ಪವನ್ ಕಲ್ಯಾಣ್ ಕಿರಿಯ ಮಗನಿಗೆ ಗಾಯ.. ಸಿಂಗಪೂರ್​ಗೆ ಆಂಧ್ರ ಡಿಸಿಎಂ ದಿಢೀರ್​ ಪ್ರಯಾಣ

author-image
Veena Gangani
Updated On
ಪವನ್ ಕಲ್ಯಾಣ್ ಕಿರಿಯ ಮಗನಿಗೆ ಗಾಯ.. ಸಿಂಗಪೂರ್​ಗೆ ಆಂಧ್ರ ಡಿಸಿಎಂ ದಿಢೀರ್​ ಪ್ರಯಾಣ
Advertisment
  • ಸಿಂಗಪೂರ್​ನ ಶಾಲೆಯಲ್ಲಿ ಓದುತ್ತಿರುವ ಮಾರ್ಕ್ ಶಂಕರ್
  • ಸಿಂಗಪೂರ್​ನ ಆಸ್ಪತ್ರೆಯಲ್ಲೇ ಮಾರ್ಕ್ ಶಂಕರ್​ಗೆ ಚಿಕಿತ್ಸೆ
  • ಕಾರ್ಯಕ್ರಮ ಮುಗಿಸಿ ಸಿಂಗಪೂರ್​ಗೆ ಪವನ್ ಪ್ರಯಾಣ

ಹೈದರಾಬಾದ್: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರನಿಗೆ ಗಾಯಗಳಾಗಿವೆ. ಸಿಂಗಾಪುರದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಪವನ್ ಕಲ್ಯಾಣ್ ಅವರ ಮಗ ಮಾರ್ಕ್ ಶಂಕರ್ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಸೀರಿಯಲ್​ ಮುಗಿಯುತ್ತಿದ್ದಂತೆ ಸಖತ್​ ಬ್ಯುಸಿಯಾದ ಲಕ್ಷ್ಮೀ; ನಟಿ ಭೂಮಿಕಾ ರಮೇಶ್ ನೆಕ್ಸ್ಟ್ ಪ್ಲಾನ್​ ಏನು?

publive-image

ವರದಿಗಳ ಪ್ರಕಾರ, ಮಾರ್ಕ್ ಶಂಕರ್ ಓದುತ್ತಿದ್ದ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಂಕರ್ ಅವರ ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಶ್ವಾಸಕೋಶಕ್ಕೆ ಹೊಗೆ ನುಗ್ಗಿದ್ದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರಂತೆ. ಪ್ರಸ್ತುತವಾಗಿ ಸಿಂಗಾಪುರದ ಆಸ್ಪತ್ರೆಯಲ್ಲಿ ಪವನ್ ಕಲ್ಯಾಣ್ ಅವರ ಮಗ ಮಾರ್ಕ್ ಶಂಕರ್ ಚಿಕಿತ್ಸೆ ನೀಡಲಾಗುತ್ತಿದೆಯಂತೆ.

publive-image

ಸದ್ಯ ಡಿಸಿಎಂ ಪವನ್ ಕಲ್ಯಾಣ್ ಅವರು ವಿಶಾಖಪಟ್ಟಣಂನಲ್ಲಿ ಇದ್ದಾರೆ. ಕಾರ್ಯಕ್ರಮವನ್ನ ಮುಗಿಸಿ ಸಿಂಗಪೂರ್​ಗೆ ಪ್ರಯಾಣ ಬೆಳಸಲಿದ್ದಾರಂತೆ. ಮಾರ್ಕ್ ಶಂಕರ್ ಆನಾ ಲೆನೆವಾ ಮತ್ತು ಪವನ್ ಕಲ್ಯಾಣ್ ದಂಪತಿ ಪುತ್ರನಾಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment