/newsfirstlive-kannada/media/post_attachments/wp-content/uploads/2025/05/RCB-CAPTAIN.jpg)
ಪಂಜಾಬ್ನ ಚಂಡೀಗಢದ ಮುಲ್ಲನ್ಪುರ ಸ್ಟೇಡಿಯಂನಲ್ಲಿ ಇವತ್ತು ಮೊದಲ ಕ್ವಾಲಿಫೈಯರ್ ಮ್ಯಾಚ್ ನಡೆಯಲಿದೆ. ಪಂಜಾಬ್ ಕಿಂಗ್ಸ್ ಮತ್ತು ಆರ್ಸಿಬಿ ನಡುವಿನ ಸೆಣಸಾಟದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶ ಮಾಡಲಿದೆ.
ಸೋತ ತಂಡಕ್ಕೆ ಇನ್ನೊಂದು ಅವಕಾಶ ಸಿಗಲಿದೆ. ಆರ್ಸಿಬಿ ಫೈನಲ್ಗೆ ಹೋಗಬೇಕು ಅಂದರೆ ಇಂದು ಗೆಲ್ಲಲೇಬೇಕು. ಸದ್ಯ ಆರ್ಸಿಬಿ ಅಭಿಮಾನಿಗಳು ಸಣ್ಣ ಗೊಂದಲದಲ್ಲಿ ಇದ್ದಾರೆ. ಇಂದಿನ ಪಂದ್ಯದಲ್ಲಿ ಕ್ಯಾಪ್ಟನ್ ಯಾರು ಅನ್ನೋದು.
ಇದನ್ನೂ ಓದಿ: RCB ಗೆಲುವಿನ ಹಿಂದೆ 6 ಸೂತ್ರಗಳು ಕೆಲಸ.. ಇಂದಿನ ಹೋರಾಟದ ಸ್ಟ್ರೆಂಥ್ ಕೂಡ ಅದೇ..!
ಬೆರಳಿಗೆ ಗಾಯ ಹಿನ್ನೆಲೆಯಲ್ಲಿ ಕ್ಯಾಪ್ಟನ್ ರಜತ್ ಪಾಟೀದಾರ್ ಕಳೆದ ಎರಡು ಪಂದ್ಯಗಳನ್ನು ಲೀಡ್ ಮಾಡಲಿಲ್ಲ. ಪಾಟೀದಾರ್ ಬದಲಿಗೆ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಎರಡು ಮ್ಯಾಚ್ಗಳನ್ನ ಮುನ್ನಡೆಸಿದ್ದರು. ಸನ್ ರೈಸರ್ಸ್ ಹೈದರಾಬಾದ್ ಹಾಗೂ ಎಲ್ಎಸ್ಜಿ ವಿರುದ್ಧದ ಪಂದ್ಯಕ್ಕೆ ಜಿತೇಶ್ ಶರ್ಮಾ ಕ್ಯಾಪ್ಟನ್ ಆಗಿದ್ದರು. ಜಿತೇಶ್ ನಾಯಕತ್ವದಲ್ಲಿ ಎಲ್ಎಸ್ಜಿ ವಿರುದ್ಧ ಗೆದ್ದು, ಹೈದರಾಬಾದ್ ವಿರುದ್ಧ ಸೋಲನ್ನು ಕಂಡಿದೆ.
ರಜತ್ ಪಾಟೀದಾರ್ ಫಿಟ್ನೆಸ್ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಹೀಗಾಗಿ ಇವತ್ತು ಆರ್ಸಿಬಿಗೆ ಯಾರು ನಾಯಕರಾಗಿರುತ್ತಾರೆ ಎಂಬ ಪ್ರಶ್ನೆ ಇದೆ. ಕೆಲವು ವರದಿಗಳ ಪ್ರಕಾರ, ರಜತ್ ಪಾಟೀದಾರ್, ತಂಡವನ್ನು ಮುನ್ನಡೆಸಲು ಮೈದಾನಕ್ಕೆ ಇಳಿಯುತ್ತಿದ್ದಾರೆ ಎಂದು ಹೇಳಲಾಗಿದೆ. ಈ ವಿಚಾರವನ್ನು ಆರ್ಸಿಬಿ ಮ್ಯಾನೇಜ್ಮೆಂಟ್ ಸಸ್ಪೆನ್ಸ್ ಆಗಿಟ್ಟಿರುವ ಹಿನ್ನೆಲೆಯಲ್ಲಿ ಸಂಜೆವರೆಗೆ ಕಾದು ನೋಡಬೇಕಿದೆ.
ಇದನ್ನೂ ಓದಿ: ಆರ್ಸಿಬಿಗೆ ಐದು ವೀಕ್ನೆಸ್.. ಕೊಂಚ ಯಾಮಾರಿದ್ರೂ ಗೆಲುವು ಕಷ್ಟ, ಇರಲಿ ಎಚ್ಚರಿಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ