ಜಸ್ಟ್‌ ಮಿಸ್.. ಚಿತೆ ಮೇಲಿಟ್ಟು ಅಗ್ನಿಸ್ಪರ್ಶ ಮಾಡುವಾಗ ಎದ್ದು ಕುಳಿತ ವ್ಯಕ್ತಿ; ಇದು ಪವಾಡ ಅಲ್ಲವೇ ಅಲ್ಲ!

author-image
Veena Gangani
Updated On
ಜಸ್ಟ್‌ ಮಿಸ್.. ಚಿತೆ ಮೇಲಿಟ್ಟು ಅಗ್ನಿಸ್ಪರ್ಶ ಮಾಡುವಾಗ ಎದ್ದು ಕುಳಿತ ವ್ಯಕ್ತಿ; ಇದು ಪವಾಡ ಅಲ್ಲವೇ ಅಲ್ಲ!
Advertisment
  • ಚಿತೆಯ ಮೇಲಿಟ್ಟು ಅಗ್ನಿಸ್ಪರ್ಶ ಮಾಡುವ ಮುನ್ನ ಎದ್ದು ಕುಳಿತ ವ್ಯಕ್ತಿ
  • ಆಸ್ಪತ್ರೆಯಲ್ಲಿ ರೋಗಿಯನ್ನು ಪರೀಕ್ಷಿಸಿದ ವೈದ್ಯರು ಹೇಳಿದ್ದೇನು ಗೊತ್ತಾ?
  • ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆಗಾಗಿ ಆದೇಶಿಸಿದ ರಾಮವತಾರ್ ಮೀನಾ

ರಾಜಸ್ಥಾನದ ಜುನ್ ಜುನ್​ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಆಸ್ಪತ್ರೆಯಲ್ಲಿ ವೈದ್ಯರು ರೋಗಿಯನ್ನು ಪರೀಕ್ಷಿಸಿ ಸಾವನ್ನಪ್ಪಿದ್ದಾನೆ ಎಂದು ಅಧಿಕೃತವಾಗಿ ಹೇಳಿದ್ದಾರೆ. ಹೀಗಾಗಿ ಆತನ ಶವವನ್ನು ಚಿತೆಯ ಮೇಲಿಟ್ಟು ಅಗ್ನಿಸ್ಪರ್ಶ ಮಾಡುವಾಗ ಏಕಾಏಕಿ ಎದ್ದು ಕುಳಿತು ಎಲ್ಲರಿಗೂ ಶಾಕ್​ ಕೊಟ್ಟಿದ್ದಾನೆ.

ಇದನ್ನೂ ಓದಿ: ಮೆಗಾ ಹರಾಜಿನಲ್ಲಿ ಟೇಲರ್​ ಮಗ.. ದೊಡ್ಡ ಅದೃಷ್ಟದ ನಿರೀಕ್ಷೆಯಲ್ಲಿ ಯುವ ಪ್ರತಿಭೆ

ಹೌದು, ಜುನ್ ಜುನ್ ಜಿಲ್ಲೆಯ 45 ವರ್ಷದ ರೋಹಿತಾಸ್ ಮೂಗ ಹಾಗೂ ಕಿವುಡನಾಗಿದ್ದ. ಒಂದು ದಿನ ರೋಹಿತಾಸ್​ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಬಿ.ಡಿ.ಕೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರೋಹಿತಾಸ್​ನನ್ನು ಪರೀಕ್ಷಿಸಿದ ವೈದ್ಯರು ಈತ ಚಿಕಿತ್ಸೆ ಫಲಿಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಬಳಿಕ ಎರಡೂವರೆ ಗಂಟೆ ಕಾಲ ಶವವನ್ನು ಆಸ್ಪತ್ರೆಯ ಫ್ರೀಜರ್​ನಲ್ಲಿ ಇಡಲಾಗಿತ್ತು. ನಂತರ ಆತನ ಶವವನ್ನು ಮಾ ಸೇವಾ ಸಂಸ್ಥಾನದ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.

publive-image

ಅಲ್ಲದೇ ಪಂಚದೇವ ದೇವಾಲಯದ ಬಳಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಹೀಗಾಗಿ ಆತನ ಶವ ತೆಗೆದುಕೊಂಡು ಚಿತೆಯ ಮೇಲೆ ಇಡಲಾಗಿತ್ತು. ಚಿತೆಯ ಮೇಲೆದ್ದ ಆತನ ಎದೆಯ ಏರಿಳಿತವನ್ನು ಜನರು ಗಮನಿಸಿದ್ದಾರೆ. ಇದರಿಂದಲೇ ರೋಹಿತಾಸ್ ಉಸಿರಾಡುತ್ತಿದ್ದಾನೆ ಎಂದು ಖಚಿತಪಡಿಸಿಕೊಂಡಿದ್ದಾರೆ. ಆ ಕೂಡಲೇ ಆತನನ್ನು ಬಿ.ಡಿ.ಕೆ. ಆಸ್ಪತ್ರೆಗೆ ರೋಹಿತಾಸ್ ಶಿಫ್ಟ್​ ಮಾಡಿದ್ದಾರೆ. ಇದಾದ ಬಳಿಕ ರೋಹಿತಾಸ್ ಪರೀಕ್ಷಿಸಿದ ವೈದ್ಯರು ಇನ್ನೂ ಈತ ಸತ್ತಿಲ್ಲ ಅಂತ ತಿಳಿಸಿದ್ದಾರೆ. ಐಸಿಯುಗೆ ದಾಖಲಿಸಿ ರೋಹಿತಾಸ್​ಗೆ ಹೆಚ್ಚಿನ ಚಿಕಿತ್ಸೆ ನೀಡಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನೆಯ ಬಗ್ಗೆ ರಾಮವತಾರ್ ಮೀನಾ ಅವರು ತನಿಖೆಗೆ ಆದೇಶಿಸಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯಿಂದಲೂ ತನಿಖೆ ಮುಂದುವರೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment