ ಹೊರಹಾಕಿದ್ದಾರೆ.
ನಟ ದರ್ಶನ್ಗೆ ಮೊಟ್ಟಮೊದಲು ಬಣ್ಣ ಹಚ್ಚಿದ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರು ನ್ಯೂಸ್ಫಸ್ಟ್ ಜೊತೆಗೆ ಮಾತನಾಡಿದ್ದು, ಶಿಷ್ಯನನ್ನು ಆರೋಪಿ ಸ್ಥಾನದಲ್ಲಿ ಕಂಡು ಬೇಸರ ಹೊರಹಾಕಿದ್ದಾರೆ. ಒಬ್ಬ ನಟ ಜೈಲಿಗೆ ಹೋಗಬಹುದು. ಆದರೆ ಕೊಲೆ ಆರೋಪ ಹೊತ್ತು ಜೈಲಿಗೆ ಹೋಗಿರೋದು ಬಹಳ ದುಃಖ ಆಗಿದೆ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ದರ್ಶನ್ ಮೈಸೂರಿನಲ್ಲಿ ಹುಟ್ಟಿ ಬೆಳದವರು. ಮೈಸೂರು ಒಂದು ಸಾಂಸ್ಕೃತಿಕ ನಗರ. ಮೈಸೂರಿಗೂ ಕೆಟ್ಟ ಹೆಸರು ಬಂತು. ಅವನಿಗೆ ಶನಿಯಾಗಿ ಬಂದಿದ್ದೇ ಪವಿತ್ರಾ ಗೌಡ. ಆಕೆ ದರ್ಶನ್ ಬದುಕಿಗೆ ಶನಿಯಾಗಿ ಬಂದಳು. ಅವಳು ಮದುವೆಯಾಗಿ, ಅವಳಿಗೊಂದು ಮಗು ಇದೆ. ಡಿವೋರ್ಸ್ ಆಗಿ ಅವಳ ಬದುಕನ್ನು ನೋಡಿಕೊಂಡು ಬಂದಳು. ಅವಳು ಗಂಡನನ್ನು ಬಿಟ್ಟು ಬಂದಳು. ಗಂಡನು ಬಿಟ್ಟ. ದರ್ಶನ್ಗೂ ಒಂದು ಹೆಂಡತಿ ಇದ್ದಾಳಲ್ಲ. ಸ್ಫುರದ್ರೂಪಿ ಮಗ ಇದ್ದಾನಲ್ಲ. ಇದು ಖಾಸಗಿ ಲೈಫ್ ಅಂತಾ ಹೇಳ್ತಾರೆ. ಒಬ್ಬ ನಟ ಎಷ್ಟು ಬೇಕಾದ್ರು ಇಟ್ಟುಕೊಳ್ಳಬಹುದಾ? ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿಯದ್ದೂ ಕೂಡ ಮಿತಿಮೀರಿದ ವಾಂಛೆ. ಅದು ಕೊಲೆಯಲ್ಲಿ ಅವಸನವಾಯ್ತು ಎಂದು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆರೋಪಿಯಾಗಿ ದರ್ಶನ್ನನ್ನು ಕಂಡಾಗ ನನಗೆ ದುಃಖ ಆಯ್ತು
ಒಬ್ಬ ನಟನಿಗೆ ಈ ಸ್ಥಿತಿ ಬರಬಾರದಾಗಿತ್ತು ಎಂದ ಅಡ್ಡಂಡ ಕಾರ್ಯಪ್ಪ
ಮೈಸೂರಿಗೂ ಕೆಟ್ಟ ಹೆಸರು ಬಂತು ಎಂದ ರಂಗಾಯಣದ ಮಾಜಿ ನಿರ್ದೇಶಕ
ಕೊಲೆ ಆರೋಪಿಯಾಗಿ ದರ್ಶನ್ನನ್ನು ಕಂಡಾಗ ನನಗೆ ತುಂಬ ದುಃಖ ಆಯ್ತು. ಒಬ್ಬ ನಟನಿಗೆ ಈ ಸ್ಥಿತಿ ಬರಬಾರದಾಗಿತ್ತು ಎಂದು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬೇಸರ ಹೊರಹಾಕಿದ್ದಾರೆ.
ನಟ ದರ್ಶನ್ಗೆ ಮೊಟ್ಟಮೊದಲು ಬಣ್ಣ ಹಚ್ಚಿದ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರು ನ್ಯೂಸ್ಫಸ್ಟ್ ಜೊತೆಗೆ ಮಾತನಾಡಿದ್ದು, ಶಿಷ್ಯನನ್ನು ಆರೋಪಿ ಸ್ಥಾನದಲ್ಲಿ ಕಂಡು ಬೇಸರ ಹೊರಹಾಕಿದ್ದಾರೆ. ಒಬ್ಬ ನಟ ಜೈಲಿಗೆ ಹೋಗಬಹುದು. ಆದರೆ ಕೊಲೆ ಆರೋಪ ಹೊತ್ತು ಜೈಲಿಗೆ ಹೋಗಿರೋದು ಬಹಳ ದುಃಖ ಆಗಿದೆ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ದರ್ಶನ್ ಮೈಸೂರಿನಲ್ಲಿ ಹುಟ್ಟಿ ಬೆಳದವರು. ಮೈಸೂರು ಒಂದು ಸಾಂಸ್ಕೃತಿಕ ನಗರ. ಮೈಸೂರಿಗೂ ಕೆಟ್ಟ ಹೆಸರು ಬಂತು. ಅವನಿಗೆ ಶನಿಯಾಗಿ ಬಂದಿದ್ದೇ ಪವಿತ್ರಾ ಗೌಡ. ಆಕೆ ದರ್ಶನ್ ಬದುಕಿಗೆ ಶನಿಯಾಗಿ ಬಂದಳು. ಅವಳು ಮದುವೆಯಾಗಿ, ಅವಳಿಗೊಂದು ಮಗು ಇದೆ. ಡಿವೋರ್ಸ್ ಆಗಿ ಅವಳ ಬದುಕನ್ನು ನೋಡಿಕೊಂಡು ಬಂದಳು. ಅವಳು ಗಂಡನನ್ನು ಬಿಟ್ಟು ಬಂದಳು. ಗಂಡನು ಬಿಟ್ಟ. ದರ್ಶನ್ಗೂ ಒಂದು ಹೆಂಡತಿ ಇದ್ದಾಳಲ್ಲ. ಸ್ಫುರದ್ರೂಪಿ ಮಗ ಇದ್ದಾನಲ್ಲ. ಇದು ಖಾಸಗಿ ಲೈಫ್ ಅಂತಾ ಹೇಳ್ತಾರೆ. ಒಬ್ಬ ನಟ ಎಷ್ಟು ಬೇಕಾದ್ರು ಇಟ್ಟುಕೊಳ್ಳಬಹುದಾ? ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿಯದ್ದೂ ಕೂಡ ಮಿತಿಮೀರಿದ ವಾಂಛೆ. ಅದು ಕೊಲೆಯಲ್ಲಿ ಅವಸನವಾಯ್ತು ಎಂದು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ