/newsfirstlive-kannada/media/post_attachments/wp-content/uploads/2025/05/ksca-eletion-2.jpg)
ಇಂದು ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷ ಚುನಾವಣೆಯಲ್ಲಿ ಕೆಎಸ್ಸಿಎ ಪಿಚ್ ಕ್ಯೂರೇಟರ್ ಕೆ.ಶ್ರೀರಾಮ್ ಗೆಲುವು ಸಾಧಿಸಿದ್ದಾರೆ. ಉಮಾ ಮಹೇಶ್ವರ್ ವಿರುದ್ಧ 327 ಮತಗಳ ಅಂತರದಲ್ಲಿ ಶ್ರೀರಾಮ್ ಜಯಗಳಿಸಿದ್ದಾರೆ. ಮುಂದಿನ 5ರಿಂದ 6 ತಿಂಗಳ ಅವಧಿಗೆ ಶ್ರೀರಾಮ್ ಉಪಾಧ್ಯಕ್ಷ ಸ್ಥಾನದಲ್ಲಿರಲಿದ್ದಾರೆ. ಬಿ.ಕೆ ಸಂಪತ್ ಕುಮಾರ್ ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತು.
ಚುನಾವಣೆಯಲ್ಲಿ ಒಟ್ಟು 705 ಮತಗಳು ಚಲಾವಣೆಯಾಗಿತ್ತು. ಈ ಪೈಕಿ ಕೆ. ಶ್ರೀರಾಮ್ 516 ಮತ ಪಡೆದುಕೊಂಡ್ರೆ, ಉಮಾ ಮಹೇಶ್ವರ್ 189 ಮತ ಪಡೆದುಕೊಂಡರು. ಉಮಾ ಮಹೇಶ್ವರ್ ಏಕಾಂಗಿಯಾಗಿ 189 ಮತಗಳನ್ನ ಪಡೆದುಕೊಂಡ ಬೆನ್ನಲ್ಲೇ, ಇದು ನವೆಂಬರ್ನಲ್ಲಿ ನಡೆಯೋ ಮುಖ್ಯ ಚುನಾವಣೆಯ ಟ್ರೆಂಡ್ ಸೆಟ್ ಮಾಡಿದೆ ಎಂದು ಕೆಎಸ್ಸಿಎ ವಲಯದಲ್ಲಿ ಚರ್ಚೆ ನಡೀತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ