ಲೋಕ ಸಭಾ ಚುನಾವಣೆ ಹಿನ್ನೆಲೆ ರೋಡ್ ಶೋ ಹಮ್ಮಿಕೊಂಡಿದ್ದ ಮೋದಿ
ಪ್ರಧಾನಿ ನರೇಂದ್ರ ಮೋದಿ ಕಾಣುವ ತವಕದಲ್ಲಿ ಕಿಕ್ಕಿರಿದು ಸೇರಿದ್ದ ಜನರು
ಮೋದಿ ರೋಡ್ ಶೋ ವೇಳೆ ಜನರಿದ್ದ ವೇದಿಕೆ ಕುಸಿದು ಹಲವರಿಗೆ ಗಾಯ
ಮಧ್ಯ ಪ್ರದೇಶ: ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ವೇಳೆ ವೇದಿಕೆ ಕುಸಿದು ಹಲವಾರು ಜನರು ಗಾಯಗೊಂಡ ಘಟನೆ ಜಬಲ್ಪುರದಲ್ಲಿ ಭಾನುವಾರದಂದು ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಲೋಕ ಸಭಾ ಚುನಾವಣೆ ಹಿನ್ನೆಲೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ಭಾನುವಾರ ಪ್ರಧಾನಿ ಮೋದಿ ರೋಡ್ ಶೋ ಹಮ್ಮಿಕೊಂಡಿದ್ದರು. ಮಧ್ಯ ಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಜಬಲ್ಫುರ ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಆಶಿಶ್ ದುಬೆ, ರಾಜ್ಯ ಕ್ಯಾಬಿನೆಟ್ ಸಚಿವ ರಾಕೇಶ್ ಸಿಂಗ್ ಈ ರೋಡ್ಶೋನಲ್ಲಿ ಮೋದಿ ಜೊತೆಗೆ ಉಪಸ್ಥಿತರಿದ್ದರು.
ಇದನ್ನು ಕಾಣುವ ತವಕದಲ್ಲಿ ಅನೇಕ ಜನರು ನೆರೆದಿದ್ದರು. ಈ ವೇಳೆ ಜನರಿದ್ದ ವೇದಿಕೆ ಕುಸಿದಿದೆ. ಓರ್ವ ಪೊಲೀಸ್ ಸಿಬ್ಬಂಧಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿ ಆಗಬೇಕು.. ಬೆರಳನ್ನೇ ಕತ್ತರಿಸಿ ಕಾಳಿಗೆ ಅರ್ಪಿಸಿದ ಅಭಿಮಾನಿ; ಆಮೇಲೇನಾಯ್ತು?
ಪೊಲೀಸ್ ಅಧಿಕಾರಿ ದಿಲೀಪ್ ಶ್ರೀವಾಸ್ತವ ಘಟನೆ ಬಗ್ಗೆ ಮಾತನಾಡಿದ್ದು, ‘ಮೋದಿ ರ್ಯಾಲಿ ಹಾದು ಹೋದ ಬಳಿಕ ಜನದಟ್ಟಣೆಯಿಂದ ವೇದಿಕೆ ಕುಸಿದಿದೆ. ಓರ್ವ ಪೊಲೀಸ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದವರನ್ನು ವಿಕ್ಟೋರಿಯಾಗೆ ಸೇರಿಸಲಾಗಿದೆ’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಲೋಕ ಸಭಾ ಚುನಾವಣೆ ಹಿನ್ನೆಲೆ ರೋಡ್ ಶೋ ಹಮ್ಮಿಕೊಂಡಿದ್ದ ಮೋದಿ
ಪ್ರಧಾನಿ ನರೇಂದ್ರ ಮೋದಿ ಕಾಣುವ ತವಕದಲ್ಲಿ ಕಿಕ್ಕಿರಿದು ಸೇರಿದ್ದ ಜನರು
ಮೋದಿ ರೋಡ್ ಶೋ ವೇಳೆ ಜನರಿದ್ದ ವೇದಿಕೆ ಕುಸಿದು ಹಲವರಿಗೆ ಗಾಯ
ಮಧ್ಯ ಪ್ರದೇಶ: ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ವೇಳೆ ವೇದಿಕೆ ಕುಸಿದು ಹಲವಾರು ಜನರು ಗಾಯಗೊಂಡ ಘಟನೆ ಜಬಲ್ಪುರದಲ್ಲಿ ಭಾನುವಾರದಂದು ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಲೋಕ ಸಭಾ ಚುನಾವಣೆ ಹಿನ್ನೆಲೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ಭಾನುವಾರ ಪ್ರಧಾನಿ ಮೋದಿ ರೋಡ್ ಶೋ ಹಮ್ಮಿಕೊಂಡಿದ್ದರು. ಮಧ್ಯ ಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಜಬಲ್ಫುರ ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಆಶಿಶ್ ದುಬೆ, ರಾಜ್ಯ ಕ್ಯಾಬಿನೆಟ್ ಸಚಿವ ರಾಕೇಶ್ ಸಿಂಗ್ ಈ ರೋಡ್ಶೋನಲ್ಲಿ ಮೋದಿ ಜೊತೆಗೆ ಉಪಸ್ಥಿತರಿದ್ದರು.
ಇದನ್ನು ಕಾಣುವ ತವಕದಲ್ಲಿ ಅನೇಕ ಜನರು ನೆರೆದಿದ್ದರು. ಈ ವೇಳೆ ಜನರಿದ್ದ ವೇದಿಕೆ ಕುಸಿದಿದೆ. ಓರ್ವ ಪೊಲೀಸ್ ಸಿಬ್ಬಂಧಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿ ಆಗಬೇಕು.. ಬೆರಳನ್ನೇ ಕತ್ತರಿಸಿ ಕಾಳಿಗೆ ಅರ್ಪಿಸಿದ ಅಭಿಮಾನಿ; ಆಮೇಲೇನಾಯ್ತು?
ಪೊಲೀಸ್ ಅಧಿಕಾರಿ ದಿಲೀಪ್ ಶ್ರೀವಾಸ್ತವ ಘಟನೆ ಬಗ್ಗೆ ಮಾತನಾಡಿದ್ದು, ‘ಮೋದಿ ರ್ಯಾಲಿ ಹಾದು ಹೋದ ಬಳಿಕ ಜನದಟ್ಟಣೆಯಿಂದ ವೇದಿಕೆ ಕುಸಿದಿದೆ. ಓರ್ವ ಪೊಲೀಸ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದವರನ್ನು ವಿಕ್ಟೋರಿಯಾಗೆ ಸೇರಿಸಲಾಗಿದೆ’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ