/newsfirstlive-kannada/media/post_attachments/wp-content/uploads/2024/07/MYS_SALA.jpg)
ಮೈಸೂರು: ಸಾಲಗಾರರ ಕಾಟ ತಡೆಯಲಾರದೇ ವ್ಯಕ್ತಿಯೊಬ್ಬರು ಹೆದರಿ ಡೆತ್​ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ಹುಣಸೂರು ತಾಲೂಕಿನ ಕುಟ್ಟುವಾಡಿ ಗ್ರಾಮದಲ್ಲಿ ನಡೆದಿದೆ.
ಕುಟ್ಟುವಾಡಿ ಗ್ರಾಮದ ಆಟೋ ಡ್ರೈವರ್ ಪ್ರಸಾದ್ (37) ನಾಪತ್ತೆಯಾಗಿರುವ ವ್ಯಕ್ತಿ. ಇವರು ಜೀವನಕ್ಕಾಗಿ ಆಟೋ ಓಡಿಸಿಕೊಂಡು ಇದ್ದರು. ಇದೇ ವೇಳೆ ಅವಶ್ಯಕತೆಗಾಗಿ ಕೆಲವರಿಂದ ಸಾಲದ ರೂಪದಲ್ಲಿ ಹಣ ಪಡೆದುಕೊಂಡಿದ್ದನು. ಬಳಿಕ ಪಡೆದ ಸಾಲವನ್ನು ಹಿಂತಿರುಗಿಸದ ಹಿನ್ನೆಲೆಯಲ್ಲಿ ಸಾಲ ಕೊಟ್ಟವರು ಹಣ ಕೊಡುವಂತೆ ಕೇಳಲು ಪ್ರಾರಂಭಿಸಿದ್ದಾರೆ.
ಇದರಿಂದ ಹೆದರಿದ ವ್ಯಕ್ತಿ ಡೆತ್​ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಸದ್ಯ ಇವರು ಎಲ್ಲಿದ್ದರೋ, ಬದುಕಿದ್ದರೋ, ಸಾವನ್ನಪ್ಪಿದ್ದಾರೋ ಎಂಬುದು ಗೊತ್ತಿಲ್ಲ. ಆದರೆ ಡೆತ್​ನೋಟ್​​ನಲ್ಲಿ ನನ್ನ ಸಾವಿಗೆ ಫೈನಾನ್ಸ್ ಮಧು, ಟೆಂಪೋ ಕಿರಣ್ ಎನ್ನುವರು ಕಾರಣ ಎಂದು ಉಲ್ಲೇಖ ಮಾಡಿದ್ದಾನೆ. ಸದ್ಯ ವ್ಯಕ್ತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಪ್ರಸಾದ್ ಪತ್ತೆಗಾಗಿ ಬಿಳಿಕೆರೆ ಪೊಲೀಸರು ಶೋಧ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ