/newsfirstlive-kannada/media/post_attachments/wp-content/uploads/2025/06/harshit-patel.jpg)
ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 270ಕ್ಕೂ ಹೆಚ್ಚು ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ಲೈನರ್ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಅದರಲ್ಲಿ ಅಚ್ಚರಿ ಎಂಬಂತೆ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್ ಮಾತ್ರ ಬದುಕಿ ಬಂದಿದ್ದಾರೆ.
ಇದನ್ನೂ ಓದಿ:ಬರೀ ‘‘MAYDAY.. MAYDAY’ ಅಲ್ಲ.. ಪತನದ ಕೊನೆ ಕ್ಷಣದಲ್ಲಿ ಪೈಲಟ್ ಹೇಳಿದ್ದೇನು? ಥ್ರಸ್ಟ್ ಅಂದರೇನು..?
ಇನ್ನೂ, ಈ ದುರಂತದಲ್ಲಿ ಲಂಡನ್ನಲ್ಲಿದ್ದ ಮಗ ಹಾಗೂ ಸೊಸೆಯನ್ನು ಕಳೆದುಕೊಂಡು ಕುಟುಂಬ ಕಣ್ಣೀರು ಹಾಕುತ್ತಿದೆ. ಹೌದು, ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಪತನ ದುರಂತದಲ್ಲಿ ಅನೀಲ್ ಪಟೇಲ್ ಅವರ ಪುತ್ರ ಹರ್ಷಿತ್ ಹಾಗೂ ಅವರ ಪತ್ನಿ ಪೂಜಾ ನಿಧನರಾಗಿದ್ದಾನೆ. ಡಿಎನ್ಎ ಮಾದರಿ ನೀಡಿರುವ ಪಟೇಲ್ ಆಸ್ಪತ್ರೆಯಲ್ಲಿ ಮಗ-ಸೊಸೆಯ ಶವಗಳ ಹಸ್ತಾಂತರಕ್ಕೆ ಕಾಯುತ್ತಿದ್ದಾರೆ.
ಇದೇ ವೇಳೆ ನ್ಯೂಸ್ಫಸ್ಟ್ನೊಂದಿಗೆ ಮಾತಾಡಿದ ಅವರು, ಎರಡು ವರ್ಷಗಳ ಬಳಿಕ ನನಗೆ ಹೇಳದೇ ಭಾರತಕ್ಕೆ ಬಂದು ಸರ್ಪ್ರೈಸ್ ಕೊಟ್ಟಿದ್ದರು. ಹರ್ಷಿತ್ ಪಟೇಲ್ ಲಂಡನ್ನಲ್ಲಿ ಇಂಜಿನಿಯರ್ ಆಗಿ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಪತ್ನಿ ಪೂಜಾ ಪಟೇಲ್ ಪ್ರಗ್ನೆನ್ಸಿ ಮಿಸ್ ಕ್ಯಾರಿಯೇಜ್ ಆಗಿತ್ತು. ಹೀಗಾಗಿ ಚಿಕಿತ್ಸೆಗಾಗಿ ಅಹಮದಾಬಾದ್ಗೆ ಹತ್ತು ದಿನದ ಹಿಂದೆ ಬಂದಿದ್ದರು. ನನ್ನೊಂದಿಗೆ ಸಂತಸದಿಂದ ಕಾಲ ಕಳೆದ ಬಳಿಕ ಮತ್ತೆ ಜೂನ್ 12ರಂದು ಗುರುವಾರ ಲಂಡನ್ಗೆ ಹೋಗುವಾಗ ನಾವೆಲ್ಲಾ ಏರ್ ಪೋರ್ಟ್ಗೆ ಡ್ರಾಪ್ ಮಾಡಿ ಬಂದಿದ್ದೇವು. ಬಳಿಕ ಮಗ ಹಾಗೂ ಸೊಸೆ ವಿಮಾನದಲ್ಲಿ ಕುಳಿತಾಗ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಅದೇ ಕೊನೆಯ ವಿಡಿಯೋ ಕಾಲ್. ಆ ಒಂದೇ ನಿಮಿಷದಲ್ಲಿ ವಿಮಾನ ಪತನಗೊಂಡಿದೆ ಅಂತ ತಮ್ಮ ನೋವು ತೋಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ