ಯುದ್ಧ ಘೋಷಣೆ ಆಗೇಬಿಡುತ್ತಾ..? ನಾಳೆ ಪ್ರಧಾನಿ ಮೋದಿಯಿಂದ ಮಹತ್ವದ ನಿರ್ಧಾರ ಸಾಧ್ಯತೆ

author-image
Ganesh
Updated On
ಪಾಕ್​ ಅಣ್ವಸ್ತ್ರ ಬಳಸಿದ್ರೆ ಅದರ ಅಂತ್ಯ ಅದೇ ಆಹ್ವಾನಿಸಿಕೊಂಡಂತೆ.. 3 ಹಂತದಲ್ಲಿ ಪಾಕ್​ನ ಅಂತ್ಯ..!
Advertisment
  • ಭಾರತ ಪಾಕ್ ಮಧ್ಯೆ ಯುದ್ಧದ ವಾತಾವರಣ
  • ಗಡಿಯಲ್ಲಿ ಕ್ಷಣ ಕ್ಷಣಕ್ಕೂ ಬಿಕ್ಕಟ್ಟು ಜೋರಾಗಿದೆ
  • ಕೇಂದ್ರ ಭದ್ರತಾ ಮಂಡಳಿಯ ಸಭೆ ಕರೆದ ಮೋದಿ

ಪ್ರಧಾನಿ ನರೇಂದ್ರ ಮೋದಿ ನಾಳೆ ಕೇಂದ್ರ ಭದ್ರತಾ ಮಂಡಳಿಯ ಸಭೆ ಕರೆದಿದ್ದಾರೆ. ಮತ್ತೊಂದು ಬಾರಿಗೆ ಕೇಂದ್ರ ಭದ್ರತಾ ಮಂಡಳಿ ಸಭೆ ನಡೆಸಲಿದ್ದು, ಸಭೆಯಲ್ಲಿ ದೇಶದ ಆಂತರಿಕ ಮತ್ತು ಗಡಿ ಭಾಗದಲ್ಲಿನ ಭದ್ರತೆಯ ಜೊತೆಗೆ ದೇಶದ ರಕ್ಷಣಾ ಒಪ್ಪಂದಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.

ಈ ಸಭೆಯಲ್ಲಿ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಜೈಶಂಕರ್, ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ದೇಶದ 244 ಜಿಲ್ಲೆಗಳಲ್ಲಿ ನಾಳೆ ಮಾಕ್​ ಡ್ರಿಲ್.. ಈ ಯುದ್ಧ ಕವಾಯತ್​​ನ ಉದ್ದೇಶ ಏನು..?

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಕರಿಛಾಯೆ ಜೋರಾಗ್ತಿದೆ. ಹೀಗಾಗಿ ಮೊನ್ನೆ ಪಂಜಾಬ್​ ಗಡಿಯಲ್ಲಿ ಸೇನೆ ಮಾಕ್​ ಡ್ರಿಲ್ ಮಾಡಿದಂತೆ ದೇಶಾದ್ಯಂತ ಮಾಕ್​ ಡ್ರಿಲ್​​ ಮಾಡಲು ಸರ್ಕಾರ ಆಜ್ಞೆ ಹೊರಡಿಸಿದೆ. ಜಿಲ್ಲೆಗಳಿಂದ ಹಳ್ಳಿವರೆಗೂ ಈ ಕವಾಯತು ನಡೆಸಲು ಸೂಚಿಸಲಾಗಿದೆ. ಈ ನಡುವೆ ಮತ್ತೆ ನಾಳೆ ಮೋದಿ ಸಭೆ ಕರೆದಿರೋದು ಭಾರೀ ಕುತೂಹಲ ಮೂಡಿಸಿದೆ. ಪಾಕ್ ವಿರುದ್ಧ ಮಿಲಿಟರಿ ಆಪರೇಷನ್ ನಡೆಯೋದು ಪಕ್ಕಾ ಆಗ್ತಿದೆ ಅಂತಾ ಹಲವರು ಮಾತಾಡಿಕೊಳ್ತಿದ್ದಾರೆ.

ಇದನ್ನೂ ಓದಿ: ನಾಗರಿಕರ ಸ್ವಯಂ ರಕ್ಷಣೆಗಾಗಿ ಮಾಕ್​ ಡ್ರಿಲ್.. ದೇಶದಲ್ಲಿ ನಾಳೆ ಏನೆಲ್ಲ ನಡೆಯಲಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment